ಆ್ಯಪ್ನಗರ

ಶಾಲೆ ಪ್ರಾರಂಭೋತ್ಸವದ ಅಕ್ಷ ರ ಜಾತ್ರೆಗೆ ಚಾಲನೆ

ಅಂಕೋಲಾ : ಕನ್ನಡ ಮಾಧ್ಯಮ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಪಾಲಕರು ಅಸಡ್ಡೆ ಮನೋಭಾವ ತೊರಿಸುತ್ತಿರುವದು ಖೇಧಕರ. ಸರಕಾರಿ ಶಾಲೆಗಳಲ್ಲೂ ಸಹ ಗುಣಮಟ್ಟದ ಹಾಗೂ ಸಂಸ್ಕಾರ ಮನೋಭಾವದ ಶಿಕ್ಷ ಣ ದೊರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಶಾಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ 'ನಮ್ಮ ನಡೆ ಕನ್ನಡ ಶಾಲೆಯ ಕಡೆ' ಎಂಬ ಧ್ಯೇಯವನ್ನು ಪ್ರತಿಯೊಬ್ಬರು ಪಾಲಿಸುವಂತಾಗಬೇಕು ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.

Vijaya Karnataka 30 May 2019, 5:00 am
ಅಂಕೋಲಾ : ಕನ್ನಡ ಮಾಧ್ಯಮ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಪಾಲಕರು ಅಸಡ್ಡೆ ಮನೋಭಾವ ತೊರಿಸುತ್ತಿರುವದು ಖೇಧಕರ. ಸರಕಾರಿ ಶಾಲೆಗಳಲ್ಲೂ ಸಹ ಗುಣಮಟ್ಟದ ಹಾಗೂ ಸಂಸ್ಕಾರ ಮನೋಭಾವದ ಶಿಕ್ಷ ಣ ದೊರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಶಾಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ 'ನಮ್ಮ ನಡೆ ಕನ್ನಡ ಶಾಲೆಯ ಕಡೆ' ಎಂಬ ಧ್ಯೇಯವನ್ನು ಪ್ರತಿಯೊಬ್ಬರು ಪಾಲಿಸುವಂತಾಗಬೇಕು ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.
Vijaya Karnataka Web KWR-29ANK1


ಬೇಲೆಕೇರಿ ಖಾರ್ವಿವಾಡೆಯ ಮಾಹಿಪ್ರಾ ಶಾಲೆಯಲ್ಲಿ ಜಿಪಂ ಉತ್ತರ ಕನ್ನಡ, ತಾಪಂ ಅಂಕೋಲಾ, ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಾರ್ಯಾಲಯ ಅಂಕೋಲಾ ಹಾಗೂ ಪದ ನಿಮಿತ್ತ ಬ್ಲಾಕ್‌ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ' ಶಾಲಾ ಪ್ರಾರಂಭೋತ್ಸವ ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೇಲೆಕೇರಿ ಗ್ರಾಪಂ ಅಧ್ಯಕ್ಷೆ ಸವಿತಾ ಕೃಷ್ಣಾ ಬಾನಾವಳಿಕರ ಅಧ್ಯಕ್ಷ ತೆವಹಿಸಿ ಮಾತನಾಡಿ, ಶಾಲೆಗೆ ಅಗತ್ಯವಿರುವ ನೀರಿನ ಸೌಲಭ್ಯವನ್ನು ಗ್ರಾಪಂ ವತಿಯಿಂದ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದರು.

ಜಿಪಂ ಸದಸ್ಯೆ ಉಷಾ ಉದಯ ನಾಯ್ಕ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ. ಬೇಳಾ, ಸದಸ್ಯ ಸಂಜೀವ ಕುಚನಾಡ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ ಬಾನಾವಳಿಕರ, ಅಕ್ಷ ರ ದಾಸೋಹದ ಸಹಾಯಕ ನಿರ್ದೇಶಕ ಚಂದ್ರಹಾಸ ರಾಯ್ಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷ ಣಾಧಿಕಾರಿ ಶ್ಯಾಮಲಾ ನಾಯಕ ಸ್ವಾಗತಿಸಿದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಉಪಾಧ್ಯಕ್ಷೆ, ಶಿಕ್ಷ ಕಿ ಚಂದ್ರಕಲಾ ನಾಯಕ ನಿರೂಪಿಸಿದರು. ಮುಖ್ಯಾಧ್ಯಾಪಕ ಮಹೇಶ ಬಂಟ ವಂದಿಸಿದರು.

ತಾಲೂಕು ದೈಹಿಕ ಶಿಕ್ಷ ಣ ಪರೀವಿಕ್ಷ ಕ ಎನ್‌.ವಿ. ನಾಯಕ, ಬಿಆರ್‌ಸಿ ಸಮನ್ವಯಾಧಿಕಾರಿ ರಾಘವೇಂದ್ರ ನಾಯ್ಕ, ಗ್ರಾಪಂ ಸದಸ್ಯೆ ಅನುಸೂಯಾ ಬಾನಾವಳಿಕರ, ಬೇಲೆಕೇರಿ ಕ್ಲಸ್ಟ್‌ರನ ಸಿಆರ್‌ಪಿ ಶೋಭಾ ನಾಯ್ಕ, ಎಸ್‌ಡಿಎಂಸಿ ಸದಸ್ಯ ಪುರುಷೋತ್ತಮ ನಾಯ್ಕ, ಶಿಕ್ಷ ಕರಾದ ಪ್ರೇಮಾ ಗಾಂವಕರ, ಶ್ಯಾಮಲಾ ನಾಯ್ಕ, ಪುಷ್ಪಾ ನಾಯಕ, ಮಾಲತಿ ನಾಯಕ, ರೇಖಾ ನಾಯ್ಕ, ಜಯಲಕ್ಷ್ಮೀ ನಾಯಕ, ವೆಂಕಟರಮಣ ನಾಯಕ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ