ಗ್ರಾಮೀಣ ಕೃಪಾಂಕ: ಆದೇಶ ಪಾಲನೆಗೆ ಮನವಿ
ಮುಂಡಗೋಡ : ಗ್ರಾಮೀಣ ಕೃಪಾಂಕ ನೌಕರರಿಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿದ ಆದೇಶ ಪಾಲನೆ ಮಾಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದವರು ಕ್ಷೇತ್ರ ಶಿಕ್ಷ ಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
Vijaya Karnataka 20 Mar 2019, 5:00 am
ಮುಂಡಗೋಡ : ಗ್ರಾಮೀಣ ಕೃಪಾಂಕ ನೌಕರರಿಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿದ ಆದೇಶ ಪಾಲನೆ ಮಾಡುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದವರು ಕ್ಷೇತ್ರ ಶಿಕ್ಷ ಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮೀಣ ಕೃಪಾಂಕ ಸೌಲಭ್ಯದೊಂದಿಗೆ ಸೇವೆಗೆ ಸೆರ್ಪಡೆಯಾಗಿರುವ 5017 ಶಿಕ್ಷ ಕರಿಗೆ 1998ರಿಂದ 2003ರ ವರೆಗಿನ ಸೇವೆಯನ್ನು ಸಂರಕ್ಷಿಸುವ ಮತ್ತು ಮರು ನೇಮಕಾತಿ ಮಾಡುವಾಗ ಅವರ ಜಾಗದಲ್ಲಿ ನಗರ ಪ್ರದೇಶದ ಅಭ್ಯರ್ಥಿಗಳು ಬರದೆ ಇದ್ದ ಪಕ್ಷ ದಲ್ಲಿ ಗ್ರಾಮೀಣ ಅಭ್ಯರ್ಥಿಗಳನ್ನು ಮುಂದುವರೆಸುವ ಬಗ್ಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಫೆ.13, 2019ರಂದು ನೀಡಿರುವ ತೀರ್ಪನ್ನು ಎತ್ತಿ ಹಿಡಿದು ತಾಲೂಕಿನ ಗ್ರಾಮೀಣ ಕೃಪಾಂಕ ನೌಕರರಿಗೆ ಸೌಲಭ್ಯ ನೀಡುವಂತೆ ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ತಾಲೂಕಾಧ್ಯಕ್ಷ ಪ್ರದೀಪ ಕುಲಕರ್ಣಿ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಭಾಸ ಡೋರಿ, ಹರಿ ನಾಯ್ಕ, ಮಾಲತಿ ಪಾಳೇದವರ, ವಸುಂಧರಾ ಹೊಸ್ಕೇರಿ, ಬಾಲಚಂದ್ರ ಹೆಗಡೆ, ಚಂದ್ರಶೇಖರ ಹೆಗಡೆ ಸೇರಿದಂತೆ ಮುಂತಾದವರಿದ್ದರು.
ಗ್ರಾಮೀಣ ಕೃಪಾಂಕ ಸೌಲಭ್ಯದೊಂದಿಗೆ ಸೇವೆಗೆ ಸೆರ್ಪಡೆಯಾಗಿರುವ 5017 ಶಿಕ್ಷ ಕರಿಗೆ 1998ರಿಂದ 2003ರ ವರೆಗಿನ ಸೇವೆಯನ್ನು ಸಂರಕ್ಷಿಸುವ ಮತ್ತು ಮರು ನೇಮಕಾತಿ ಮಾಡುವಾಗ ಅವರ ಜಾಗದಲ್ಲಿ ನಗರ ಪ್ರದೇಶದ ಅಭ್ಯರ್ಥಿಗಳು ಬರದೆ ಇದ್ದ ಪಕ್ಷ ದಲ್ಲಿ ಗ್ರಾಮೀಣ ಅಭ್ಯರ್ಥಿಗಳನ್ನು ಮುಂದುವರೆಸುವ ಬಗ್ಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಫೆ.13, 2019ರಂದು ನೀಡಿರುವ ತೀರ್ಪನ್ನು ಎತ್ತಿ ಹಿಡಿದು ತಾಲೂಕಿನ ಗ್ರಾಮೀಣ ಕೃಪಾಂಕ ನೌಕರರಿಗೆ ಸೌಲಭ್ಯ ನೀಡುವಂತೆ ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ತಾಲೂಕಾಧ್ಯಕ್ಷ ಪ್ರದೀಪ ಕುಲಕರ್ಣಿ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಭಾಸ ಡೋರಿ, ಹರಿ ನಾಯ್ಕ, ಮಾಲತಿ ಪಾಳೇದವರ, ವಸುಂಧರಾ ಹೊಸ್ಕೇರಿ, ಬಾಲಚಂದ್ರ ಹೆಗಡೆ, ಚಂದ್ರಶೇಖರ ಹೆಗಡೆ ಸೇರಿದಂತೆ ಮುಂತಾದವರಿದ್ದರು.