ಹಳಿಯಾಳ: ಕಲಾಶ್ರೀ ಯಕ್ಷ ರಂಗ ಬಳಗ ಜಲವಳ್ಳಿ ಮೇಳದ ಅತಿಥಿ ಕಲಾವಿದನಾಗಿ ಬಣ್ಣ ಹಚ್ಚಿದ ಶ್ರೀ ಚಂದ್ರಹಾಸ ಹುಡಗೋಡ ಇವರು ಯಕ್ಷ ಗಾನ ಅಭಿನಯದ ಸಂದರ್ಭದಲ್ಲಿಯೇ ವೇದಿಕೆಯ ಮೇಲೆ ಹೃದಯಘಾತದಿಂದ ಕುಸಿದು ಬಿದ್ದು, ವಿಧಿವಶರಾದ ವಿಷಯ ಬಹಳ ದುಃಖಕರ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಯಕ್ಷ ಗಾನದ ಸಂದರ್ಭದಲ್ಲಿ ಗೆಜ್ಜೆ ಕಟ್ಟಿ ರಂಗ ಸಜ್ಜಿಕೆಯಲ್ಲಿ ಕುಣಿಯುತ್ತಲೇ ಕಲಾಮಾತೆಗೆ ಪ್ರಾಣ ಅರ್ಪಿಸಿದ 'ಕಲಾಶ್ರೀ ಯಕ್ಷ ಬಳಗದ' ಯಜಮಾನನನ್ನು ಯಕ್ಷಾಭಿಮಾನಿಗಳು ಕಳೆದುಕೊಂಡಂತಾಗಿದೆ. ಇವರ ನಿಧನದಿಂದ ಯಕ್ಷ ಗಾನ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ದು:ಖ ಭರಿಸುವ ಶಕ್ತಿ ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಹುಡಗೋಡ ಅಗಲಿಕೆಗೆ ಆರ್ವಿಡಿ ಸಂತಾಪ
ಹಳಿಯಾಳ: ಕಲಾಶ್ರೀ ಯಕ್ಷ ರಂಗ ಬಳಗ ಜಲವಳ್ಳಿ ಮೇಳದ ಅತಿಥಿ ಕಲಾವಿದನಾಗಿ ಬಣ್ಣ ಹಚ್ಚಿದ ಶ್ರೀ ಚಂದ್ರಹಾಸ ಹುಡಗೋಡ ಇವರು ಯಕ್ಷ ಗಾನ ಅಭಿನಯದ ಸಂದರ್ಭದಲ್ಲಿಯೇ ವೇದಿಕೆಯ ಮೇಲೆ ಹೃದಯಘಾತದಿಂದ ಕುಸಿದು ಬಿದ್ದು, ವಿಧಿವಶರಾದ ವಿಷಯ ಬಹಳ ದುಃಖಕರ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಯಕ್ಷ ಗಾನದ ಸಂದರ್ಭದಲ್ಲಿ ಗೆಜ್ಜೆ ಕಟ್ಟಿ ರಂಗ ಸಜ್ಜಿಕೆಯಲ್ಲಿ ಕುಣಿಯುತ್ತಲೇ ಕಲಾಮಾತೆಗೆ ಪ್ರಾಣ ಅರ್ಪಿಸಿದ 'ಕಲಾಶ್ರೀ ಯಕ್ಷ ಬಳಗದ' ಯಜಮಾನನನ್ನು ಯಕ್ಷಾಭಿಮಾನಿಗಳು ಕಳೆದುಕೊಂಡಂತಾಗಿದೆ. ಇವರ ನಿಧನದಿಂದ ಯಕ್ಷ ಗಾನ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ದು:ಖ ಭರಿಸುವ ಶಕ್ತಿ ಕರುಣಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
Vijaya Karnataka 13 Mar 2019, 5:00 am