ಆ್ಯಪ್ನಗರ

ದಾಂಡೇಲಿಯಲ್ಲಿ ಸಹ್ಯಾದ್ರಿ ಸಂಭ್ರಮ ಇಂದು

ದಾಂಡೇಲಿ : ನಗರದ ಸಹ್ಯಾದ್ರಿ ಶಿಕ್ಷ ಣ ಸಂಸ್ಥೆಯ ಅಂಗ ಸಂಸ್ಥೆ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ವಾರ್ಷಿಕೋತ್ಸವ 'ಸಹ್ಯಾದ್ರಿ ಸಂಭ್ರಮ-2019' ಕಾರ್ಯಕ್ರಮವು ಏ.2ರಂದು ಸಂಜೆ 5.30ಕ್ಕೆ ಬಂಗೂರನಗರ ರಂಗನಾಥ ಸಭಾಂಗಣದಲ್ಲಿ ನಡೆಯಲಿದೆ.

Vijaya Karnataka 2 Apr 2019, 5:00 am
ದಾಂಡೇಲಿ : ನಗರದ ಸಹ್ಯಾದ್ರಿ ಶಿಕ್ಷ ಣ ಸಂಸ್ಥೆಯ ಅಂಗ ಸಂಸ್ಥೆ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ವಾರ್ಷಿಕೋತ್ಸವ 'ಸಹ್ಯಾದ್ರಿ ಸಂಭ್ರಮ-2019' ಕಾರ್ಯಕ್ರಮವು ಏ.2ರಂದು ಸಂಜೆ 5.30ಕ್ಕೆ ಬಂಗೂರನಗರ ರಂಗನಾಥ ಸಭಾಂಗಣದಲ್ಲಿ ನಡೆಯಲಿದೆ.
Vijaya Karnataka Web KWR-1-DND1
ನೃತ್ಯಲೀನ ಕಲಾವಿದರು.


ಸಹ್ಯಾದ್ರಿ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಬಿ.ಎನ್‌.ವಾಸರೆ ಅಧ್ಯಕ್ಷ ತೆ ವಹಿಸಲಿರುವ ಕಾರ್ಯಕ್ರವನ್ನು ಗಣ್ಯರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಧಾರವಾಡದ ವಿದೂಶಿ ಪ್ರಮೋದಾ ಉಪಾದ್ಯಾಯ ನಟವಾಂಗ ಮತ್ತು ಗಾಯನ ಪ್ರಸ್ತುತಿ ಪಡಿಸಲಿದ್ದಾರೆ. ಧಾರವಾಡ ಪಂಚಮ ಉಪಾದ್ಯಾಯ ಮೃದಂಗ ನುಡಿಸಿದರೆ, ಪಂಡಿತ್‌ ಶಂಕರ ಕಬಾಡಿ ಪಿಟೀಲು, ವೈಭವ್‌ ಭಟ್ಟ ಕೊಳಲು ನುಡಿಸಲಿದ್ದಾರೆ. ನೃತ್ಯ ಗುರುಗಳಾದ ಸುನೀಲ ಯರಗಟ್ಟಿ, ಪಲ್ಲವಿ ಯರಗಟ್ಟಿಯವರು ನೃತ್ಯ ಸಂಯೋಜನೆ ಮಾಡಿದ್ದಾರೆ.

ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಭರತ ನಾಟ್ಯ, ಕಥಕ್‌, ಕುಚಿಪುಡಿ, ಜನಪದ ನೃತ್ಯ ಹಾಗೂ ಸಿನಿಮಾ ಹಾಡುಗಳ ನೃತ್ಯ ಪ್ರದರ್ಶನಗೊಳ್ಳಲಿದೆ. ಗುರುವಂದನೆ, ನೃತ್ಯ ಗುರುಗಳಾದ ಸುನೀಲ ಯರಗಟ್ಟಿ ಹಾಗೂ ಪಲ್ಲವಿ ಯರಗಟ್ಟಿಯವರಿಂದ ನೃತ್ಯ, ಹಳಿಯಾಳದ ದುರ್ಗಾ ನಾಟ್ಯ ಕಲಾ ಸಂಘದಿಂದ ನೃತ್ಯ, ಅಮೃತಾ ಹೆಗಡೆಯವರಿಂದ ಕಾವ್ಯ-ಕುಂಚ, ಹಾಗೂ ನಗರದ ಹಲವು ಕರೋಕೆ ಕಲಾವಿದರಿಂದ ಇಂಪಾದ ಕರೋಕೆ ಗಾಯನ ಪ್ರಸ್ತುತವಾಗಲಿದೆ.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಭಾಗವಹಿಸುವಂತೆ ಸಹ್ಯಾದ್ರಿ ಲಲಿತ ಕಲಾ ಕೇಂದ್ರದ ಸಂಯೋಜಕಿ ಜಲಜಾ ಬಿ. ವಾಸರೆ ಹಾಗೂ ವಿದ್ಯಾರ್ಥಿ ಪಾಲಕರು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ