ಆ್ಯಪ್ನಗರ

ಬೀದಿ ವ್ಯಾಪಾರಗಳಿಗೆ ಮಾರಾಟ ಪ್ರಮಾಣಪತ್ರ

ಕೃಷ್ಣಮೂರ್ತಿ ಟಿ.ಕೆರೆಗದ್ದೆ ಶಿರಸಿ: ಈಗಾಗಲೇ ಸಮೀಕ್ಷೆ ಮೂಲಕ ಗುರುತಿಸಲ್ಪಟ್ಟ ಅರ್ಹ ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಜತೆ ಪ್ರಮಾಣಪತ್ರವನ್ನೂ ಒದಗಿಸಬೇಕಿದೆ. ಸ್ಥಳೀಯ ಸಂಸ್ಥೆಗಳಿಗೆ ಈ ಬಗ್ಗೆ ಹೊಸದಾಗಿ ಸೂಚನೆ ಬಂದಿದೆ. ನಗರ ಸ್ಥಳೀಯ ಸಂಸ್ಥೆಗಳ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಪ್ರಮಾಣಪತ್ರ ನೀಡಲು ಬೀದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ, ಮತ್ತು ನಿಯಂತ್ರಣ ಅಧಿನಿಯಮ 2014ರನ್ವಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಉದ್ಯಮಶೀಲತೆ ಮತ್ತು ಜೀವನೋಪಾಯ ಆಯುಕ್ತಾಲಯದಿಂದ ಈ ಸೂಚನೆ ಹೊರಬಿದ್ದಿದೆ.

Vijaya Karnataka 17 Sep 2019, 5:00 am
ಕೃಷ್ಣಮೂರ್ತಿ ಟಿ.ಕೆರೆಗದ್ದೆ ಶಿರಸಿ: ಈಗಾಗಲೇ ಸಮೀಕ್ಷೆ ಮೂಲಕ ಗುರುತಿಸಲ್ಪಟ್ಟ ಅರ್ಹ ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಜತೆ ಪ್ರಮಾಣಪತ್ರವನ್ನೂ ಒದಗಿಸಬೇಕಿದೆ. ಸ್ಥಳೀಯ ಸಂಸ್ಥೆಗಳಿಗೆ ಈ ಬಗ್ಗೆ ಹೊಸದಾಗಿ ಸೂಚನೆ ಬಂದಿದೆ. ನಗರ ಸ್ಥಳೀಯ ಸಂಸ್ಥೆಗಳ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಪ್ರಮಾಣಪತ್ರ ನೀಡಲು ಬೀದಿ ವ್ಯಾಪಾರಿಗಳ ಸಂರಕ್ಷಣೆ, ಜೀವನೋಪಾಯ, ಮತ್ತು ನಿಯಂತ್ರಣ ಅಧಿನಿಯಮ 2014ರನ್ವಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಉದ್ಯಮಶೀಲತೆ ಮತ್ತು ಜೀವನೋಪಾಯ ಆಯುಕ್ತಾಲಯದಿಂದ ಈ ಸೂಚನೆ ಹೊರಬಿದ್ದಿದೆ.
Vijaya Karnataka Web sales certificate for street businesses
ಬೀದಿ ವ್ಯಾಪಾರಗಳಿಗೆ ಮಾರಾಟ ಪ್ರಮಾಣಪತ್ರ


ನಗರದ ಬೀದಿ ಬದಿ ವ್ಯಾಪಾರಸ್ಥರು ಗುರುತಿನ ಚೀಟಿ ಪಡೆಯಲು ಪಡಿತರ ಚೀಟಿ ಝರಾಕ್ಸ್‌, ಚುನಾವಣಾ ಗುರುತಿನ ಚೀಟಿ , ಆಧಾರ್‌ ಕಾರ್ಡ್‌ ಪ್ರತಿ, ಹಾಗೂ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ, ಕುಟುಂಬ ಸದಸ್ಯರನ್ನು ಒಳಗೊಂಡ ಛಾಯಾಚಿತ್ರದ ಪ್ರತಿ, ವ್ಯಾಪಾರದ ಸ್ಥಳದ ಚಿತ್ರ, ಜಾತಿ ಪ್ರಮಾಣ ಪತ್ರ, ಬ್ಯಾಂಕ್‌ ಪಾಸ್‌ ಪುಸ್ತಕದ ಝೆರಾಕ್ಸ್‌ ಪ್ರತಿ ಒಳಗೊಂಡು ಅರ್ಜಿ ಸಲ್ಲಿಸಲು ನಗರಸಭೆ ತಿಳಿಸಿತ್ತು. ಈಗಾಗಲೇ ಹಲವು ಅರ್ಜಿಗಳು ನಗರಸಭೆ ಕೈ ಸೇರಿವೆ. ಅವುಗಳನ್ನು ಪರಿಶೀಲಿಸಿ ತಿಂಗಳ ಅವಧಿಯಲ್ಲಿಗುರುತಿನ ಚೀಟಿ ನೀಡಿಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎನ್ನುತ್ತವೆ ನಗರಸಭೆ ಮೂಲಗಳು.

ಶಹರದ ಬೀದಿಯಂಚಿನಲ್ಲಿಹಣ್ಣು, ತರಕಾರಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಇಟ್ಟು ಮಾರಾಟ ನಡೆಸುವ ವ್ಯಾಪಾರಸ್ಥರು ಸಾಕಷ್ಟಿದ್ದಾರೆ. ಸ್ಥಳೀಯರಷ್ಟೇ ಅಲ್ಲದೇ ಹೊರ ಜಿಲ್ಲೆ, ತಾಲೂಕುಗಳಿಂದ ಬಂದು ವ್ಯಾಪಾರ ನಡೆಸುತ್ತಾರೆ. ಆದರೆ ಯಾರು, ಎಲ್ಲಿವ್ಯಾಪಾರ ಮಾಡುತ್ತಾರೆ ಎಂಬ ಮಾಹಿತಿ ಅಧಿಕೃತವಾಗಿಲ್ಲ. ಇದೀಗ ಗುರುತಿನ ಚೀಟಿ, ಪ್ರಮಾಣಪತ್ರ ನೀಡುವುದರಿಂದ ಅವರ ವ್ಯಾಪಾರಕ್ಕೆ ಅಧಿಕೃತತೆ ಬರುತ್ತದೆ. ಇದರ ಜತೆಯಲ್ಲಿಮಾರಾಟಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವುದಕ್ಕೆ ಅಂಕಿಸಂಖ್ಯೆಯ ಮಾಹಿತಿ ದೊರೆಯುತ್ತದೆ.

ಈ ಮಧ್ಯೆ ಬೀದಿ ವ್ಯಾಪಾರಸ್ಥರ ಸಮಿತಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಾಗಿದೆ. ಈ ಮೂಲಕ ಗುರುತಿನ ಚೀಟಿ ಮತ್ತಿತರ ಸೌಲಭ್ಯ ನೀಡುವ ಕಾರ್ಯವನ್ನು ಸಮಿತಿ ಮೂಲಕ ನಡೆಸುವುದಕ್ಕೆ ಅನುಕೂಲವಾಗಲಿದೆ ಎನ್ನುತ್ತವೆ ಮೂಲಗಳು.

200 ಬೀದಿ ವ್ಯಾಪಾರಸ್ಥರು...: ನಗರಸಭೆಯಿಂದ ಕಳೆದ ವರ್ಷ 122 ಮಂದಿಗೆ ಗುರುತಿನ ಚೀಟಿ ನೀಡಲಾಗಿದೆ. ಈ ಬಾರಿ ಇನ್ನಷ್ಟು ಅರ್ಜಿಗಳು ಬಂದಿದ್ದು ನಗರದಲ್ಲಿಒಟ್ಟು 200 ಬೀದಿ ವ್ಯಾಪಾರಸ್ಥರು ಇರುವ ಅಂದಾಜಿದೆ. ತಿಂಗಳ ಅವಧಿಯಲ್ಲಿಗುರುತಿನ ಚೀಟಿ ನೀಡುವ ಪ್ರಕ್ರಿಯೆ ಮುಗಿಸುವ ಉದ್ದೇಶವಿದೆ. ಇದೀಗ ಪ್ರಮಾಣಪತ್ರವನ್ನೂ ನೀಡಬೇಕು ಎಂಬ ಸೂಚನೆ ಬಂದಿದೆ ಎಂದು ನಗರಸಭೆ ವ್ಯವಸ್ಥಾಪಕ ಲಕ್ಷತ್ರ್ಮಣ ವಿ.ನಾಯಕ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ