ಆ್ಯಪ್ನಗರ

ಕಾರವಾರದೊಂದಿಗೆ ಸನದಿ ನಂಟು

ಕಾರವಾರ : ಕುಮಟಾ ಹೆರವಟ್ಟಾದಲ್ಲಿ ವಾಸ್ತವ್ಯವಿದ್ದ ಪ್ರಸಿದ್ಧ ಕವಿ ಬಿ.ಎ.ಸನದಿ ಅವರು ಕಾರವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಬೆಳಗಾವಿಯ ಸಿಂಧೊಳ್ಳಿ ಗ್ರಾಮದವರಾಗಿದ್ದ ಸನದಿ ಅವರು ಕುಮಟಾಕ್ಕೆ ಬಂದು ನೆಲಸಲು ಕಾರಣ ಸಮುದ್ರ ದಂಡೆಯ ಶಾಂತ ವಾತಾವರಣ ಮೇಲಾಗಿ ಅವರ ಪತ್ನಿಯ ಊರಾಗಿತ್ತು.

Vijaya Karnataka 1 Apr 2019, 5:00 am
ಕಾರವಾರ : ಕುಮಟಾ ಹೆರವಟ್ಟಾದಲ್ಲಿ ವಾಸ್ತವ್ಯವಿದ್ದ ಪ್ರಸಿದ್ಧ ಕವಿ ಬಿ.ಎ.ಸನದಿ ಅವರು ಕಾರವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಬೆಳಗಾವಿಯ ಸಿಂಧೊಳ್ಳಿ ಗ್ರಾಮದವರಾಗಿದ್ದ ಸನದಿ ಅವರು ಕುಮಟಾಕ್ಕೆ ಬಂದು ನೆಲಸಲು ಕಾರಣ ಸಮುದ್ರ ದಂಡೆಯ ಶಾಂತ ವಾತಾವರಣ ಮೇಲಾಗಿ ಅವರ ಪತ್ನಿಯ ಊರಾಗಿತ್ತು.
Vijaya Karnataka Web KWR-31GAJA3


ಫೆ.16 ರಂದು ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ನಡೆದ ಕಲ್ಲೂರು ಎಜುಕೇಶನ್‌ ಟ್ರಸ್ಟನ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದ್ದರು. ಇದೇ ಅವರ ಕೊನೆಯ ಸಾರ್ವಜನಿಕ ಸಮಾರಂಭವಾಗಿರುವುದು ವಿಪರ್ಯಾಸ. 2017ರ ಜ.13 ರಂದು ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಪದವಿ ಕಾಲೇಜಿನಲ್ಲಿ ಬಿ.ಎ.ಸನದಿ ಅವರ ಸಾಹಿತ್ಯದ ಹಾದಿ ಮೆಲುಕು ಹಾಕಲೆಂದು ಸಂವಾದ ಮತ್ತು ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಮಾರಂಭದಲ್ಲಿ ಸನದಿ ಅವರು ತಮ್ಮ ಬದುಕಿನ ಹಾದಿಯನ್ನು ವಿದ್ಯಾರ್ಥಿಗಳ ಜೊತೆ ತೆರೆದಿಟ್ಟಿದ್ದರು. ಆ ಸಮಾರಂಭದ ನೆನಪುಗಳನ್ನು ಅವರ 'ಮನದಾಳದ ಅಲೆಗಳು' ಕೃತಿಯಲ್ಲಿ ಸನದಿ ಅವರು ಸ್ಮರಿಸಿಕೊಂಡಿದ್ದಾರೆ. ಆ ಸಮಾರಂಭದ ನೆನಪಿಗಾಗಿ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ವಾರ್ತಾ ಇಲಾಖೆ ಸೇರಿ 'ಪಂಪನ ಹಾದಿಯಲ್ಲಿ ' ಎನ್ನುವ ಕೃತಿ ತಂದಿವು. ಅದರಲ್ಲಿ ಸಂವಾದದಲ್ಲಿ ಹೊರ ಹೊಮ್ಮಿದ ಮಾತುಗಳನ್ನು ಹಾಗೂ ಅಂದು ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದವರ ಕವಿತೆಗಳನ್ನು ಸೇರಿಸಲಾಗಿದೆ. ಕವಿ ಸನದಿ ಅವರ ತುಳಸೀಕಟ್ಟೆ ಕವಿತೆ ಸಹ 'ಪಂಪನ ಹಾದಿಯಲ್ಲಿ' ಕೃತಿಯಲ್ಲಿದೆ.

ಪಂಪ ಹೃದಯವನ್ನು ತುಂಬಿ ಕೊಂಡಿದ್ದ. ಪಂಪ ಅವರ ನಾಲಿಗೆಯ ಮೇಲೆ ಸದಾ ನಲಿದಾಡುತ್ತಿದ್ದ. ಅನುವಾದ, ಮಕ್ಕಳ ಸಾಹಿತ್ಯ, ವಿಮರ್ಶೆ, ಪ್ರವಾಸ ಸಾಹಿತ್ಯ, ಸಂಪಾದನೆಯ ಕೃತಿಗಳನ್ನು ನೀಡಿದ್ದರೂ, ಅವರು ಕವಿ. ಕವಿ ಮನಸ್ಸಿನ ಪ್ರತೀಕವಾಗಿ ಅವರ 18 ಕವನ ಸಂಕಲನಗಳು ಹೊರ ಬಂದಿವೆ. ಸೂರ್ಯಪಾನ, ಮರುಭೂಮಿ ಅವರ ಪ್ರಮುಖ ಕವನ ಸಂಕಲನ. ಆಶಾಕಿರಣ(ಸುನೀತಗಳು), ನೆಲಸಂಪಿಗೆ,ತಾಜಮಹಲ್‌, ಹಿಮಗಿರಿಯ ಮಡಿಲಲ್ಲಿ, ವೀರ ಕಂಕಣ, ಧ್ರುವಬಿಂದು,ಪ್ರತಿಬಿಂಬ,ಸೀಮಾಂತರ, ಮುಂಬೈ ಮಳೆ, ಮನೆಮನೆಗೆ ಬೇಲಿ, ಗೀತ ಗುಂಜನ, ಸಂಭವ, ಥಸ್ರ್ಟಿ ವರ್ಡ್ಸ್, ಹೊಸ ಶಬ್ದಸಂಸಾರ, ಬಾನಾಡಿ, ಮಾಯಾನಗರಿ,ಬದುಕಿನ ಬೇರು ಅವರ ಕವನ ಸಂಕಲನಗಳಾಗಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ