ಶಿರಸಿ : ಯಾವುದಾದರೂ ಒಂದು ಕಲೆಯನ್ನು ಒಂದೆರಡು ದಿನ ನೋಡಬಹುದು. ಆದರೆ ಒಂದು ವಾರ ಕಾಲ ನೂರಾರು ಜನರು ಕುಳಿತು ಆಸ್ವಾದನೆ ಮಾಡುವುದೆಂದರೆ ವಿಶೇಷವೇ ಸೈ. ಇಂಥದೊಂದು ವಿಶೇಷ ಸನ್ನಿವೇಶಕ್ಕೆ ಈಗ ಶಿರಸಿಯ ವೇದಿಕೆ ಸಜ್ಜಾಗಿದೆ.
ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ನಲವತ್ತಕ್ಕೂ ಹೆಚ್ಚು ಮಂದಿ ಹಿಮ್ಮೇಳ ಮುಮ್ಮೇಳದ ಕಲಾವಿದರು ನಗರದ ಟಿಎಂಎಸ್ ಸಭಾಭವನದ ವೇದಿಕೆಯಲ್ಲಿಇನ್ನು ಭಾನುವಾರದಿಂದ ಏಳು ದಿನಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ. ಈ ಕಲಾವಿದರ ಗಾನ ವಾದನ ವಾಕ್ ವೈಖರಿ ರಸದೌತಣ ನೀಡಲಿದೆ.
ನಾನಾ ಕಡೆಯ ಕಲಾವಿದರನ್ನು ಆಹ್ವಾನಿಸಿ ಕಲಾರಸಿಕರಿಗೆ ಉಣಬಡಿಸುವ ಕಾರ್ಯವನ್ನು ನಿರ್ವಹಿಸುತ್ತಿರುವುದು ಸ್ಥಳೀಯ ಯಕ್ಷ ಸಂಭ್ರಮ ಟ್ರಸ್ಟ್ ಎಂಬ ಸಂಘಟನೆ. ಸತತ ಐದನೇ ವರ್ಷದಲ್ಲಿಇದೀಗ ಯಕ್ಷಗಾನ ತಾಳಮದ್ದಳೆ ಸಪ್ತಾಹ ಆಯೋಜನೆಯಾಗಿದ್ದು, ಕಲಾಸಕ್ತರು ಕಾತರದಿಂದ ನಿರೀಕ್ಷಿಸುವಂತೆ ಮಾಡಿರುವುದು ಸಾಧನೆಯೇ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಲಾವಿದರು ಮಾತ್ರವಲ್ಲದೇ ಅಕ್ಕಪಕ್ಕದ ಉಡುಪಿ, ಮಂಗಳೂರು, ಶಿವಮೊಗ್ಗ ಜಿಲ್ಲೆಗಳ ಕಲಾವಿದರು ಈ ಸಪ್ತಾಹದ ಏಳು ದಿನಗಳ ವಿವಿಧ ಪ್ರಸಂಗಗಳಲ್ಲಿಪಾಲ್ಗೊಳ್ಳುತ್ತಿದ್ದಾರೆ.
ಸ್ವಯಂಸ್ಫೂರ್ತಿಯ ನೆರವು: ಏಳು ದಿನಗಳ ಯಕ್ಷಗಾನ ತಾಳಮದ್ದಳೆ ಸಪ್ತಾಹಕ್ಕೆ ಕಲಾಸಕ್ತರಿಗೆ ಯಾವುದೇ ಪ್ರವೇಶ ಶುಲ್ಕ ಇಲ್ಲ. ಮೊದಲ ವರ್ಷ ದೇಣಿಗೆ ಸಂಗ್ರಹ ಮಾಡಲಾಗಿತ್ತು. ಈಗ ಅದೂ ಇಲ್ಲ. ಏಳು ದಿನಗಳ ಕಾರ್ಯಕ್ರಮಕ್ಕೆ ಅಂದಾಜು ಮೂರು ಲಕ್ಷ ರೂ. ವೆಚ್ಚ ಬರುತ್ತಿದ್ದರೂ, ಕಲಾಭಿಮಾನಿಗಳು ಸ್ವಯಂ ಸ್ಫೂರ್ತಿಯಿಂದಲೇ ನೀಡುವ ನೆರವಿನಿಂದ ನಿಭಾಯಿಸಲಾಗುತ್ತಿದೆ ಎನ್ನುತ್ತಾರೆ ಸಂಘಟಕರು.
ಇಂದು ಉದ್ಘಾಟನೆ, ಪ್ರಶಸ್ತಿ ಪ್ರದಾನ: ಶಿರಸಿಯ ಟಿಎಂಎಸ್ ಸಭಾಭವನದಲ್ಲಿಸತತ 5ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸಪ್ತಾಹ ಅ.13ರಂದು ನಾಂದಿಯಾಗಲಿದೆ. ಸಂಜೆ 4ಕ್ಕೆ ಮಂಗಳೂರಿನ ಹಿರಿಯ ಕಲಾವಿದ ಡಾ.ಎಂ.ಪ್ರಭಾಕರ ಜೋಶಿ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿದಿ.ಚಂದು ಬಾಬು ಪ್ರಶಸ್ತಿಯನ್ನು ಹಿರಿಯ ಭಾಗವತ ಕೆ.ಪಿ.ಹೆಗಡೆ ಗೋಳಗೋಡು ಅವರಿಗೆ ಪ್ರದಾನ ಮಾಡಲಾಗುತ್ತದೆ. ಪ್ರೊ.ಎಂ.ಹೆಗಡೆ ಅಧ್ಯಕ್ಷತೆ ವಹಿಸುವರು. ಜಿ.ಎಂ.ಹೆಗಡೆ ಹುಳಗೋಳ ಅತಿಥಿಯಾಗಿ ಪಾಲ್ಗೊಳ್ಳುವರು. ನಂತರ ನಡೆಯುವ ರುಕ್ಮಾಂಗದ ಚರಿತ್ರೆ ಆಖ್ಯಾನದ ತಾಳಮದ್ದಲೆಯಲ್ಲಿಹಿಮ್ಮೇಳದಲ್ಲಿಕೇಶವ ಹೆಗಡೆ ಕೊಳಗಿ, ಅನಂತ ಹೆಗಡೆ ದಂತಳಿಕೆ, ರಾಘವೇಂದ್ರ ಯಲ್ಲಾಪುರ, ಪ್ರಮೋದ ಕಬ್ಬಿನಗದ್ದೆ ಭಾಗವಹಿಸುವರು. ಮುಮ್ಮೇಳದಲ್ಲಿಅರ್ಥಧಾರಿಗಳಾಗಿ ಎಂ. ಪ್ರಭಾಕರ ಜೋಶಿ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವ ರಂಗ ಭಟ್ಟ, ಗಣಪತಿ ಭಟ್ಟ ಸಂಕದಗುಂಡಿ, ವಾದಿರಾಜ ಕಲ್ಲೂರಾಯ, ಶ್ರೀನಿವಾಸ ಮತ್ತಿಘಟ್ಟ ಪಾಲ್ಗೊಳ್ಳುವರು.
ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ನಲವತ್ತಕ್ಕೂ ಹೆಚ್ಚು ಮಂದಿ ಹಿಮ್ಮೇಳ ಮುಮ್ಮೇಳದ ಕಲಾವಿದರು ನಗರದ ಟಿಎಂಎಸ್ ಸಭಾಭವನದ ವೇದಿಕೆಯಲ್ಲಿಇನ್ನು ಭಾನುವಾರದಿಂದ ಏಳು ದಿನಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ. ಈ ಕಲಾವಿದರ ಗಾನ ವಾದನ ವಾಕ್ ವೈಖರಿ ರಸದೌತಣ ನೀಡಲಿದೆ.
ನಾನಾ ಕಡೆಯ ಕಲಾವಿದರನ್ನು ಆಹ್ವಾನಿಸಿ ಕಲಾರಸಿಕರಿಗೆ ಉಣಬಡಿಸುವ ಕಾರ್ಯವನ್ನು ನಿರ್ವಹಿಸುತ್ತಿರುವುದು ಸ್ಥಳೀಯ ಯಕ್ಷ ಸಂಭ್ರಮ ಟ್ರಸ್ಟ್ ಎಂಬ ಸಂಘಟನೆ. ಸತತ ಐದನೇ ವರ್ಷದಲ್ಲಿಇದೀಗ ಯಕ್ಷಗಾನ ತಾಳಮದ್ದಳೆ ಸಪ್ತಾಹ ಆಯೋಜನೆಯಾಗಿದ್ದು, ಕಲಾಸಕ್ತರು ಕಾತರದಿಂದ ನಿರೀಕ್ಷಿಸುವಂತೆ ಮಾಡಿರುವುದು ಸಾಧನೆಯೇ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಲಾವಿದರು ಮಾತ್ರವಲ್ಲದೇ ಅಕ್ಕಪಕ್ಕದ ಉಡುಪಿ, ಮಂಗಳೂರು, ಶಿವಮೊಗ್ಗ ಜಿಲ್ಲೆಗಳ ಕಲಾವಿದರು ಈ ಸಪ್ತಾಹದ ಏಳು ದಿನಗಳ ವಿವಿಧ ಪ್ರಸಂಗಗಳಲ್ಲಿಪಾಲ್ಗೊಳ್ಳುತ್ತಿದ್ದಾರೆ.
ಸ್ವಯಂಸ್ಫೂರ್ತಿಯ ನೆರವು: ಏಳು ದಿನಗಳ ಯಕ್ಷಗಾನ ತಾಳಮದ್ದಳೆ ಸಪ್ತಾಹಕ್ಕೆ ಕಲಾಸಕ್ತರಿಗೆ ಯಾವುದೇ ಪ್ರವೇಶ ಶುಲ್ಕ ಇಲ್ಲ. ಮೊದಲ ವರ್ಷ ದೇಣಿಗೆ ಸಂಗ್ರಹ ಮಾಡಲಾಗಿತ್ತು. ಈಗ ಅದೂ ಇಲ್ಲ. ಏಳು ದಿನಗಳ ಕಾರ್ಯಕ್ರಮಕ್ಕೆ ಅಂದಾಜು ಮೂರು ಲಕ್ಷ ರೂ. ವೆಚ್ಚ ಬರುತ್ತಿದ್ದರೂ, ಕಲಾಭಿಮಾನಿಗಳು ಸ್ವಯಂ ಸ್ಫೂರ್ತಿಯಿಂದಲೇ ನೀಡುವ ನೆರವಿನಿಂದ ನಿಭಾಯಿಸಲಾಗುತ್ತಿದೆ ಎನ್ನುತ್ತಾರೆ ಸಂಘಟಕರು.
ಇಂದು ಉದ್ಘಾಟನೆ, ಪ್ರಶಸ್ತಿ ಪ್ರದಾನ: ಶಿರಸಿಯ ಟಿಎಂಎಸ್ ಸಭಾಭವನದಲ್ಲಿಸತತ 5ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸಪ್ತಾಹ ಅ.13ರಂದು ನಾಂದಿಯಾಗಲಿದೆ. ಸಂಜೆ 4ಕ್ಕೆ ಮಂಗಳೂರಿನ ಹಿರಿಯ ಕಲಾವಿದ ಡಾ.ಎಂ.ಪ್ರಭಾಕರ ಜೋಶಿ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿದಿ.ಚಂದು ಬಾಬು ಪ್ರಶಸ್ತಿಯನ್ನು ಹಿರಿಯ ಭಾಗವತ ಕೆ.ಪಿ.ಹೆಗಡೆ ಗೋಳಗೋಡು ಅವರಿಗೆ ಪ್ರದಾನ ಮಾಡಲಾಗುತ್ತದೆ. ಪ್ರೊ.ಎಂ.ಹೆಗಡೆ ಅಧ್ಯಕ್ಷತೆ ವಹಿಸುವರು. ಜಿ.ಎಂ.ಹೆಗಡೆ ಹುಳಗೋಳ ಅತಿಥಿಯಾಗಿ ಪಾಲ್ಗೊಳ್ಳುವರು. ನಂತರ ನಡೆಯುವ ರುಕ್ಮಾಂಗದ ಚರಿತ್ರೆ ಆಖ್ಯಾನದ ತಾಳಮದ್ದಲೆಯಲ್ಲಿಹಿಮ್ಮೇಳದಲ್ಲಿಕೇಶವ ಹೆಗಡೆ ಕೊಳಗಿ, ಅನಂತ ಹೆಗಡೆ ದಂತಳಿಕೆ, ರಾಘವೇಂದ್ರ ಯಲ್ಲಾಪುರ, ಪ್ರಮೋದ ಕಬ್ಬಿನಗದ್ದೆ ಭಾಗವಹಿಸುವರು. ಮುಮ್ಮೇಳದಲ್ಲಿಅರ್ಥಧಾರಿಗಳಾಗಿ ಎಂ. ಪ್ರಭಾಕರ ಜೋಶಿ, ಸುಣ್ಣಂಬಳ ವಿಶ್ವೇಶ್ವರ ಭಟ್ಟ, ವಾಸುದೇವ ರಂಗ ಭಟ್ಟ, ಗಣಪತಿ ಭಟ್ಟ ಸಂಕದಗುಂಡಿ, ವಾದಿರಾಜ ಕಲ್ಲೂರಾಯ, ಶ್ರೀನಿವಾಸ ಮತ್ತಿಘಟ್ಟ ಪಾಲ್ಗೊಳ್ಳುವರು.