ಆ್ಯಪ್ನಗರ

ಶಾಲಾ ಆಯುಷ್‌ ಆರೋಗ್ಯ ಕಾರ‍್ಯಕ್ರಮ

ಶಿರಸಿ: ರಾಷ್ಟ್ರೀಯ ಆಯುಷ್‌ ಅಭಿಯಾನದಡಿ ಇಲ್ಲಿಯ ಸರಕಾರಿ ಆಯುರ್ವೇದ ಆಸ್ಪತ್ರೆಯಿಂದ ನಗರದ ಗಣೇಶನಗರದ ಸರಕಾರಿ ಪ್ರೌಢಶಾಲೆಯಲ್ಲಿ ಆಯುಷ್‌ ಆರೋಗ್ಯ ಕಾರ್ಯಕ್ರಮ ನಡೆಯಿತು.

Vijaya Karnataka 8 Jul 2019, 5:00 am
ಶಿರಸಿ: ರಾಷ್ಟ್ರೀಯ ಆಯುಷ್‌ ಅಭಿಯಾನದಡಿ ಇಲ್ಲಿಯ ಸರಕಾರಿ ಆಯುರ್ವೇದ ಆಸ್ಪತ್ರೆಯಿಂದ ನಗರದ ಗಣೇಶನಗರದ ಸರಕಾರಿ ಪ್ರೌಢಶಾಲೆಯಲ್ಲಿ ಆಯುಷ್‌ ಆರೋಗ್ಯ ಕಾರ್ಯಕ್ರಮ ನಡೆಯಿತು.
Vijaya Karnataka Web SRS-7SRS4


ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ ಕಾರ್ಯಕ್ರಮ ಉದ್ಘಾಟಿಸಿ, ದುಶ್ಚಟಗಳಿಂದ ದೂರವಿದ್ದು ಪಾಲಕರಿಗೆ ಒಳ್ಳೆಯ ಮಕ್ಕಳೆನಿಸಿ ಶಾಲೆಗೆ ಆದರ್ಶ ವಿದ್ಯಾರ್ಥಿಯಾಗಿ, ಸಮಾಜಕ್ಕೆ ಮಾದರಿಯಾಗಿ ಬದುಕುವಂತೆ ತಿಳಿ ಹೇಳಿದರು. ತಂಬಾಕು ಸೇವನೆ, ಮದ್ಯಪಾನ, ಮಾದಕ ದ್ರವ್ಯಗಳಿಂದ ದೇಹದ ವಿವಿಧ ಅಂಗಾಂಗಗಳ ಮೇಲಾಗುವ ದುಷ್ಪರಿಣಾಮಗಳು, ಕ್ಯಾನ್ಸರ್‌, ಹೃದ್ರೋಗ, ಮಧುಮೇಹ, ಏಡ್ಸ್‌ನಂತಹ ಕಾಯಿಲೆಗಳ ಬಗ್ಗೆ ವಿವರಿಸಿದರು.

ನಿಸರ್ಗ ಆಸ್ಪತ್ರೆಯ ವೈದ್ಯ ಡಾ.ವಿನಾಯಕ ಹೆಬ್ಬಾರ್‌, ಧ್ಯಾನ, ಮುದ್ರೆ, ಪ್ರಾಣಾಯಾಮಗಳ ಮೂಲಕ ಏಕಾಗ್ರತೆ, ಓದಿನಲ್ಲಿ ಪ್ರಗತಿ ಸಾಧ್ಯ ಎಂದರು. ಅಂಗಡಿಗಳಲ್ಲಿ ಸಿಗುವ ಅಸುರಕ್ಷಿತ ಆಹಾರಕ್ಕೂ ಮನೆಯಲ್ಲಿ ತಯಾರಿಸುವ ಆರೋಗ್ಯಕರ ಆಹಾರಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ತಿಳಿಸಿದರು. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ವಿಧಾನ ತಿಳಿಸಿಕೊಟ್ಟರು.

ಇದೇ ಸಂದರ್ಭದಲ್ಲಿ ಔಷಧಿಯ ಗುಣ ಹೊಂದಿದ ಫಲ ನೀಡುವ ನೇರಳೆ, ನೆಲ್ಲಿಗಿಡ, ಬದಾಮಿ, ಉಪ್ಪಾಗೆ ಹಾಗೂ ಔಷಧಿಯಲ್ಲಿ ಉಪಯುಕ್ತ ವೃಕ್ಷ ಗಳಾದ ಮತ್ತಿ, ಶಿವನೆ, ರಕ್ತಚಂದನ ಇತ್ಯಾದಿ ಗಿಡಗಳನ್ನು ವಿತರಿಸಿ ಅವುಗಳ ಔಷಧಿಯ ಪ್ರಯೋಜನ ತಿಳಿಸಲಾಯಿತು.

ಮುಖ್ಯಾಧ್ಯಾಪಕ ದಯಾನಂದ ನಾಯ್ಕ ಮಾತನಾಡಿದರು. ವಿಜ್ಞಾನ ಶಿಕ್ಷ ಕ ಕೃಷ್ಣ ಎಲ್‌ ಭಟ್ಟ ನಿರೂಪಿಸಿದರು. ಸರಕಾರಿ ಆಯುರ್ವೇದ ಆಸ್ಪತ್ರೆಯ ಕೃಷ್ಣಮೂರ್ತಿ, ವೀರಣ್ಣ ನಡುವಿನಮನಿ, ರೇಣುಕಾ ವಿ.ನಾಯ್ಕ ಸಹಕರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ