ಆ್ಯಪ್ನಗರ

ಗಂಗಾವಳಿಯಲ್ಲಿ ಸ್ಕೂಲ್‌ ಬ್ಯಾಗ್‌ ವಿತರಣೆ

ಗೋಕರ್ಣ: ಸಮೀಪದ ನಾಡುಮಾಸ್ಕೇರಿ ಪಂಚಾಯಿತಿ ವ್ಯಾಪ್ತಿಯ ಗಂಗಾವಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ.ಅಭಿಜಿತ್‌ ಶ್ರೀನಿವಾಸ್‌ ನಾಯಕ ಅವರ ಸ್ಮರಣಾರ್ಥ ಸ್ಕೂಲ್‌ ಬ್ಯಾಗ್‌ ವಿತರಣೆ ಕಾರ್ಯಕ್ರಮ ನಡೆಯಿತು.

Vijaya Karnataka 19 Aug 2019, 5:00 am
Vijaya Karnataka Web school bag distribution
ಗಂಗಾವಳಿಯಲ್ಲಿ ಸ್ಕೂಲ್‌ ಬ್ಯಾಗ್‌ ವಿತರಣೆ
ಗೋಕರ್ಣ: ಸಮೀಪದ ನಾಡುಮಾಸ್ಕೇರಿ ಪಂಚಾಯಿತಿ ವ್ಯಾಪ್ತಿಯ ಗಂಗಾವಳಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಿ.ಅಭಿಜಿತ್‌ ಶ್ರೀನಿವಾಸ್‌ ನಾಯಕ ಅವರ ಸ್ಮರಣಾರ್ಥ ಸ್ಕೂಲ್‌ ಬ್ಯಾಗ್‌ ವಿತರಣೆ ಕಾರ್ಯಕ್ರಮ ನಡೆಯಿತು.

ನಾಡುಮಾಸ್ಕೇರಿ ಗ್ರಾಪಂ ಸದಸ್ಯ, ಕಾರ್ಯಕ್ರಮದ ಪ್ರಾಯೋಜಕ ಶ್ರೀನಿವಾಸ್‌ ದೇವಣ್ಣ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷ ತೆ ವಹಿಸಿ ಮಾತನಾಡಿದ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ, ಶ್ರೀನಿವಾಸ ನಾಯಕ ಅವರು ತಮ್ಮ ಮಗ ದಿ. ಅಭಿಜಿತ್‌ ನಾಯಕರ ಸ್ಮರಣಾರ್ಥ ಹಲವಾರು ಸಾಮಾಜಿಕ ಕಾರ್ಯ ಹಮ್ಮಿಕೊಳ್ಳುತ್ತಾ ಬಂದಿದ್ದು ಇಂದು ಮಕ್ಕಳಿಗೆ ಸ್ಕೂಲ್‌ ಬ್ಯಾಗ್‌ ವಿತರಣೆ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ ಎಂದರು.

ಅತಿಥಿಗಳಾಗಿ ಗೋಕರ್ಣ ವೈದ್ಯಾಧಿಕಾರಿ ಜಗದೀಶ್‌ ನಾಯ್ಕ, ನಾಡುಮಾಸ್ಕೇರಿ ತಾ.ಪಂ. ಸದಸ್ಯ ರಾಜೇಶ್‌ ನಾಯಕ, ಮುಖ್ಯಾಧ್ಯಾಪಕಿ ಪದ್ಮ ನಾಯಕ, ಮುಖ್ಯಾಧ್ಯಾಪಕ ಗಂಗಾಧರ ಭಟ್‌, ಉದ್ಯಮಿ ಆನಂದ ಕವರಿ, ಗ್ರಾಪಂ ಸದಸ್ಯ ಗಣೇಶ್‌ ಗೌಡ, ಮೀನುಗಾರಿಕಾ ಸಹಕಾರಿ ಸಂಘದ ನಿರ್ದೇಶಕಿ ಭಾರತಿ ಚಂದ್ರು ಅಂಬಿಗ, ಪ್ರೌಢಶಾಲೆ ಉಪಾಧ್ಯಕ್ಷ ಅರುಣ, ಹಿರಿಯರಾದ ನಾರಾಯಣ ರಾಕುಮನೆ ಮತ್ತಿತರರು ಉಪಸ್ಥಿತರಿದ್ದರು. ಎಸ್‌.ಎಸ್‌.ಹೆಗಡೆ ಕುಮಟಾ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ