ಆ್ಯಪ್ನಗರ

ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್‌ ವಿತರಣೆ

ಜೋಯಿಡಾ : ತಾಲೂಕಿನ ಡಿಗ್ಗಿಯಲ್ಲಿ ಯಂಗ ಸ್ವಾರ್‌ ಕ್ಲಬ್‌ ವತಿಯಿಂದ ಯೋಧರಿಗೆ ನಮನ, ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಣೆ, ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

Vijaya Karnataka 26 Feb 2019, 5:00 am
ಜೋಯಿಡಾ : ತಾಲೂಕಿನ ಡಿಗ್ಗಿಯಲ್ಲಿ ಯಂಗ ಸ್ವಾರ್‌ ಕ್ಲಬ್‌ ವತಿಯಿಂದ ಯೋಧರಿಗೆ ನಮನ, ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಣೆ, ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.
Vijaya Karnataka Web KWR-25 JYD 2
ಜೋಯಿಡಾ ತಾಲೂಕಿನ ಡಿಗ್ಗಿಯಲ್ಲಿ ಯಂಗ ಸ್ವಾರ್‌ ಕ್ಲಬ್‌ ವತಿಯಿಂದ ಯೋಧರಿಗೆ ನಮನ, ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಣೆ, ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.


ಜಿಲ್ಲಾ ಕುಣಬಿ ಸಮಾಜದ ಉಪಾಧ್ಯಕ್ಷ ಸುಭಾಷ ಗಾವಡಾ ಕಾರ್ಯಕ್ರಮ ಉದ್ಘಾಟಿಸಿದರು. ಕಾಳಿ ಬ್ರಿಗೇಡ್‌ ಸಂಚಾಲಕ ರವಿ ರೆಡಕರ ಸಂಘಟನೆ ಬಗ್ಗೆ, ವಕೀಲ ಸುನಿಲ್‌ ದೇಸಾಯಿ ಕಾನೂನು ಸಲಹೆ ಬಗ್ಗೆ, ಮುನ್ಸಿಪಲ್‌ ಕೌನ್ಸಿಲ್‌ ಹರೀಶ ನಾಯ್ಕ ಕಾರ್ಮಿಕರ ಹಕ್ಕುಗಳು, ವಿವೇಕಾನಂದ ನಾಯ್ಕ, ವಾಸುದೇವ ಕಿತ್ತೂರ ಆರೋಗ್ಯ ವಿಷಯ ಬಗ್ಗೆ, ಆಶೋಕ ಸೂರ್ಯವಂಶಿ ಸ್ವ ಉದ್ಯೋಗ, ಗಣೇಶ ಕೋಡಿಯಾ ಶಿಕ್ಷ ಣ, ಅಜಿತ ಮಿರಾಶಿ ಗ್ರಾಪಂ ಸೌಲಭ್ಯಗಳ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.

ಪುಲ್ವಾಮಾದಲ್ಲಿ ಹುತಾತ್ಮರಾದ ವೀರ ಯೋಧರ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯಂಗ್‌ ಸ್ಪಾರ್‌ ಕ್ಲಬ್‌ ಅಧ್ಯಕ್ಷ ಪ್ರದೀಪ ವೆಳಿಪ ತಮ್ಮ ಪುತ್ರನ ಜನ್ಮದಿನವನ್ನು ಶಾಲೆ ಮಕ್ಕಳೊಂದಿಗೆ ಆಚರಿಸಿ, ಬೊಂಡೇಲಿ, ಡಿಗ್ಗಿ, ಮಾಯರೆ, ಸೋಲೆಯ ಶಾಲೆಯ 55 ಮಕ್ಕಳಿಗೆ ಬ್ಯಾಗ್‌ ವಿತರಿಸಿದರು.

ವೇದಿಕೆಯಲ್ಲಿ ಪ್ರಮುಖರಾದ ಎಸ್‌ಡಿಎಮ್‌ಸಿ ಅಧ್ಯಕ್ಷ ಸುರೇಶ ಮಿರಾಶಿ, ವಾಸು ಮಿರಾಶಿ, ಸುರೇಶ ಮಿರಾಶಿ ಬೊಂಡೇಲಿ, ಗಣಪತಿ ಗಾವಡಾ ಮುಂತಾದವರು ಇದ್ದರು. ಮಹಾದೇವ ಮಿರಾಶಿ ನಿರೂಪಿಸಿದರು. ಡಿಗ್ಗಿ ಶಾಲೆ ಮುಖ್ಯ ಶಿಕ್ಷ ಕ ಪ್ರಸನ್ನ ಸ್ವಾಗತಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ