ಆ್ಯಪ್ನಗರ

ಶುಲ್ಕ ಹೆಚ್ಚುವರಿ ಜನರ ಜೇಬಿಗೆ ಕತ್ತರಿ

ಕಾರವಾರ : ರಾಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಜಿಲ್ಲೆಯ ವ್ಯಾಪ್ತಿಯಲ್ಲಿಎರಡು ಕಡೆ ಟೋಲ್‌ ಸಂಗ್ರಹ ಮಾಡಲು ಪ್ರಾರಂಭಿಸಿರುವುದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಸ್ಥಳೀಯರಿಗೂ ವಿನಾಯಿತಿ ನೀಡದೆ ಆರೇಳು ಕಿಮೀ ಪ್ರಯಾಣಿಸುವವರೂ ಹೆಚ್ಚುವರಿ ಶುಲ್ಕ ತೆತ್ತಬೇಕಾಗಿರುವ ಹಿನ್ನೆಲೆಯಲ್ಲಿಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

Vijaya Karnataka 26 Feb 2020, 5:00 am
ಕಾರವಾರ : ರಾಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಜಿಲ್ಲೆಯ ವ್ಯಾಪ್ತಿಯಲ್ಲಿಎರಡು ಕಡೆ ಟೋಲ್‌ ಸಂಗ್ರಹ ಮಾಡಲು ಪ್ರಾರಂಭಿಸಿರುವುದು ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಸ್ಥಳೀಯರಿಗೂ ವಿನಾಯಿತಿ ನೀಡದೆ ಆರೇಳು ಕಿಮೀ ಪ್ರಯಾಣಿಸುವವರೂ ಹೆಚ್ಚುವರಿ ಶುಲ್ಕ ತೆತ್ತಬೇಕಾಗಿರುವ ಹಿನ್ನೆಲೆಯಲ್ಲಿಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
Vijaya Karnataka Web scissors for extra peoples pocket for a fee
ಶುಲ್ಕ ಹೆಚ್ಚುವರಿ ಜನರ ಜೇಬಿಗೆ ಕತ್ತರಿ


ಕಳೆದ ಐದು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಜಿಲ್ಲೆಯ ವ್ಯಾಪ್ತಿಯಲ್ಲಿನಡೆದಿದೆ. ಅಲ್ಲಲ್ಲಿನಡೆದ ಅರೆಬರೆ ಕಾಮಗಾರಿಯಿಂದ ಇದುವರೆಗೆ ನೂರಾರು ಜನ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಅಲ್ಲದೇ ಅವೈಜ್ಞಾನಿಕ ಕಾಮಗಾರಿಯಿಂದ ಉಂಟಾದ ಭೂ ಕುಸಿತದಿಂದಲೂ ಸಾವು ನೋವು ಸಂಭವಿಸಿದೆ. ಈಗಿನ್ನೂ ರಸ್ತೆ ಕೆಲಸ ಶೇ. 75ರಷ್ಟು ಮಾತ್ರ ಪೂರ್ಣಗೊಂಡಿದೆ. ಆಗಲೇ ರಸ್ತೆ ನಿರ್ಮಾಣ ಕಂಪನಿಯು ಟೋಲ್‌ ಸಂಗ್ರಹ ಆರಂಭಿಸಿದೆ.

ಸರಕಾರಿ ಬಸ್‌ಗಳಿಂದ ಟೋಲ್‌ ಹೆಸರಿನಲ್ಲಿಹೆಚ್ಚುವರಿ ಶುಲ್ಕ ನಡೆಸಲಾಗುತ್ತಿದೆ. ಆದರೆ, ಸಾರ್ವಜನಿಕರ ಜೇಬಿಗೆ ಅನವಶ್ಯಕವಾಗಿ ಕತ್ತರಿ ಬೀಳುತ್ತಿದ್ದರೂ ನ್ಯಾಯ ದೊರಕಿಸಿಕೊಡಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಜನವಿರೋಧಿ : ಫೆ. 13ರಿಂದ ಅಂಕೋಲಾ ತಾಲೂಕಿನ ಬೇಲೆಕೇರಿ ಹಾಗೂ ಕುಮಟಾ ತಾಲೂಕಿನ ಹೊಳೆಗದ್ದೆ ಬಳಿ ಟೋಲ್‌ ಗೇಟ್ಗಳಲ್ಲಿವಾಹನ ಸವಾರರಿಂದ ಶುಲ್ಕ ಸಂಗ್ರಹಿಸುತ್ತಿದೆ. ಕಾಮಗಾರಿ ಪೂರ್ಣಗೊಳಿಸದೆ ಶುಲ್ಕ ಸಂಗ್ರಹ ಆರಂಭಿಸಿರುವುದಕ್ಕೆ ಜಿಲ್ಲೆಯ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಈಗಾಗಲೇ ಅನೇಕ ಸಂಘಟನೆಗಳು ಪ್ರತಿಭಟನೆ ಸಹ ನಡೆಸಿವೆ. ಆದರೆ ಯಾವುದಕ್ಕೂ ಜಗ್ಗದ ಖಾಸಗಿ ಕಂಪನಿ ಪ್ರಯಾಣಿಕರಿಗೆ ಹೆಚ್ಚಿನ ಹೊರೆ ವಿಧಿಸಿದೆ ಎಂಬುದು ಸಾರ್ವಜನಿಕರ ಆರೋಪ.

ಹತ್ತಿರದ ಪ್ರಯಾಣಕ್ಕೂ ಹೆಚ್ಚಿದ ಹೊರೆ : ರಾಷ್ಟಿ್ರೕಯ ಹೆದ್ದಾರಿ 66ರಲ್ಲಿಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಿಂದಲೂ ಪ್ರತಿ ಟೋಲ್‌ನಲ್ಲಿ300 ರೂ ಪಡೆಯಲಾಗುತ್ತಿದೆ. ಇದರಿಂದಾಗಿ ಒಂದು ಟೋಲ್‌ ಗೇಟ್‌ ದಾಟುವ ಬಸ್ಸಿನ ಟಿಕೇಟ್‌ ದರ 9 ರೂಪಾಯಿ ಹೆಚ್ಚಾಗಿದೆ.ಸ್ಥಳೀಯವಾಗಿ ಸಂಚರಿಸುವ ಪ್ರಯಾಣಿಕರಿಂದಲೂ 9 ರೂ ಹೆಚ್ಚುವರಿಯಾಗಿ ಕಟ್ಟಿಸಿಕೊಳ್ಳಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅವರ್ಸಾದಿಂದ ಯಲ್ಲಾಪುರ ರಸ್ತೆ ಕೂಡುವ ಬಾಳೆಗುಳಿ ಕ್ರಾಸ್‌ ಮೂಲಕ ತೆರಳುವ ಪ್ರಯಾಣಿಕರು ರಾ.ಹೆ. 66ರಲ್ಲಿಸಂಚರಿಸುವುದು ಕೇವಲ ಆರೇಳು ಕಿಮೀ ಮಾತ್ರ. ಬಾಳೆಗುಳಿ ಕ್ರಾಸ್‌ನಿಂದ ಮುಂದೆ ರಾ.ಹೆ. 63 ಪ್ರಾರಂಭವಾಗುತ್ತದೆ. ಆದರೆ ಈ ಆರೇಳು ಕಿ.ಮೀ. ಪ್ರಯಾಣಕ್ಕೂ 9 ರೂ. ಹೆಚ್ಚುವರಿಯಾಗಿ ಶುಲ್ಕ ನೀಡಬೇಕಿದೆ. ಕೆಲವೆಡೆ ಬಸ್‌ ಟಿಕೆಟ್‌ ದರಕ್ಕಿಂತಲೂ ಟೋಲ್‌ ಶುಲ್ಕವೇ ಹೆಚ್ಚಾಗಿರುವುದು ಅಕ್ಷರಶಃ ಹಗಲು ದರೋಡೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.

ಕುಮಟಾದಿಂದ ಹೊನ್ನಾವರದ ನಡುವೆ 19 ಕಿಲೋ ಮೀಟರ್‌ ಮಾತ್ರ ದೂರವಿದ್ದು, ಸದ್ಯ ಟೋಲ್‌ ಮಧ್ಯ ಬರುತ್ತಿರುವುದರಿಂದ ಪ್ರಯಾಣಿಕರಿಂದ 39 ರೂ ಟಿಕೆಟ್‌ ದರ ಪಡೆಯಲಾಗುತ್ತಿದೆ. ಈ ಹಿಂದೆ 30 ರೂ. ಟಿಕೆಟ್‌ ದರವಿತ್ತು. ಅಂಕೋಲಾದಿಂದ ಕಾರವಾರಕ್ಕೆ ಇದ್ದ 33 ರೂ. ಟಿಕೆಟ್‌ ದರ ಈಗ 42ಕ್ಕೆ ಏರಿದೆ.

ಬೃಹತ್‌ ಪ್ರತಿಭಟನೆ : ಸರಕು ಸಾಗಣೆ, ಬಾಡಿಗೆ ವಾಹನ ಸೇರಿದಂತೆ ಸ್ಥಳೀಯ ಎಲ್ಲಾವಾಹನಗಳಿಗೂ ಟೋಲ್‌ನಿಂದ ವಿನಾಯಿತಿ ಬೇಕು ಎಂದು ಒತ್ತಾಯಿಸಿ ಸೋಮವಾರ ಬೇಲೆಕೇರಿ ಬಳಿಯ ಟೋಲ್‌ ಗೇಟ್‌ಗೆ ಟೆಂಪೋ ಹಾಗೂ ಟ್ಯಾಕ್ಸಿ ಯೂನಿಯನ್‌ನವರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಳಿಕ ಖಾಸಗಿ ಸಂಸ್ಥೆಯ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಸಂಧಾನ ಸಹ ವಿಫಲವಾಗಿದೆ. ತಿಂಗಳ ಪಾಸ್‌ ಖರೀದಿಸುವಂತೆ ಖಾಸಗಿ ಕಂಪನಿಯವರು ಹೇಳಿದ್ದರೆ ಅದಕ್ಕೆ ಒಪ್ಪದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಟೋಲ್‌ ಶುಲ್ಕ ನೀಡುವುದಿಲ್ಲಎಂದಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ