ಆ್ಯಪ್ನಗರ

ಸ್ವಾವಲಂಬಿ ಜೀವನಕ್ಕೆ ಶಿಕ್ಷಣ ಅವಶ್ಯ

ಅಂಕೋಲಾ : ಅಕ್ಷರ ಜ್ಞಾನದ ಬೀಜವನ್ನು ಅನಕ್ಷರಸ್ಥರ ಬಾಳಿನಲ್ಲಿಬಿತ್ತಿ, ಪ್ರತಿಯೊಬ್ಬರನ್ನು ಸಾಕ್ಷರರನ್ನಾಗಿ ಮಾಡಿ ನಮ್ಮ ಜಿಲ್ಲೆಸಂಪೂರ್ಣ ಸಾಕ್ಷರರ ಜಿಲ್ಲೆಯಾಗುವಂತೆ ಪ್ರತಿಯೊಬ್ಬರು ಪ್ರಯತ್ನಿಸಬೇಕಿದೆ ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.

Vijaya Karnataka 15 Sep 2019, 5:00 am
ಅಂಕೋಲಾ : ಅಕ್ಷರ ಜ್ಞಾನದ ಬೀಜವನ್ನು ಅನಕ್ಷರಸ್ಥರ ಬಾಳಿನಲ್ಲಿಬಿತ್ತಿ, ಪ್ರತಿಯೊಬ್ಬರನ್ನು ಸಾಕ್ಷರರನ್ನಾಗಿ ಮಾಡಿ ನಮ್ಮ ಜಿಲ್ಲೆಸಂಪೂರ್ಣ ಸಾಕ್ಷರರ ಜಿಲ್ಲೆಯಾಗುವಂತೆ ಪ್ರತಿಯೊಬ್ಬರು ಪ್ರಯತ್ನಿಸಬೇಕಿದೆ ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.
Vijaya Karnataka Web self reliance is essential to education
ಸ್ವಾವಲಂಬಿ ಜೀವನಕ್ಕೆ ಶಿಕ್ಷಣ ಅವಶ್ಯ


ಶನಿವಾರ ಜೆ.ಸಿ.ಕಾಲೇಜಿನ ಸಭಾಭವನದಲ್ಲಿಜಿಪಂ ಉತ್ತರ ಕನ್ನಡ, ಜಿಲ್ಲಾವಯಸ್ಕರ ಶಿಕ್ಷಣ ಇಲಾಖೆ ಮತ್ತು ತಾಪಂ ಅಂಕೋಲಾ ಇವರ ಆಶ್ರಯದಲ್ಲಿಹಮ್ಮಿಕೊಂಡ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ-2109 ಮತ್ತು ಅಂತಾರಾಷ್ಟ್ರೀಯ ಸಾಕ್ಷರತಾ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. 4 ಗೋಡೆಗಳ ಮಧ್ಯೆ ಕಲಿಯುವ ಶಿಕ್ಷಣ ಮಾತ್ರ ಶಿಕ್ಷಣವಲ್ಲ. ಸಮಾಜದಲ್ಲಿಪ್ರತಿಯೊಂದು ಕ್ಷೇತ್ರದಲ್ಲಿಯೂ ಕಲಿಯುವುದು ಬಹಳ ಇದೆ. ಮುಖ್ಯವಾಹಿನಿಗೆ ಬರದೆ ಇರುವ ಅನಕ್ಷರಸ್ಥ ಬಂಧುಗಳನ್ನು ಸಾಕ್ಷರರನ್ನಾಗಿ ಮಾಡಿ ಅವರಿಗೆ ಸ್ವಾವಲಂಬಿ ಬದುಕನ್ನು ನಡೆಸಲು ಕಲಿಸುವುದು ಶಿಕ್ಷಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ನಾಡಿನ ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕ ಮಾತನಾಡಿ, ನಮ್ಮ ಜಿಲ್ಲೆಯನ್ನು ಸಾಕ್ಷರ ಜಿಲ್ಲೆಎಂದು ಘೋಷಿಸಬಹುದು. ಶೆ.75 ಜನ ಅಕ್ಷರಸ್ಥರಿದ್ದರೆ ಆ ಜಿಲ್ಲೆಯನ್ನು ಸಾಕ್ಷರ ಜಿಲ್ಲೆಎಂದು ಘೋಷಿಸಲು ಸರಕಾರ ಆದೇಶಿಸಿದೆ ಎಂದರು.

ಕೆನರಾ ವೆಲ್‌ಫೇರ್‌ ಟ್ರಸ್ಟನ್‌ ಕಾರ್ಯದರ್ಶಿ ಕೆ.ವಿ.ಶೆಟ್ಟಿ, ಜಿಪಂನ ಉಪಕಾರ್ಯದರ್ಶಿ ನಾಗೇಶ ರಾಯ್ಕರ, ಪುರಸಭೆಯ ಮುಖ್ಯಾಧಿಕಾರಿ ಬಿ.ಪ್ರಲ್ಲಾದ, ಜಿ.ಸಿ.ಕಾಲೇಜಿನ ಪಪೂ ವಿಭಾಗದ ಪ್ರಾಚಾರ್ಯೆ ಸುಜಾತಾ ಲಾಡ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಭಾವಿಕೇರಿ ಗ್ರಾಪಂ ಅಧ್ಯಕ್ಷೆ ಸರಿತಾ ಬಲೇಗಾರ ಮಾತನಾಡಿದರು.

ಸಾಂಕೇತಿಕವಾಗಿ ನವಸಾಕ್ಷರರಿಗೆ 2018-19ನೇ ಸಾಲಿನ ಬಾಹ್ಯ ಪರೀಕ್ಷೆಯಲ್ಲಿಉತ್ತೀರ್ಣರಾದ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ವಿನುತಾ ನಾಯಕ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಜಿಲ್ಲಾವಯಸ್ಕರ ಶಿಕ್ಷಣಾಧಿಕಾರಿ ಮಂಗಲಲಕ್ಷಿತ್ರ್ಮೕ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಿವೃತ್ತ ಉಪನ್ಯಾಸಕ ಬಿ.ಎಸ್‌. ಗೌಡ ಸಾಕ್ಷರತಾ ಪ್ರಮಾಣವಚನ ಬೋಧಿಸಿದರು. ಸುಭಾಷ ಕಾರೇಬೈಲ್‌ ನಿರೂಪಿಸಿದರು. ರಫೀಕ ಶೇಖ ವಂದಿಸಿದರು.

ಸಂಗÜಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ, ಭಾವಿಕೇರಿ ಗ್ರಾಪಂ ಪಿಡಿಒ ಮಾದೇವ ಗೌಡ, ಸ್ಪೂರ್ತಿ ಸಂಜೀವಿನಿ ಒಕ್ಕೂಟದ ನೇತ್ರಾ ನಾಯ್ಕ, ಜಿಲ್ಲಾವಯಸ್ಕರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶೃತಿ, ಪ್ರಮೀಳಾ ಕಾಲೇಜಿನ ಉಪನ್ಯಾಸಕರು, ನವ ಸಾಕ್ಷರರು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ