ಆ್ಯಪ್ನಗರ

ಪ್ರತ್ಯೇಕ ಘಟನೆ, ಓಂ ಬೀಚಿನಲ್ಲಿಇಬ್ಬರ ರಕ್ಷಣೆ

ಗೋಕರ್ಣ : ಗೋಕರ್ಣದ ಓಂ ಬೀಚಿನಲ್ಲಿಭಾನುವಾರ ಸಂಜೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿಅಪಾಯಕ್ಕೆ ಸಿಲುಕಿದ ಇಬ್ಬರು ಪ್ರವಾಸಿಗರನ್ನು ಲೈಫ್‌ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ್ದಾರೆ.

Vijaya Karnataka 11 Nov 2019, 5:00 am
ಗೋಕರ್ಣ : ಗೋಕರ್ಣದ ಓಂ ಬೀಚಿನಲ್ಲಿಭಾನುವಾರ ಸಂಜೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿಅಪಾಯಕ್ಕೆ ಸಿಲುಕಿದ ಇಬ್ಬರು ಪ್ರವಾಸಿಗರನ್ನು ಲೈಫ್‌ ಗಾರ್ಡ್‌ ಸಿಬ್ಬಂದಿ ರಕ್ಷಿಸಿದ್ದಾರೆ.
Vijaya Karnataka Web separate incident om beach on both sides
ಪ್ರತ್ಯೇಕ ಘಟನೆ, ಓಂ ಬೀಚಿನಲ್ಲಿಇಬ್ಬರ ರಕ್ಷಣೆ


ಹರಿಯಾಣ ಮೂಲದ ಖಾಸಗಿ ಕಂಪನಿಯ ಉದ್ಯೋಗಿಗಳಾದ ಮೂವರು ಪ್ರವಾಸಿಗರು ಓಂ ಬೀಚಿನಲ್ಲಿಸಮುದ್ರ ಸ್ನಾನಕ್ಕೆ ತರಳಿದಾಗ ಅದರಲ್ಲಿಒಬ್ಬರಾದ ಕುಲದೀಪ್‌ ಸಿಂಗ್‌(43) ಸಮುದ್ರದ ಸುಳಿಗೆ ಸಿಲುಕಿದ್ದರು. ಇದನ್ನು ಗಮನಿಸಿದ ಕರ್ತವ್ಯನಿರತ ಲೈಫ್‌ ಗಾರ್ಡ್‌ ಸಿಬ್ಬಂದಿಯಾದ ಹರೀಶ್‌ ಕಾಮತ, ಪಾಂಡುರಂಗ ಅಂಬಿಗ, ಪ್ರಭಾಕರ್‌ ಅಂಬಿಗ ತಕ್ಷಣ ಧಾವಿಸಿ ರಕ್ಷಣೆ ಮಾಡಿದ್ದಾರೆ. ಪ್ರವಾಸಿ ಮಿತ್ರ ಸತೀಶ ನಾಯ್ಕ ಸಹಾಯ ಮಾಡಿದ್ದಾರೆ.

ವಿದೇಶಿ ಪ್ರಜೆ ರಕ್ಷಣೆ: ಇನ್ನೊಂದು ಘಟನೆಯಲ್ಲಿಇಸ್ರೇಲ್‌ ಮೂಲದ ವಿಕ್ಟರ್‌ (73) ಎನ್ನುವ ವಿದೇಶಿ ಪ್ರಜೆ ಓಂ ಬೀಚಿನಲ್ಲಿಈಜುತ್ತಿದ್ದಾಗ ಸಮುದ್ರದ ಅಲೆಯಲ್ಲಿಸಿಲುಕಿ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಲೈಫ್‌ ಗಾರ್ಡ್‌ ಸಹಾಯ ಕೋರಿದರು. ಅದನ್ನು ಗಮನಿಸಿದ ಸಿಬ್ಬಂದಿಯಾದ ಪಾಂಡುರಂಗ ಅಂಬಿಗ, ಹರೀಶ್‌ ಹರಿಕಂತ್ರ, ಪ್ರಭಾಕರ ಅಂಬಿಗ ತಕ್ಷಣ ರಕ್ಷಣೆ ಮಾಡಿದರು. ಇವರಿಗೆ ಸುಪರ್‌ವೈಸರ್‌ ರವಿ ನಾಯ್ಕ ಮತ್ತು ಪ್ರವಾಸಿ ಮಿತ್ರ ಸತೀಶ್‌ ನಾಯ್ಕ ಸಹಾಯ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ