ಆ್ಯಪ್ನಗರ

ಬೇಣದಹಳ್ಳಿಯಲ್ಲಿ ಸಂಕುಲ ಗ್ರಾಮೋತ್ಸವ

ಅಂಕೋಲಾ : ಸಂಕುಲ ಗ್ರಾಮೋತ್ಸವ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯಲಿ. ಎಲ್ಲರ ಸಹಭಾಗಿತ್ವದ ಮೂಲಕ ಮುಂದಿನ ದಿನಗಳಲ್ಲಿಯೂ ನಿಸರ್ಗದ ಮಡಿಲಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಸಂಘಟನೆಯನ್ನು ಮಾಡಿಕೊಂಡು ಎಲ್ಲರ ಕಣ್ಣು ತೆರೆಸುವ ಪ್ರಯತ್ನವಾಗಬೇಕಿದೆ ಎಂದು ಅಂಕೋಲಾ ಠಾಣೆಯ ಪೊಲೀಸ್‌ ನಿರೀಕ್ಷ ಕ ಪ್ರಮೋದಕುಮಾರ ಬಿ. ಹೇಳಿದರು.

Vijaya Karnataka 12 Apr 2019, 5:00 am
ಅಂಕೋಲಾ : ಸಂಕುಲ ಗ್ರಾಮೋತ್ಸವ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿ ಬರೆಯಲಿ. ಎಲ್ಲರ ಸಹಭಾಗಿತ್ವದ ಮೂಲಕ ಮುಂದಿನ ದಿನಗಳಲ್ಲಿಯೂ ನಿಸರ್ಗದ ಮಡಿಲಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಸಂಘಟನೆಯನ್ನು ಮಾಡಿಕೊಂಡು ಎಲ್ಲರ ಕಣ್ಣು ತೆರೆಸುವ ಪ್ರಯತ್ನವಾಗಬೇಕಿದೆ ಎಂದು ಅಂಕೋಲಾ ಠಾಣೆಯ ಪೊಲೀಸ್‌ ನಿರೀಕ್ಷ ಕ ಪ್ರಮೋದಕುಮಾರ ಬಿ. ಹೇಳಿದರು.
Vijaya Karnataka Web KWR-11ANK2


ಅವರು ಮೊಗಟಾ ಗ್ರಾ.ಪಂ. ವ್ಯಾಪ್ತಿಯ ಬೇಣದಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀರಾಮ ವನವಾಸಿ ಗ್ರಾಮವಿಕಾಸ ಸಂಕುಲ ಸಮಿತಿ ಹಮ್ಮಿಕೊಂಡ ಸಂಕುಲ ಗ್ರಾಮೋತ್ಸವದಲ್ಲಿಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕ್ರೀಡೆ, ಕಲೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಗ್ರಾಮಗಳ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಇಂತಹ ಉತ್ಸವಗಳನ್ನು ನಡೆಸುವುದು ಅರ್ಥಪೂರ್ಣ ಎಂದರು.

ಸಾಮಾಜಿಕ ಕಾರ್ಯಕರ್ತ ಸುಭಾಶ ಕಾರೇಬೈಲ್‌ ಮಾತನಾಡಿ, ವನವಾಸಿ ಕಲ್ಯಾಣ ಸಂಸ್ಥೆಯಿಂದ ವರ್ಷಂಪ್ರತಿ ಇಂತಹ ಉತ್ಸವಗಳು ಕುಗ್ರಾಮಗಳಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಇಲ್ಲಿಯ ಜನರು ಸುಸಂಸ್ಕೃತರು. ಮೂಲಭೂತ ಸೌಕರ್ಯಗಳಿಂದ ವಂಚಿತರಾದರೂ ಇಂತಹ ಕಾರ್ಯಕ್ರಮಗಳನ್ನು ಪಟ್ಟಣಗಳಿಗಿಂತ ವೈಭವೋಪೇತವಾಗಿ ಆಚರಿಸುತ್ತಿರುವುದು ಇವರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ. ಎಲ್ಲರೂ ಜೊತೆಯಾಗಿ ಈ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದರು.

ವನವಾಸಿ ಕಲ್ಯಾಣ ಸಂಸ್ಥೆಯ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯದರ್ಶಿ ಶ್ರೀಪಾದ ಜಿ., ಪ್ರಮುಖ ಬಾಸ್ಕರ್‌ ವಿ., ಜಿಲ್ಲಾ ಪ್ರಮುಖ ಶ್ರೀಧರ್‌ ಶಾಲೆಹಕ್ಕಲ್‌, ಕುಂಬ್ರಿ ಮರಾಠೆ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮರಾಠೆ, ಸಂಕುಲ ಗ್ರಾಮೋತ್ಸವ ಸಮಿತಿಯ ಅಧ್ಯಕ್ಷ ವೆಂಕಟರಮಣ ಮರಾಠೆ, ಸನ್ಮಾನಿತರಾದ ನರಸಿಂಹ ಸಿದ್ದಿ, ಪೋಲೀಸ್‌ ಪೇದೆ ಗಣಪತಿ ನಾಯಕ, ಮಂಜುನಾಥ ಹನುಮಕ್ಕನವರ್‌, ಶಿವಲೀಲಾ, ಇನ್ನಿತರರು ಉಪಸ್ಥಿತರಿದ್ದರು.

ಸಂದೀಪ ಮರಾಠೆ ಸ್ವಾಗತಿಸಿದರು. ಕೇಶವ ಮರಾಠೆ ನಿರೂಪಿಸಿದರು. ಸಂಗೀತಾ ಮರಾಠೆ ಪ್ರಾರ್ಥಿಸಿದರು. ಎರಡು ದಿನಗಳ ಕಾಲ ನಡೆದ ಗ್ರಾಮೋತ್ಸವದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಸಮಾರಂಭ ಯಶಸ್ವಿಯಾಗಿ ನಡೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ