ಆ್ಯಪ್ನಗರ

ಸ್ವರ್ಣವಲ್ಲೀ, ಅ.17ರಿಂದ ಶರನ್ನವರಾತ್ರಿ ಉತ್ಸವ

ಶಿರಸಿ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದಲ್ಲಿಅ.17 ರಿಂದ 26ರವರೆಗೆ ನಡೆಯುವ ಶರನ್ನವರಾತ್ರಿ ಉತ್ಸವವು ಧಾರ್ಮಿಕ ಆಚರಣೆಯೊಂದಿಗೆ ಸಂಪನ್ನಗೊಳ್ಳಲಿದೆ. ಕೊರೋನಾ ಸೋಂಕು ವ್ಯಾಪಕತೆ ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಭಕ್ತರ ಆಗಮನದ

Vijaya Karnataka 29 Sep 2020, 5:00 am
ಶಿರಸಿ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದಲ್ಲಿಅ.17 ರಿಂದ 26ರವರೆಗೆ ನಡೆಯುವ ಶರನ್ನವರಾತ್ರಿ ಉತ್ಸವವು ಧಾರ್ಮಿಕ ಆಚರಣೆಯೊಂದಿಗೆ ಸಂಪನ್ನಗೊಳ್ಳಲಿದೆ. ಕೊರೋನಾ ಸೋಂಕು ವ್ಯಾಪಕತೆ ಹೆಚ್ಚಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಭಕ್ತರ ಆಗಮನದ ನಿರ್ಬಂಧವನ್ನು ಇನ್ನೂ ಕೆಲವು ತಿಂಗಳುಗಳ ಕಾಲ ವಿಸ್ತರಿಸಲಾಗಿದೆ. ನವರಾತ್ರಿಯಲ್ಲಿಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಕೇವಲ ಪ್ರತಿದಿನ ನಡೆಯುವ ಧಾರ್ಮಿಕ ದೇವತಾ ಕೈಂಕರ್ಯಗಳು ಸುರಕ್ಷಾ ನಿಯಮದಡಿ ನಡೆಯಲಿವೆ.
Vijaya Karnataka Web sharanavavaratri festival from oct 17th
ಸ್ವರ್ಣವಲ್ಲೀ, ಅ.17ರಿಂದ ಶರನ್ನವರಾತ್ರಿ ಉತ್ಸವ


ಪ್ರತಿವರ್ಷವೂ ವಿಶೇಷವಾಗಿ ರಾಮಕ್ಷತ್ರಿಯ ಸಮಾಜದವರು ಪ್ರತಿದಿನ ದೇವಿಯ ಸೇವೆಯಲ್ಲಿತೊಡಗಿಕೊಳ್ಳುತ್ತಿದ್ದು ಅವರೂ ಕೂಡ ಒಂದೊಂದು ದಿನ ಇಬ್ಬರು ಮಾತ್ರ ಆಗಮಿಸಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.

ಈ ಸಂದರ್ಭದಲ್ಲಿಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನ ಸಂದೇಶ ನೀಡಿದ್ದು ನವರಾತ್ರಿ ಉತ್ಸವದ ಸಂದರ್ಭದಲ್ಲಿಎಲ್ಲರ ಸುರಕ್ಷತೆ ದೃಷ್ಟಿಯಿಂದ ನಿರ್ಧರಿಸಲಾದ ಈ ನಿಯಮಕ್ಕೆ ಶಿಷ್ಯ-ಭಕ್ತರೆಲ್ಲರೂ ಅನ್ಯಥಾ ಭಾವಿಸದೆ ಹೊಂದಿಕೊಳ್ಳಬೇಕು. ಇಡೀ ಪ್ರಪಂಚವೇ ಕೊರೊನಾ ಸೋಂಕಿನಿಂದ ಆತಂಕಕ್ಕೊಳಗಾಗಿದೆ. ಈ ಸಂದರ್ಭ ಭಯ ಪಡುವ ಸಮಯವಲ್ಲ, ಎದುರಿಸುವ ಸಮಯ. ಅಲಕ್ಷತ್ರ್ಯ ಸಲ್ಲದು ಎಂದು ತಿಳಿಸಿದ್ದಾರೆ.

ಶಿಷ್ಯ-ಭಕ್ತರ ಕಲ್ಯಾಣಕ್ಕಾಗಿ ನಡೆಯುವ ಈ ಉತ್ಸವಗಳಲ್ಲಿಸೇವೆ ಮಾಡಿಸುವವರು ದೂ: 08384-279359, 279311) ಅಂಚೆ ಮೂಲಕ ಪ್ರಸಾದ ಪಡೆದುಕೊಳ್ಳಬಹುದು ಎಂದು ಮಠದ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ