ಆ್ಯಪ್ನಗರ

ಬಹುಮುಖ ವ್ಯಕ್ತಿತ್ವದ ಶರ್ಮಾ: ಸ್ಮರಣೆ

ಶಿರಸಿ : ನಮ್ಮ ಭವಿಷ್ಯತ್ತಿನ ಗುರಿಯನ್ನು ರೂಪಿಸಿಕೊಳ್ಳಬೇಕು. ಒಳ್ಳೆಯ ಕೆಲಸ ಮಾಡಿದರೆ ಆ ಕೆಲಸವೇ ಪ್ರತಿಷ್ಠೆ ತರುತ್ತದೆ. ಜೀವನದಲ್ಲಿ ಬರುವ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು. ಎಲ್ಲರ ಜೊತೆ ಒಂದಾಗಿ ನಾವು ತಿಳಿದಿದ್ದನ್ನು ಬೇರೆಯವರಿಗೆ ತಿಳಿಸುತ್ತಾ ಬೇರೆಯವರಿಗೂ ಮಾರ್ಗದರ್ಶಕನಾಗಿರಬೇಕು ಎಂದು ಹೊನ್ನಾವರದ ಕೃಷ್ಣಮೂರ್ತಿ ಹೆಬ್ಬಾರ ಹೇಳಿದರು.

Vijaya Karnataka 26 Aug 2019, 5:00 am
ಶಿರಸಿ : ನಮ್ಮ ಭವಿಷ್ಯತ್ತಿನ ಗುರಿಯನ್ನು ರೂಪಿಸಿಕೊಳ್ಳಬೇಕು. ಒಳ್ಳೆಯ ಕೆಲಸ ಮಾಡಿದರೆ ಆ ಕೆಲಸವೇ ಪ್ರತಿಷ್ಠೆ ತರುತ್ತದೆ. ಜೀವನದಲ್ಲಿ ಬರುವ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಬೇಕು. ಎಲ್ಲರ ಜೊತೆ ಒಂದಾಗಿ ನಾವು ತಿಳಿದಿದ್ದನ್ನು ಬೇರೆಯವರಿಗೆ ತಿಳಿಸುತ್ತಾ ಬೇರೆಯವರಿಗೂ ಮಾರ್ಗದರ್ಶಕನಾಗಿರಬೇಕು ಎಂದು ಹೊನ್ನಾವರದ ಕೃಷ್ಣಮೂರ್ತಿ ಹೆಬ್ಬಾರ ಹೇಳಿದರು.
Vijaya Karnataka Web sharma of the multifaceted personality memory
ಬಹುಮುಖ ವ್ಯಕ್ತಿತ್ವದ ಶರ್ಮಾ: ಸ್ಮರಣೆ


ಶನಿವಾರ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಎಲ್‌.ಟಿ.ಶರ್ಮಾ ಪ್ರತಿಷ್ಠಾನ ಸಹಯೋಗದೊಂದಿಗೆ ಮೋಟಿನಸರ ಸ್ಮಾರಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಂಸ್ಥಾಪಕ ಪ್ರಾಚಾರ್ಯ ಎಲ್‌.ಟಿ. ಶರ್ಮಾ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಳ್ಳೆಯ ನಾಯಕ ಉತ್ತಮ ಗುರಿಯನ್ನಿಟ್ಟುಕೊಂಡು ಆ ಗುರಿಯನ್ನು ತಲುಪುವ ಪಥದಲ್ಲಿ ತನ್ನವರನ್ನು ಜೊತೆಗೂಡಿಸಿಕೊಂಡು ಮುನ್ನಡೆಸುತ್ತಾನೆ. ಇಂತಹ ಬಹುಮುಖಿ ವ್ಯಕ್ತಿತ್ವ ಶರ್ಮಾರವರದ್ದಾಗಿತ್ತು, ಹಾಗಾಗಿ ಎಲ್‌.ಟಿ. ಶರ್ಮಾರವರ ಯಶೋಗಾಥೆಯನ್ನು ವಿದ್ಯಾರ್ಥಿಗಳು ಅರಿಯಬೇಕಾದ ಅಗತ್ಯತೆ ಇದೆ ಎಂದರು.

ಬದುಕಿನ ಭವ್ಯತೆಯನ್ನು ಹೊಂದಿದ ಪುಣ್ಯ ಜೀವಿ ಎಲ್‌.ಟಿ.ಶರ್ಮಾರವರು ಕಟ್ಟಿದ ಸಂಘಟನೆ ಇಂದಿನ ದಿನಮಾನಗಳಲ್ಲಿ ಮೂಲೆಗುಂಪಾಗಿದೆ. ಅವುಗಳನ್ನು ತೆರೆಯುವ ಕಾರ್ಯ ನಮ್ಮಿಂದಾಗಬೇಕು. ತನಗಾಗಿ ತಾನು ಅರಳುತ್ತ, ಇತರರನ್ನೂ ಅರಳಿಸುತ್ತಾ ಬದುಕಿದ ಒಂದು ಅದ್ಭುತ ಚೈತನ್ಯ ಎಲ್‌.ಟಿ.ಶರ್ಮಾ ಅವರಾಗಿದ್ದರು ಎಂದರು.

ನಿವೃತ್ತ ಪ್ರಾಚಾರ್ಯ ಎಸ್‌.ಐ.ಭಟ್ಟ ಮಾತನಾಡಿ ವಿದ್ಯಾರ್ಥಿಗಳಲ್ಲಿ ಎಲ್ಲಿಯವರೆಗೆ ಕ್ರಿಯಾ ಕೌಶಲ್ಯ ಇರುತ್ತದೆಯೋ ಅಲ್ಲಿಯವರೆಗೆ ಕಾಲೇಜಿನ ಸರ್ವತೋಮುಖ ಅಭಿವೃದ್ಧಿ ಆಗುತ್ತದೆ. ಮಹಾನ್‌ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಅರಿಯುವುದರಿಂದ ಪ್ರೇರಣೆ ದೊರೆಯುತ್ತದೆ ಎಂದರು.

ದಂತ ವೈದ್ಯ ಡಾ. ಟಿ.ನಾರಾಯಣ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎ.ಕೆ.ಕಿಣಿ ಸ್ವಾಗತಿಸಿ ಪರಿಚಯಿಸಿದರು. ಪ್ರೊ.ಎಂ.ಎನ್‌ ಭಟ್‌ ವಂದಿಸಿದರು. ಹರ್ಷ ಹೆಗಡೆ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ