ಆ್ಯಪ್ನಗರ

ಶಿರಸಿಯ ವಿಶಾಲನಗರ 2 ಆಸ್ಪತ್ರೆ ಸೀಲ್‌ಡೌನ್‌

ಶಿರಸಿ : ಬೆಂಗಳೂರಿಗೆ ಹೋಗಿಬಂದಿದ್ದ ವ್ಯಕ್ತಿಯೊಬ್ಬರಲ್ಲಿಕೊರೊನಾ ಸೋಂಕು ದೃಢವಾಗಿದ್ದರಿಂದ ನಗರದ ಮರಾಠಿಕೊಪ್ಪ ಸಮೀಪದ ವಿಶಾಲನಗರ ಹಾಗು ಸೊಂಕಿತ ಚಿಕಿತ್ಸೆಗೆ ತೆರಳಿದ್ದ ಎರಡು ಆಸ್ಪತ್ರೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

Vijaya Karnataka 4 Jul 2020, 5:00 am
ಶಿರಸಿ : ಬೆಂಗಳೂರಿಗೆ ಹೋಗಿಬಂದಿದ್ದ ವ್ಯಕ್ತಿಯೊಬ್ಬರಲ್ಲಿಕೊರೊನಾ ಸೋಂಕು ದೃಢವಾಗಿದ್ದರಿಂದ ನಗರದ ಮರಾಠಿಕೊಪ್ಪ ಸಮೀಪದ ವಿಶಾಲನಗರ ಹಾಗು ಸೊಂಕಿತ ಚಿಕಿತ್ಸೆಗೆ ತೆರಳಿದ್ದ ಎರಡು ಆಸ್ಪತ್ರೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದರು.
Vijaya Karnataka Web 3SRS15B_26
ಶಿರಸಿಯ ವಿಶಾಲನಗರ ಸೀಲ್‌ಡೌನ್‌ ಮಾಡಲಾಗಿದೆ.


ನಗರದ ತಮ್ಮ ಕಾರ್ಯಾಲಯದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಅವರು ಮಾಹಿತಿ ನೀಡಿದರು.

ವಿಶಾಲನಗರದ 40ವರ್ಷದ ಸೋಂಕಿತ ವ್ಯಕ್ತಿ ಕಳೆದ ಜೂನ್‌ 22ರಂದು ದಾವಣಗೆರೆವರೆಗೆ ಬೈಕ್‌ನಲ್ಲಿಪ್ರಯಾಣಿಸಿ ಅಲ್ಲಿಂದ ಬಸ್‌ನಲ್ಲಿಬೆಂಗಳೂರಿಗೆ ತೆರಳಿದ್ದನು. ತನ್ನ ಕೆಲಸ ಮುಗಿಸಿಕೊಂಡು ಜುಲೈ 23ಕ್ಕೆ ಪುನಃ ದಾವಣಗೆರೆ ಬಂದು ಶಿರಸಿಗೆ ವಾಪಸಾಗಿದ್ದನು. ನಂತರ ಈತನಿಗೆ ಮೈಕೈನೋವು, ಜ್ವರ ಕಾಣಿಸಿಕೊಂಡ ಕಾರಣ ಇಲ್ಲಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದನು. ಈತನಿಗೆ ಜ್ವರ ಇರುವ ಬಗ್ಗೆ ಆಸ್ಪತ್ರೆಯವರು ಆರೋಗ್ಯ ಇಲಾಖೆಗೆ ತಿಳಿಸಿದ್ದರು. ಜೂನ್‌ 30ರಂದು ಈತನ ಗಂಟಲುದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು ಎಂದು ತಿಳಿಸಿದರು.

ಈ ಮಧ್ಯೆ ಜುಲೈ 2ರಂದು ಈತ ಜ್ವರ ಪೂರ್ಣ ಕಡಿಮೆಯಾಗದ ಹಿನ್ನೆಲೆಯಲ್ಲಿಕೋರ್ಟ್‌ ರಸ್ತೆಯ ಇನ್ನೊಂದು ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದನು. ಇದೀಗ ವರದಿ ಬಂದಿದ್ದು ಈತನಿಗೆ ಕೊರೊನಾ ಸೊಂಕು ಪಾಸಿಟಿವ್‌ ಬಂದಿದೆ.

31ಮಂದಿ ಗಂಟಲುದ್ರವ ಪರೀಕ್ಷೆಗೆ... ಸೋಂಕಿತನ ಕುಟುಂಬದ ನಾಲ್ವರು ಸೇರಿದಂತೆ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಸೇರಿದಂತೆ 31ಮಂದಿಯ ಗಂಟಲುದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸೊಂಕಿತ ಮರಾಠಿಕೊಪ್ಪ ಸಮೀಪದ ವಿಶಾಲನಗರ ನಿವಾಸಿಯಾಗಿದ್ದರಿಂದ 15ಮನೆಗಳುಳ್ಳ ಈ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಇಲ್ಲಿಗೆ ಪ್ರತಿನಿತ್ಯ ಆಶಾ ಕಾರ್ಯಕರ್ತೆಯರು ತೆರಳಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಪರಿಶೀಲಿಸಲಿದ್ದಾರೆ ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ