ಆ್ಯಪ್ನಗರ

ಶಿವಗಂಗಾ ವಿವಾಹ ಸಂಭ್ರಮ

ಗೋಕರ್ಣ : ಬೆಳಕಿನ ಹಬ್ಬದಲ್ಲಿಊರಿನ ಎಲ್ಲೆಡೆ ಹಬ್ಬದ ಸಂಭ್ರಮ. ಇದರ ಜೊತೆ ಮದುವೆಯ ಸಂಭ್ರಮ. ಇದು ಶ್ರೀ ಕ್ಷೇತ್ರ ಗೋಕರ್ಣದಲ್ಲಿನಡೆಯುವ ವಿಶೇಷ ಹಬ್ಬ. ಗೋಧೂಳಿ ಮುಹೂರ್ತದಲ್ಲಿಶ್ರೀ ವಿಲಂಬ ಸಂವತ್ಸರದ ಶಿವಗಂಗಾ ವಿವಾಹ ಮಹೋತ್ಸವವು ಅಶ್ವೀಜ ಬಹುಳ ಚತುರ್ದಶಿ ದಿನ (ಶನಿವಾರ ಸಂಜೆ) ಕೋವಿಡ್‌ ಕಾರಣದಿಂದಾಗಿ ಸರಳವಾಗಿ ನಡೆಯಿತು.

Vijaya Karnataka 15 Nov 2020, 5:00 am
ಗೋಕರ್ಣ : ಬೆಳಕಿನ ಹಬ್ಬದಲ್ಲಿಊರಿನ ಎಲ್ಲೆಡೆ ಹಬ್ಬದ ಸಂಭ್ರಮ. ಇದರ ಜೊತೆ ಮದುವೆಯ ಸಂಭ್ರಮ. ಇದು ಶ್ರೀ ಕ್ಷೇತ್ರ ಗೋಕರ್ಣದಲ್ಲಿನಡೆಯುವ ವಿಶೇಷ ಹಬ್ಬ. ಗೋಧೂಳಿ ಮುಹೂರ್ತದಲ್ಲಿಶ್ರೀ ವಿಲಂಬ ಸಂವತ್ಸರದ ಶಿವಗಂಗಾ ವಿವಾಹ ಮಹೋತ್ಸವವು ಅಶ್ವೀಜ ಬಹುಳ ಚತುರ್ದಶಿ ದಿನ (ಶನಿವಾರ ಸಂಜೆ) ಕೋವಿಡ್‌ ಕಾರಣದಿಂದಾಗಿ ಸರಳವಾಗಿ ನಡೆಯಿತು.
Vijaya Karnataka Web 14 GKN 1 C_24
ಪಲ್ಲಕ್ಕಿಯಲ್ಲಿಶಿವಗಂಗಾ ಕಲ್ಯಾಣೋತ್ಸವ ನಡೆಯಿತು.


ಗೋಕರ್ಣದ ವಿಶಾಲವಾದ ಮಹಾಬಲೇಶ್ವರ ದೇವಾಲಯದ ಬಳಿ ಇರುವ ಕಡಲ ತೀರದಲ್ಲಿಗೋಧೂಳಿ ಮುಹೂರ್ತದಲ್ಲಿನೂರಾರು ಭಕ್ತರ ಸಮ್ಮುಖದಲ್ಲಿನಿಶ್ಚಯಿತ ವಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು. ಕಡಲಿನ ಅಬ್ಬರ, ವಾಧ್ಯಘೋಷ, ವೇದಘೋಷ, ವಿಶಿಷ್ಟ ತೋರಣ, ಗುಮಟೆಪಾಂಗ, ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗು ನೀಡಿದವು. ಭಕ್ತರು ಆರತಿ ನೀಡಿ ದೇವದಂಪತಿಯನ್ನು ಬರಮಾಡಿಕೊಂಡರು. ಹೀಗೆ ಪೂಜೆ ನಡೆದ ಕೆಲವೇ ಕ್ಷಣ ಮಾತ್ರದಲ್ಲಿತೋರಣ ಇಲ್ಲವಾಗುವುದು ಇದರ ವಿಶೆæೕಷ. ವೇ.ಶಿವು ಭಟ್‌ ಹಾಗೂ ವೇ.ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು.

ಈ ವೇಳೆ ಪೊಲೀಸ್‌ ವಿಶೇಷ ತುಕಡಿ ನಿಯೋಜಿಸಲಾಗಿತ್ತು. ಹಲವು ವರ್ಷಗಳ ಹಿಂದೆ ಮಾವಿನ ತೋರಣದ ಎಲೆಯನ್ನು ಪಡೆಯುವಾಗ ಗಲಾಟೆ ನಡೆದಿತ್ತು ಎಂಬ ಕಾರಣದಿಂದ ಪೊಲೀಸ್‌ ಕಾವಲು ಇರುತ್ತದೆ. ಅಲ್ಲದೇ ಈ ಭಾಗದಲ್ಲಿ144 ಕಲಂ ಕೂಡ ಜಾರಿಗೊಳಿಸಲಾಗಿದೆ. ಕುಮಟಾ ಸಿಪಿಐ ಪರಮೇಶ್ವರ ಗುನಗಾ, ಗೋಕರ್ಣ ಪಿಎಸ್‌ಐ ನವೀನ್‌ ನಾಯ್ಕ ಇವರ ನೇತೃತ್ವದ ಪೊಲೀಸ್‌ ಪಡೆ ಉತ್ತಮ ಭದ್ರತೆ ಕಲ್ಪಿಸಿತು.

ವಿವಾಹ ಮಹೋತ್ಸವದ ನಂತರ ಶಿವಗಂಗೆಯರು ಶ್ರೀ ದೇವಾಲಯದ 'ಅಮೃತಾನ್ನ' ಭೋಜನ ಶಾಲೆಗೆ ಚಿತ್ತೆತ್ರೖಸಿ ದೇವರಾಜೋಪಚಾರ ಪೂಜೆ ಸ್ವೀಕರಿಸಿದರು. ಅನಂತರ ಪ್ರಸಾದ ವಿತರಣೆ ನಡೆಯಿತು. ಉಪಾಧಿವಂತ ಮಂಡಲದ ಸದಸ್ಯರು, ಊರ ನಾಗರಿಕರು, ಎಲ್ಲಾಸಮಾಜದ ಬಂಧುಗಳು ನೆರೆದಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ