ಆ್ಯಪ್ನಗರ

ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಹಳಿಯಾಳ : ಮೈಸೂರು ಮೂಲದ ವ್ಯಕ್ತಿಯೊಬ್ಬ ಕಾರೊಂದರಲ್ಲಿ ನಾಡ ಪಿಸ್ತೂಲಿನಿಂದ ತೆಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೆಸರೊಳ್ಳಿ ಗ್ರಾಪಂ ವ್ಯಾಪ್ತಿಯ ಅಜಗಾಂವ ಸಮೀಪ ರಾಜ್ಯ ಹೆದ್ದಾರಿಯ ಮೇಲೆ ಶನಿವಾರ ರಾತ್ರಿ ನಡೆದಿದೆ.

Vijaya Karnataka 11 Feb 2019, 5:00 am
ಹಳಿಯಾಳ : ಮೈಸೂರು ಮೂಲದ ವ್ಯಕ್ತಿಯೊಬ್ಬ ಕಾರೊಂದರಲ್ಲಿ ನಾಡ ಪಿಸ್ತೂಲಿನಿಂದ ತೆಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೆಸರೊಳ್ಳಿ ಗ್ರಾಪಂ ವ್ಯಾಪ್ತಿಯ ಅಜಗಾಂವ ಸಮೀಪ ರಾಜ್ಯ ಹೆದ್ದಾರಿಯ ಮೇಲೆ ಶನಿವಾರ ರಾತ್ರಿ ನಡೆದಿದೆ.
Vijaya Karnataka Web shoot and commit suicide
ಗುಂಡು ಹಾರಿಸಿಕೊಂಡು ಆತ್ಮಹತ್ಯೆ


ಮೈಸೂರು ಜಿಲ್ಲೆಯ ಟಿ.ನರಸಿಂಹಪುರ ಪಟ್ಟಣದ ಮಂಜುನಾಥ್‌ ವಾಸು(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಮೈಸೂರಿನಲ್ಲಿ ವ್ಯವಹಾರ ಮಾಡುತ್ತಿದ್ದು, ಕಾರಿನಲ್ಲಿ ದ ಬಂದ ಈತ ಪಟ್ಟಣದಿಂದ ಕೇವಲ 8 ಕಿಮೀ ಅಂತರದಲ್ಲಿರುವ ಅಜಗಾಂವ ಗ್ರಾಮದ ಸಮೀಪ ಕಾರಿನಲ್ಲಿ ತೆಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಮಯದಲ್ಲಿ ಕಾರು ಚಾಲನೆ ಸ್ಥಿತಿಯಲ್ಲಿದ್ದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಮೃತನ ದೇಹವನ್ನು ಕಾರವಾರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಡಾ. ಮೋಹನಪ್ರಸಾದ, ಸಿಪಿಐ ಬಿ.ಎಸ್‌.ಲೋಕಾಪೂರ ಮತ್ತು ಪಿಎಸ್‌ಐ ಆನಂದ ಮೂರ್ತಿ . ಸಿ. ಅವರು ಪರಿಶೀಲನೆ ನಡೆಸಿ ಮೃತ ವ್ಯಕ್ತಿಯ ವಿಳಾಸ ಮತ್ತು ಇನ್ನಿತರ ಮಾಹಿತಿಗಳನ್ನು ಪತ್ತೆ ಹಚ್ಚಿದ್ದಾರೆ. ಕೊಲೆಯ ಶಂಕೆಯೂ ವ್ಯಕ್ತವಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಳಿಯಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ