ಆ್ಯಪ್ನಗರ

ಸಿದ್ದಾಪುರ ತಾಲೂಕು: 3 ಸಂತ್ರಸ್ತರ ಕೇಂದ್ರ ಸ್ಥಾಪನೆ

ಸಿದ್ದಾಪುರ: ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಅನಾಹುತವಾಗುವುದು ಮುಂದುವರಿಯುತ್ತಿದೆ. ಈಗಾಗಲೇ ಸೋವಿನಕೊಪ್ಪ ಗ್ರಾ.ಪಂ. ವ್ಯಾಪ್ತಿ ಹೆಮ್ಮನಬೈಲ್‌ನಲ್ಲಿ ಆರು ಕುಟುಂಬಗಳ 32 ಜನರನ್ನು ಸೋವಿನಕೊಪ್ಪ ಸರಕಾರಿ ಶಾಲೆಯಲ್ಲಿ ಇರಿಸಲಾಗಿದೆ.

Vijaya Karnataka 9 Aug 2019, 5:00 am
ಸಿದ್ದಾಪುರ: ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಅನಾಹುತವಾಗುವುದು ಮುಂದುವರಿಯುತ್ತಿದೆ. ಈಗಾಗಲೇ ಸೋವಿನಕೊಪ್ಪ ಗ್ರಾ.ಪಂ. ವ್ಯಾಪ್ತಿ ಹೆಮ್ಮನಬೈಲ್‌ನಲ್ಲಿ ಆರು ಕುಟುಂಬಗಳ 32 ಜನರನ್ನು ಸೋವಿನಕೊಪ್ಪ ಸರಕಾರಿ ಶಾಲೆಯಲ್ಲಿ ಇರಿಸಲಾಗಿದೆ.
Vijaya Karnataka Web KWR-8SDPR-1


ಅದೇ ರೀತಿ ಕವಂಚೂರು ಗ್ರಾ.ಪಂ. ವ್ಯಾಪ್ತಿಯ ಕಲ್ಯಾಣಪುರದಲ್ಲಿ ಆರು ಮನೆಗಳಿಗೆ ನೀರು ನುಗ್ಗಿದ್ದು, 36 ಜನ ಸಂತ್ರಸ್ತರನ್ನು ಅಕ್ಕುಂಜಿ ಶಾಲೆಯಲ್ಲಿ ಇರಿಸಲಾಗಿದೆ. ಇದೇ ಗ್ರಾಮದ ಇನ್ನೊಂದು ಭಾಗದಲ್ಲಿರುವ 17 ಮನೆಗಳ ಮೇಲೆ ಗುಡ್ಡ ಕುಸಿದಿದ್ದು, ಯಾವುದೇ ಅಪಾಯವಾಗಿಲ್ಲ. ಇಲ್ಲಿಯ 65 ಜನರಿಗೆ ಕಲ್ಯಾಣಪುರದ ಸರಕಾರಿ ಶಾಲೆಯಲ್ಲಿ ಸಂತ್ರಸ್ತ ಕೇಂದ್ರವನ್ನು ತೆರೆಯಲಾಗಿದೆ. ಸಂತ್ರಸ್ತರಿಗೆ ಊಟ, ತಿಂಡಿ, ಹೊದೆಯಲು ಬ್ಲ್ಯಾಂಕೆಟ್‌ ಸೇರಿದಂತೆ ಪ್ರಾಥಮಿಕ ಅವಶ್ಯಕತೆಯುಳ್ಳ ಎಲ್ಲ ವಸ್ತುಗಳನ್ನು ನೀಡಲಾಗಿದೆ. ಸಂತ್ರಸ್ತರಿಗೆ ಸಹಾಯ ನೀಡಲು ಬಯಸುವ ಸಂಘ-ಸಂಸ್ಥೆಗಳು ದಾನಿಗಳು ತಹಸೀಲ್ದಾರ ಮೂಲಕ ಇಲ್ಲವೇ ತಹಸೀಲ್ದಾರ ಗಮನಕ್ಕೆ ತಂದು ನೀಡಬೇಕಾಗಿ ತಹಸೀಲ್ದಾರ ಗೀತಾ ಸಿ.ಜಿ. ತಿಳಿಸಿದ್ದಾರೆ.

2547 ಮಿಮೀ ಮಳೆ: ಕಳೆದ 24 ಗಂಟೆಯ ಅವಧಿಯಲ್ಲಿ ತಾಲೂಕಿನಲ್ಲಿ 163.2 ಮಿ.ಮೀ. ಮಳೆಯಾಗಿದ್ದು, ಒಟ್ಟು 2547 ಮಿ.ಮೀ. ಮಳೆಯಾದಂತಾಗಿದೆ. ಮಳೆ ಮುಂದುವರಿದೆ ಕಾರಣ ಶಾಲಾ-ಕಾಲೇಜ್‌ಗಳಿಗೆ ಶುಕ್ರವಾರವೂ ರಜೆಯನ್ನು ಮುಂದುವರಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ