ಆ್ಯಪ್ನಗರ

ಜೇನುಕೃಷಿಗೆ ಏಕಜಾತಿ ನೆಡುತೋಪು ಮಾರಕ

ಶಿರಸಿ : ಸಮಗ್ರ ಜೇನು ಕೃಷಿಗೆ ಏಕ ಜಾತಿ ಸಸ್ಯಗಳ ನೆಡುತೋಪುಗಳು ಮಾರಕವಾಗಿವೆ. ಅಂತಹ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ದೇವನಿಲಯದಲ್ಲಿಎರಡು ದಿನಗಳ ಕಾಲ ನಡೆದ ಕೃಷಿ, ಸವಾಲುಗಳು ಮತ್ತು ಸಾಧ್ಯತೆಗಳು' ಮುಕ್ತಾಯ ಕಾರ್ಯಕ್ರಮದಲ್ಲಿನಿರ್ಣಯ ಕೈಗೊಂಡು ಆಗ್ರಹಿಸಲಾಗಿದೆ.

Vijaya Karnataka 28 Sep 2019, 5:00 am
ಶಿರಸಿ : ಸಮಗ್ರ ಜೇನು ಕೃಷಿಗೆ ಏಕ ಜಾತಿ ಸಸ್ಯಗಳ ನೆಡುತೋಪುಗಳು ಮಾರಕವಾಗಿವೆ. ಅಂತಹ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ದೇವನಿಲಯದಲ್ಲಿಎರಡು ದಿನಗಳ ಕಾಲ ನಡೆದ ಕೃಷಿ, ಸವಾಲುಗಳು ಮತ್ತು ಸಾಧ್ಯತೆಗಳು' ಮುಕ್ತಾಯ ಕಾರ್ಯಕ್ರಮದಲ್ಲಿನಿರ್ಣಯ ಕೈಗೊಂಡು ಆಗ್ರಹಿಸಲಾಗಿದೆ.
Vijaya Karnataka Web single planting to bees is deadly
ಜೇನುಕೃಷಿಗೆ ಏಕಜಾತಿ ನೆಡುತೋಪು ಮಾರಕ


ಎರಡೂ ದಿನಗಳ ವಿಚಾರ ವಿಮರ್ಶೆಯ ನಂತರ ಸರ್ವಾನುಮತದಿಂದ ಒಟ್ಟು 16 ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಪಶ್ಚಿಮ ಘಟ್ಟ ಪ್ರದೇಶಗಳಿಗೆ ವಿದೇಶೀ ಮೆಲಫೆರಾ ಸೂಕ್ತ ತಳಿಯಲ್ಲ. ತುಡವಿ ಜೇನು ತಳಿ ಹೊರತುಪಡಿಸಿ ಬೇರೆ ತಳಿಗಳಿಗೂ ಕೃಷಿಗೆ ಅವಕಾಶವಿರಬೇಕು. ತಳಿ ಅಭಿವೃದ್ಧಿಗೆ ಅನುಕೂಲ ಕಲ್ಪಿಸುವಂತಾಗಬೇಕು ಎಂದು ಒತ್ತಾಯಿಸಲಾಯಿತು.

ತರಬೇತಿ ಕಾರ್ಯಕ್ರಮಗಳು ಸ್ಥಳಿಯ ರೈತರನ್ನು ಒಳಗೊಂಡಿರಬೇಕು. ಜೇನು ಕೃಷಿಗೆ ಸಹಾಯಧನದ ನೆರವು ಸಿಗಬೇಕು. ಜತೆಗೆ ಮಾರುಕಟ್ಟೆ, ಸಂಸ್ಕರಣೆ, ಮೌಲ್ಯವರ್ಧನೆ, ಸಂರಕ್ಷಣೆಗಾಗಿಯೂ ಸಹಾಯಧನ ಸಿಗುವಂತಾಗಬೇಕು.

ಮರ ಹತ್ತಿ ಕಟ್ಟಡಗಳ ಮೇಲೆ ಹತ್ತಿ ಜೇನು ಕೊಯ್ಯುವಂತಹ ಅಪಾಯಕಾರಿ ಜೇನು ವೃತ್ತಿ ಮಾಡುವವರಿಗೆ ಜೀವವಿಮೆ ಜಾರಿಗೆ ಬರಬೇಕು. ಜೇನು ಕೃಷಿಗೂ ಜೀವವಿಮೆ ಬೇಕು ಎಂದು ಇನ್ನಷ್ಟು ನಿರ್ಣಯಗಳಲ್ಲಿಮನವಿ ಮಾಡಿಕೊಳ್ಳಲಾಯಿತು.

ಸರಕಾರವು ಮಿಸರಿ ಜೇನುತಳಿಗಳ ಸಾಕಣೆಗೂ ಪ್ರೋತ್ಸಾಹ ನೀತಿ ರೂಪಿಸಬೇಕು, ರಾಷ್ಟ್ರೀಯ ಜೇನು ಮಂಡಳಿ ನೀಡುವ ಸೌಲಭ್ಯಗಳು ಗ್ರಾಮ ಪಂಚಾಯಿತಿಯ ವರೆಗೂ ವಿಸ್ತರಿಸುವಂತಾಗಬೇಕು. ಇಲಾಖೆಗಳ ಮಟ್ಟದಲ್ಲಿಯೂ ಮುಂದಿನ ದಿನಗಳ ಜೇನುಗಳ ಅಭಿವೃದ್ಧಿಗೆ ಅನುಕೂಲವಾಗುವ ಕಾರ್ಯ ಯೋಜನೆಗಳನ್ನು ರೂಪಿಸಬೇಕು.

ಜೇನು ಗುಣಮಟ್ಟ, ಮಾರುಕಟ್ಟೆಗಳ ಬಗ್ಗೆ ಸೂಕ್ತ ನೀತಿ ಜಾರಿಗೆ ಬರಬೇಕು. ದರ ನಿಗದಿಯ ಕುರಿತು ಚಿಂತನೆ ನಡೆಸಬೇಕು, ರಾಸಾಯನಿಕಗಳ ಸಿಂಪರಣೆಯಿಂದ ಜೇನು ನಾಶವಾಗುತ್ತಿದೆ, ಅಂತಹ ರಾಸಾಯನಿಕಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ