ಆ್ಯಪ್ನಗರ

ಶಿರಸಿ ಸರಕಾರಿ ಪದವಿ ಕಾಲೇಜಿನಲ್ಲಿ 64 ಸಿಸಿ ಕ್ಯಾಮೆರಾ ಅಳವಡಿಕೆ: ಚಕ್ಕರ್‌, ಅನಗತ್ಯ ಮೊಬೈಲ್‌ ಬಳಕೆ ತಡೆಗೆ ಪ್ರಾಚಾರ‍್ಯರ ಕ್ರಮ

CCTV camera in sirsi college: 2788ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುವ ಶಿರಸಿಯ ಬನವಾಸಿ ಮಾರ್ಗದಲ್ಲಿರುವ ಸರಕಾರಿ ಪದವಿ ಕಾಲೇಜಿನಲ್ಲಿ. ಇಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 64 ಸಿಸಿ ಕ್ಯಾಮೆರಾಗಳಿವೆ. ಈ ಮೂಲಕ ತರಗತಿಗೆ ಚಕ್ಕರ್‌ ಹೊಡೆದು ಓಡಾಡುವುದನ್ನು ಪತ್ತೆ ಹಚ್ಚಲು, ಅನಗತ್ಯವಾಗಿ ಮೊಬೈಲ್‌ ಬಳಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಎರಡು ತಿಂಗಳ ಹಿಂದೆ ಪ್ರಾಚಾರ್ಯರಾಗಿ ಬಂದಿರುವ ಡಾ.ದಾಕ್ಷಾಯಿಣಿ ಹೆಗಡೆ ಸಾವಿರಾರು ವಿದ್ಯಾರ್ಥಿಗಳಿರುವ ಈ ಕಾಲೇಜಿಗೆ ಶಿಸ್ತಿನ ಹೊಸ ಸ್ವರೂಪ ನೀಡಲು ಮುಂದಾಗಿದ್ದಾರೆ.

Edited byಹೇಮಂತ್ ಕುಮಾರ್ ಎಸ್ | Vijaya Karnataka Web 27 Sep 2022, 11:58 pm

ಹೈಲೈಟ್ಸ್‌:

  • ಹಳೆ ಹಾಗೂ ಹೊಸ ಕಟ್ಟಡಕ್ಕೆ ಬರಲು ಎರಡೇ ದ್ವಾರ
  • ಸಿಸಿ ಕ್ಯಾಮೆರಾ ನಿಗಾ ಇದೆ, ಜೋಕೆ!
  • ಉತ್ತಮ ಶೈಕ್ಷಣಿಕ ವಾತಾವರಣ ಕಾಪಾಡಲು ಹೊಸಹೆಜ್ಜೆ
  • 41 ಕೊಠಡಿಗಳು, ಲ್ಯಾಬ್‌, ಪ್ರಿನ್ಸಿಪಾಲ್‌, ಸ್ಟಾಫ್‌ ರೂಮುಗಳು, ಲೈಬ್ರರಿ ಹಾಗೂ ಕಾಲೇಜು ದ್ವಾರ, ಎಲ್ಲೆಡೆ ಕ್ಯಾಮೆರಾ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web CCTV Camera
ಸಿಸಿಟಿವಿ ಕ್ಯಾಮೆರಾ
ಶಿರಸಿ: ಎಚ್ಚರ..! ನೀವು ಕ್ಯಾಮೆರಾದ ಕಣ್ಗಾವಲಲ್ಲಿದ್ದೀರಿ... ಹೀಗೆ ಜಾಗೃತಿ ಮೂಡಿಸುವ ಸಂದೇಶಗಳ ಘೋಷವಾಕ್ಯಗಳು, ಸಿಸಿ ಕ್ಯಾಮೆರಾಗಳು (CCTV Camera) ಕಾಲೇಜು ಆವಾರದ ಗೋಡೆಗಳ ಮೇಲೆ ರಾರಾಜಿಸುತ್ತಿವೆ. ಈ ಮೂಲಕ ಕಾಲೇಜಿನಲ್ಲಿ ಶಿಸ್ತು, ಶೈಕ್ಷಣಿಕ ವಾತಾವರಣ ಮೂಡಿಸುವುದಕ್ಕೆ ಹೊಸ ಹೆಜ್ಜೆ ಇಡಲಾಗಿದೆ.
ಇದು ಕಂಡು ಬರುವುದು 2788ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುವ ಶಿರಸಿಯ ಬನವಾಸಿ ಮಾರ್ಗದಲ್ಲಿರುವ ಸರಕಾರಿ ಪದವಿ ಕಾಲೇಜಿನಲ್ಲಿ. ಇಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 64 ಸಿಸಿ ಕ್ಯಾಮೆರಾಗಳಿವೆ. ಈ ಮೂಲಕ ತರಗತಿಗೆ ಚಕ್ಕರ್‌ ಹೊಡೆದು ಓಡಾಡುವುದನ್ನು ಪತ್ತೆ ಹಚ್ಚಲು, ಅನಗತ್ಯವಾಗಿ ಮೊಬೈಲ್‌ ಬಳಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ.
Sirsi KDCC Bank | ಶಿರಸಿ ಕೆಡಿಸಿಸಿ ಬ್ಯಾಂಕ್‌ನಿಂದ ರೈತಾಪಿ ವರ್ಗಕ್ಕೆ ದೊಡ್ಡ ಪ್ರಮಾಣದಲ್ಲಿ ಸಾಲ: 12.05 ಕೋಟಿ ರೂ. ನಿವ್ವಳ ಲಾಭ- ಶಿವರಾಮ ಹೆಬ್ಬಾರ್
ಎರಡು ತಿಂಗಳ ಹಿಂದೆ ಪ್ರಾಚಾರ್ಯರಾಗಿ ಬಂದಿರುವ ಡಾ.ದಾಕ್ಷಾಯಿಣಿ ಹೆಗಡೆ ಸಾವಿರಾರು ವಿದ್ಯಾರ್ಥಿಗಳಿರುವ ಈ ಕಾಲೇಜಿಗೆ ಶಿಸ್ತಿನ ಹೊಸ ಸ್ವರೂಪ ನೀಡಲು ಮುಂದಾಗಿದ್ದಾರೆ.

ಈ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ಕಾಲೇಜು ಅದೆಷ್ಟೋ ವರ್ಷ ಸ್ವಂತ ಕಟ್ಟಡವಿಲ್ಲದೇ ರಾಯಪ್ಪ ಹುಲೇಕಲ್‌ ಶಾಲೆಯಲ್ಲಿಶಿಫ್ಟ್‌ ಆಧಾರದಲ್ಲಿನಡೆದಿತ್ತು. ನಂತರ ಬನವಾಸಿ ಮಾರ್ಗದ ಟಿಪ್ಪು ನಗರದಲ್ಲಿ ಸ್ವಂತ ಕಟ್ಟಡ ನಿರ್ಮಾಣವಾಗಿದ್ದು ಬಿಎ, ಬಿಎಸ್‌ಸಿ, ಬಿಕಾಂ, ಬಿಬಿಎ ಹೀಗೆ ಎಲ್ಲ ವಿಭಾಗಗಳು ಸ್ಥಳಾಂತರವಾಗಿವೆ.

2788 ವಿದ್ಯಾರ್ಥಿಗಳು
ಶಿರಸಿಯಲ್ಲಿ ಹಂಚಿಕೆಯಾಗದೆ ಉಳಿದಿವೆ ಲಕ್ಷಾಂತರ ಮಾಸ್ಕ್‌: ಉತ್ತಮ ಗುಣಮಟ್ಟದ ಮುಖಗವಸುಗಳು ಈಗ ಅನಾಥ

ಕಳೆದ ವರ್ಷ ಕಾಲೇಜಿನಲ್ಲಿ3199 ವಿದ್ಯಾರ್ಥಿಗಳಿದ್ದರು. ಈ ಬಾರಿ 2788 ಜನ ಇದ್ದಾರೆ. ಅದರಲ್ಲಿಪ್ರಥಮ ವರ್ಷದ ಬಿಎ 297, ಬಿಕಾಂ 381, ಬಿಎಸ್‌ಸಿ 30, ಬಿಬಿಎ 83, ದ್ವಿತೀಯ ವರ್ಷದ ಬಿಎ 325, ಬಿಕಾಂ 547, ಬಿಎಸ್‌ಸಿ 87, ಬಿಬಿಎ 75, ತೃತೀಯ ವರ್ಷದ ಬಿಎ ಪದವಿಗೆ 258, ಬಿಕಾಂ 549, ಬಿಎಸ್‌ಸಿ 81, ಬಿಬಿಎ 75 ಪ್ರವೇಶ ಪಡೆದಿದ್ದು, ಪದವಿ ಪ್ರಥಮ ವರ್ಷ ಹೊರತುಪಡಿಸಿ ಇನ್ನುಳಿದ ತರಗತಿಗಳು ಇನ್ನಷ್ಟೇ ಆರಂಭವಾಗಬೇಕಿದೆ. ಶಿರಸಿ ತಾಲೂಕು ಅಲ್ಲದೇ ಹಾವೇರಿ, ಆನವಟ್ಟಿ, ಶಿಕಾರಿಪುರ, ಜಡೆ, ಸಿದ್ದಾಪುರ, ಯಲ್ಲಾಪುರ ಭಾಗದಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. 22 ಕಾಯಂ ಹಾಗು 65 ಅತಿಥಿ ಉಪನ್ಯಾಸಕರಿದ್ದಾರೆ.

ಇಡೀ ಕಾಲೇಜಿಗೂ ಕ್ಯಾಮರಾ ಕಣ್ಣು...

ವಿದ್ಯಾರ್ಥಿಗಳು ತರಗತಿ ಹಾಜರಾಗದೇ ಹೊರಗೆ ಓಡಾಡುವುದು, ಕಾಲೇಜು ಸನೀಹದಲ್ಲೇ ಕುಳಿತು ಅನಗತ್ಯವಾಗಿ ಮೊಬೈಲ್‌ ನೋಡುವುದು, ಅಲ್ಲದೇ ರಾತ್ರಿ ಅನ್ಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇಡೀ ಕಾಲೇಜಿಗೆ ಕ್ಯಾಮೆರಾ ಕಣ್ಣು ಅಳವಡಿಸಲಾಗಿದೆ. 41 ಕೊಠಡಿಗಳು, ಲ್ಯಾಬ್‌, ಪ್ರಿನ್ಸಿಪಾಲ್‌, ಸ್ಟಾಫ್‌ ರೂಮುಗಳು, ಲೈಬ್ರರಿ ಹಾಗೂ ಕಾಲೇಜು ದ್ವಾರ ಹೀಗೆ ಎಲ್ಲೆಡೆ ಕಾಮೆರಾ ಜೋಡಿಸಲಾಗಿದೆ. ಇದೆಲ್ಲವನ್ನು ಪ್ರಾಚಾರ್ಯರ ಕೊಠಡಿಯಲ್ಲಿ ಮಾನಿಟರ್‌ ಮಾಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿ ಈಗ ಶಿಸ್ತಿನಿಂದ ತರಗತಿಗೆ ಹಾಜರಾಗುತ್ತಿದ್ದಾರೆ. ಉಪನ್ಯಾಸಕರು ಸಹ ಆಸಕ್ತಿಯಿಂದ ಪಾಠ ಮಾಡುವಂತಾಗಿದೆ ಎನ್ನುತ್ತವೆ ಕಾಲೇಜು ಮೂಲಗಳು.
ಹಳೆ ಬಸ್‌ನಲ್ಲಿ ಮೊಬೈಲ್‌ ಶೌಚಾಲಯ: ಶಿರಸಿಯ ನಗರಸಭೆಯಿಂದ ವಿನೂತನ ಪ್ರಯೋಗ
ಕಾಲೇಜಿಗೀಗ ಎರಡೇ ದಾರಿ

ಈ ಮೊದಲು ಕೆಲವು ವಿದ್ಯಾರ್ಥಿಗಳು ಕಟ್ಟಡದ ನಡುವೆ ಇರುವ ಸಂದಿಗೊಂದಿಗಳ ನಡುವೆ ಜಂಪ್‌ ಮಾಡಿ ಹೊರಕ್ಕೆ ತೆರಳುತ್ತಿದ್ದರು. ಇದರಿಂದ ಮುಖ್ಯದ್ವಾರಕ್ಕಿಂತ ಹತ್ತಾರು ಒಳದಾರಿಗಳೇ ಮಾರ್ಗಗಳಾಗಿದ್ದವು. ಇಂತಹ ಕಡೆಗಳೆಲ್ಲಿ ಗ್ರಿಲ್ಸ್‌ ಹಾಕಿ ಬಂದ್‌ ಮಾಡಲಾಗಿದೆ. ಹಳೆ ಹಾಗೂ ಹೊಸ ಕಟ್ಟಡಕ್ಕೆ ಬರಲು ಎರಡೇ ದ್ವಾರ ಇಡಲಾಗಿದೆ.

* ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಬೇಕು. ಕಾಲೇಜಿನಲ್ಲಿ ಒಳ್ಳೆಯ ಶೈಕ್ಷಣಿಕ ವಾತಾವರಣ ಇರಬೇಕು ಎಂಬ ಕಾರಣದಿಂದ ಒಂದಷ್ಟು ಹೊಸ ಕಾರ್ಯಗಳನ್ನು ಮಾಡುತ್ತಿದ್ದೇವೆ.

-ಡಾ.ದಾಕ್ಷಾಯಿಣಿ ಹೆಗಡೆ, ಪ್ರಾಚಾರ್ಯೆ, ಸರಕಾರಿ ಪದವಿ ಕಾಲೇಜು, ಶಿರಸಿ
ಲೇಖಕರ ಬಗ್ಗೆ
ಹೇಮಂತ್ ಕುಮಾರ್ ಎಸ್
ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ 2022ರಿಂದ ಕಾರ್ಯನಿರ್ವಹಿಸುತ್ತಿರುವ ಹೇಮಂತ್ ಮಾಧ್ಯಮ ರಂಗಕ್ಕೆ ಅಧಿಕೃತ ಪ್ರವೇಶ ಆಗಿದ್ದು 2011ರಲ್ಲಿ ನ್ಯೂಸ್ ಚಾನೆಲ್ ಮೂಲಕ. ಅದಕ್ಕೂ ಹಿಂದಿನಿಂದ ವಾರಪತ್ರಿಕೆಗಳಿಗೆ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳ ಬರವಣಿಗೆಯಿಂದ ಬರಹದ ನಂಟು ಬೆಳೆಸಿಕೊಂಡಿದ್ದರು. ಸಿನಿಮಾ, ಕ್ರೈಂ, ರಾಜಕೀಯ, ಮೆಟ್ರೊ, ಕನ್ನಡ ಮತ್ತು ಸಂಸ್ಕೃತಿ, ಶಿಕ್ಷಣ, ರಾಷ್ಟ್ರ-ಅಂತಾರಾಷ್ಟ್ರೀಯ ವಿದ್ಯಮಾನಗಳು ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ವಿಸ್ತರಿಸಿಕೊಂಡಿದ್ದಾರೆ. ಟಿವಿ, ಪತ್ರಿಕೆ, ಡಿಜಿಟಲ್‌/ ವೆಬ್‌, ಕೆಲ ಸಮಯ ರೇಡಿಯೊ ಚಾನೆಲ್‌ನಲ್ಲೂ ತೊಡಗಿಸಿಕೊಂಡ ಅನುಭವಿರುವ ಇವರ ಮಂತ್ರ 'ಬದುಕು ನಿರಂತರ'. ಚಾರಣ, ರಂಗಭೂಮಿ, ಪ್ರವಾಸ, ಓದು,...ಹೀಗೆ ಒಂದಷ್ಟು ಅಭ್ಯಾಸ-ಹವ್ಯಾಸಗಳು ಜೊತೆಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ