ಆ್ಯಪ್ನಗರ

ಶಿರಸಿ: ಸೋಂದೆ ಅಂತ್ಯಸಂಸ್ಕಾರ

ಶಿರಸಿ: ಹಿರಿಯ ಸಹಕಾರಿ ಹಾಗು ಸಾಮಾಜಿಕ ಮುಂದಾಳು ಡಾ.ವೈಕುಂಠರಾವ್‌ ಶೇಷಗಿರಿರಾವ್‌ ಸೋಂದೆ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಗರದ ವಿದ್ಯಾನಗರ ರುದ್ರಭೂಮಿಯಲ್ಲಿಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಸೋಂದೆ ಅವರ ಹಿರಿಯ ಅಳಿಯ ರಾಜೇಶ ಧಾಕಪ್ಪ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

Vijaya Karnataka 13 Oct 2020, 5:00 am
ಶಿರಸಿ: ಹಿರಿಯ ಸಹಕಾರಿ ಹಾಗು ಸಾಮಾಜಿಕ ಮುಂದಾಳು ಡಾ.ವೈಕುಂಠರಾವ್‌ ಶೇಷಗಿರಿರಾವ್‌ ಸೋಂದೆ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಗರದ ವಿದ್ಯಾನಗರ ರುದ್ರಭೂಮಿಯಲ್ಲಿಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಸೋಂದೆ ಅವರ ಹಿರಿಯ ಅಳಿಯ ರಾಜೇಶ ಧಾಕಪ್ಪ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
Vijaya Karnataka Web sirsi sonde funeral home
ಶಿರಸಿ: ಸೋಂದೆ ಅಂತ್ಯಸಂಸ್ಕಾರ


ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿಭಾನುವಾರ ನಿಧನರಾಗಿದ್ದ ಮರೆಯಲಾಗದ ಚೇತನ ಡಾ.ಸೋಂದೆ ಅವರ ಪಾರ್ಥಿವ ಶರೀರವನ್ನು ಸೋಮವಾರ ಬೆಳಗ್ಗೆ ನಗರದ ರಾಯರಪೇಟೆಯ ಅವರ ನಿವಾಸಕ್ಕೆ ತರಲಾಯಿತು. ಈ ಸಂದರ್ಭದಲ್ಲಿಸಾಮಾಜಿಕ ಮುಖಂಡರು, ವಿವಿಧ ಕ್ಷೇತ್ರದ ಗಣ್ಯರು, ಸೋಂದೆ ಅವರ ಅಭಿಮಾನಿಗಳು ಆಗಮಿಸಿ ಅಂತಿಮ ದರ್ಶನ ಪಡೆದರು.

ಸಹಾಯಕ ಆಯುಕ್ತೆ ಆಕೃತಿ ಬನ್ಸಾಲ್‌, ತಹಸೀಲ್ದಾರ್‌ ಎಂ.ಆರ್‌.ಕುಲಕರ್ಣಿ, ಜಿಲ್ಲಾಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ, ಶ್ರೀ ಮಹಾವಿಷ್ಣು ದೇವಸ್ಥಾನ ಮೊಕ್ತೇಸರ ವಿಷ್ಣುದಾಸ ಕಾಸರಕೋಡ, ರೋಟರಿ ವಿಶ್ವಸ್ಥ ಮಂಡಳಿ ಪ್ರಮುಖ ಲಕ್ಷಿತ್ರ್ಮೕದಾಸ ಕಾಸರಕೋಡ, ಸೆಂಟ್‌ ಅಂಥೋನಿ ಚರ್ಚನ ಪಾಧರ್‌ ಜಾನ್‌, ಶಿರಸಿ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಜಯದೇವ ನಿಲೇಕಣಿ, ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟರ್‌, ಬ್ಯಾಂಕ್‌ ಸಿಬ್ಬಂದಿಗಳು, ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಾಂಡುರಂಗ ಪೈ, ಎಂಇಎಸ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಿ,ಎಂ.ಹೆಗಡೆ ಮುಳಖಂಡ, ಎಸ್‌.ಪಿ.ಶೆಟ್ಟಿ, ಪ್ರಾಚಾರ್ಯ ಎ.ಕೆ.ಕಿಣಿ, ಟಿಎಸ್‌ಎಸ್‌ ಪ್ರದಾನ ವ್ಯವಸ್ಥಾಪಕ ರವೀಶ ಹೆಗಡೆ, ಯುವ ಮುಂದಾಳು ದೀಪಕ ದೊಡ್ಡೂರು ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ