ಆ್ಯಪ್ನಗರ

ಉದ್ಯೋಗದಲ್ಲಿ ಕೌಶಲ ಅಗತ್ಯ: ಕೋರ್ಸೆ

ಶಿರಸಿ : ಉದ್ಯೋಗದಲ್ಲಿ ದೃಢತೆಗೆ ಕೌಶಲ ವೃದ್ಧಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಎಂದು ಸ್ಕೊಡ್‌ವೆಸ್‌ ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಕೆ.ವಿ.ಕೂರ್ಸೆ ಹೇಳಿದರು. ಇಲ್ಲಿನ ಸ್ಕೊಡ್‌ವೆಸ್‌ ಸಂಸ್ಥೆಯು ಎಫ್‌.ವಿ.ಟಿ.ಆರ್‌.ಎಸ್‌. ಬೆಂಗಳೂರು ಇವರ ಸಹಯೋಗದಲ್ಲಿ

Vijaya Karnataka 30 Jul 2019, 5:00 am
ಶಿರಸಿ : ಉದ್ಯೋಗದಲ್ಲಿ ದೃಢತೆಗೆ ಕೌಶಲ ವೃದ್ಧಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಎಂದು ಸ್ಕೊಡ್‌ವೆಸ್‌ ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಕೆ.ವಿ.ಕೂರ್ಸೆ ಹೇಳಿದರು. ಇಲ್ಲಿನ ಸ್ಕೊಡ್‌ವೆಸ್‌ ಸಂಸ್ಥೆಯು ಎಫ್‌.ವಿ.ಟಿ.ಆರ್‌.ಎಸ್‌. ಬೆಂಗಳೂರು ಇವರ ಸಹಯೋಗದಲ್ಲಿ ಆರಂಭಿಸಿರುವ ಕೌಶಲ ಬೆಂಬಲ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೌಶಲ ಬೆಂಬಲಿತ ಕಾರ್ಯಕ್ರಮವು ಅಭಿಯಾನ ರೂಪಲ್ಲಿ ಜಾರಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು. ಅಸಂಘಟಿತ ವಲಯದಲ್ಲಿ ಅನೇಕ ಯುವ ಜನರು ಅನಿಶ್ಚಿತ ಉದ್ಯೋಗ ಮಾಡುತ್ತಿದ್ದಾರೆ. ಕೌಶಲ್ಯ ಹೊಂದಿದವರಿಗೆ ಉದ್ಯೋಗದ ನಿಶ್ಚಿತತೆ ಸಿಕ್ಕಿ ಸಂಘಟಿತವಾಗಿ ದುಡಿಯುವುದಕ್ಕೆ ಸಾಧ್ಯವಾಗುತ್ತದೆ ಎಂದರು.
Vijaya Karnataka Web skill requirement in employment coursee
ಉದ್ಯೋಗದಲ್ಲಿ ಕೌಶಲ ಅಗತ್ಯ: ಕೋರ್ಸೆ


ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾತನಾಡಿ, ಅಭಿಯಾನದ ಮೂಲಕ ಕೌಶಲ ತರಬೇತಿಯಿಂದ ದೂರವಿರುವ ಯುವಕ-ಯುವತಿಯನ್ನು ಸಂಪರ್ಕಿಸಿ ಕೌಶಲ್ಯಾಭಿವೃದ್ಧಿಯ ಕುರಿತು ಜಾಗೃತಿ ಮೂಡಿಸಿ ಉತ್ತೇಜನ ನೀಡಲಾಗುತ್ತದೆ ಎಂದರು.

ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಸರಸ್ವತಿ ಎನ್‌ ರವಿ, ಸೇಫ್‌ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿತೇಂದ್ರ ಕುಮಾರ, ಸ್ಕೊಡ್‌ವೆಸ್‌ ಮಹಿಳಾ ಸೌಹಾರ್ದ ಸಹಕಾರಿ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣಪತಿ ವಿ. ನಾಯ್ಕ ಉಪಸ್ಥಿತರಿದ್ದರು. ಕಾರ್ಯಕ್ರಮ ಅಧಿಕಾರಿ ರಿಯಾಜ್‌ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ