ಸಿದ್ದಾಪುರ : ಕಳೆದ 25 ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿಸೇವೆಸಲ್ಲಿಸುತ್ತಿರುವ ಕಾನಸೂರಿನ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ರಜತ ಮಹೋತ್ಸವ ಸಂಪನ್ನಗೊಂಡಿತು.
ಕಾನಸೂರಿನ ರುದ್ರಾಂಜನೇಯ ಸಭಾಂಗಣದಲ್ಲಿಬುಧವಾರ ನಡೆದ ಬೆಳ್ಳಿ ಹಬ್ಬದ ಸಭಾ ಕಾರ್ಯಕ್ರಮವನ್ನು ಸತ್ಯ ಸಾಯಿ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ರಾಮದಾಸ ಜೆ. ಆಚಾರಿ ಉದ್ಘಾಟಿಸಿದರು. ಭಗವಾನ್ ಸತ್ಯಸಾಯಿ ಅವರ ಆಶಯದಂತೆ ಸಮಿತಿ ಕೆಲಸ ಮಾಡುತ್ತಿದೆ. ಸಮಾಜ ಸೇವೆಯೇ ನಿಜವಾದ ಗುರು ಸೇವೆ ಎಂದರು.
ಪ್ರಶಾಂತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಆರ್.ಜಿ. ಪೈ ಮಾತನಾಡಿ, ಇಂದಿನ ಯುವ ಸಮುದಾಯ ಗುರು ಭಕ್ತಿ ಕಳೆದುಕೊಂಡಿದೆ. ಧಾರ್ಮಿಕ ಬದುಕಿನೊಂದಿಗೆ ಸಮಾಜಿಕ ಜೀವನದಲ್ಲಿತೊಡಗಿಕೊಳ್ಳುವ ಸಂಘಟನೆಗೆ ಜನ ಬೆಂಬಲ ಸಿಗಬೇಕಿದೆ ಎಂದರು. ಹಿರಿಯ ಸದಸ್ಯ ನಾಗೇಶ್ ಶೇಟ್ ಮಾತನಾಡಿ, ಸಮಿತಿ ಕಳೆದ 25 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರಗಳು, ಮಹಿಳೆಯರಿಗೆ ಹೊಲಿಗೆ ತರಬೇತಿ, ಗ್ರಾಮದಲ್ಲಿಸ್ವಚ್ಛತಾ ಕಾರ್ಯಕ್ರಮ, ಮನೆ ಮನೆಯಲ್ಲಿಭಜನೆ, ಅರಿಶಿಣ ಕುಂಕುಮ ಕಾರ್ಯಕ್ರಮ, ಪ್ರತಿ ತಿಂಗಳ 19 ರಂದು ಮಹಿಳಾ ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ನಿಮಿತ್ತ ಅನ್ನಸಂತರ್ಪಣೆ, ಭಜನೆ ಹಾಗೂ ಸಾಯಿ ದರ್ಶನ ಯಕ್ಷಗಾನ ಪ್ರದರ್ಶನ ನಡೆಯಿತು. ವೇದಿಕೆಯಲ್ಲಿಬ್ಯಾಂಕ್ ನಿವೃತ್ತ ಅಧಿಕಾರಿ ಕಾಶಿನಾಥ ಎಂ ದಿವಾಕರ, ನಿವೃತ್ತ ಪ್ರಾಧ್ಯಾಪಕ ಡಿ.ಎನ್. ಶೇಟ್, ಅಂಚೆ ಸಹಾಯಕಿ ಸವಿತಾ ಭಟ್, ಸಂಘಟಕರಾದ ಶಂಕರ ಭಟ್, ಪಿ.ವಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಕಾನಸೂರಿನ ರುದ್ರಾಂಜನೇಯ ಸಭಾಂಗಣದಲ್ಲಿಬುಧವಾರ ನಡೆದ ಬೆಳ್ಳಿ ಹಬ್ಬದ ಸಭಾ ಕಾರ್ಯಕ್ರಮವನ್ನು ಸತ್ಯ ಸಾಯಿ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ರಾಮದಾಸ ಜೆ. ಆಚಾರಿ ಉದ್ಘಾಟಿಸಿದರು. ಭಗವಾನ್ ಸತ್ಯಸಾಯಿ ಅವರ ಆಶಯದಂತೆ ಸಮಿತಿ ಕೆಲಸ ಮಾಡುತ್ತಿದೆ. ಸಮಾಜ ಸೇವೆಯೇ ನಿಜವಾದ ಗುರು ಸೇವೆ ಎಂದರು.
ಪ್ರಶಾಂತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಆರ್.ಜಿ. ಪೈ ಮಾತನಾಡಿ, ಇಂದಿನ ಯುವ ಸಮುದಾಯ ಗುರು ಭಕ್ತಿ ಕಳೆದುಕೊಂಡಿದೆ. ಧಾರ್ಮಿಕ ಬದುಕಿನೊಂದಿಗೆ ಸಮಾಜಿಕ ಜೀವನದಲ್ಲಿತೊಡಗಿಕೊಳ್ಳುವ ಸಂಘಟನೆಗೆ ಜನ ಬೆಂಬಲ ಸಿಗಬೇಕಿದೆ ಎಂದರು. ಹಿರಿಯ ಸದಸ್ಯ ನಾಗೇಶ್ ಶೇಟ್ ಮಾತನಾಡಿ, ಸಮಿತಿ ಕಳೆದ 25 ವರ್ಷಗಳಿಂದ ಉಚಿತ ಆರೋಗ್ಯ ಶಿಬಿರಗಳು, ಮಹಿಳೆಯರಿಗೆ ಹೊಲಿಗೆ ತರಬೇತಿ, ಗ್ರಾಮದಲ್ಲಿಸ್ವಚ್ಛತಾ ಕಾರ್ಯಕ್ರಮ, ಮನೆ ಮನೆಯಲ್ಲಿಭಜನೆ, ಅರಿಶಿಣ ಕುಂಕುಮ ಕಾರ್ಯಕ್ರಮ, ಪ್ರತಿ ತಿಂಗಳ 19 ರಂದು ಮಹಿಳಾ ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದ ನಿಮಿತ್ತ ಅನ್ನಸಂತರ್ಪಣೆ, ಭಜನೆ ಹಾಗೂ ಸಾಯಿ ದರ್ಶನ ಯಕ್ಷಗಾನ ಪ್ರದರ್ಶನ ನಡೆಯಿತು. ವೇದಿಕೆಯಲ್ಲಿಬ್ಯಾಂಕ್ ನಿವೃತ್ತ ಅಧಿಕಾರಿ ಕಾಶಿನಾಥ ಎಂ ದಿವಾಕರ, ನಿವೃತ್ತ ಪ್ರಾಧ್ಯಾಪಕ ಡಿ.ಎನ್. ಶೇಟ್, ಅಂಚೆ ಸಹಾಯಕಿ ಸವಿತಾ ಭಟ್, ಸಂಘಟಕರಾದ ಶಂಕರ ಭಟ್, ಪಿ.ವಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.