ಆ್ಯಪ್ನಗರ

ಸೈನಿಕಹುಳು ಬಾಧೆ: ರೈತರಲ್ಲಿ ಆತಂಕ

ಮುಂಡಗೋಡ: ತಾಲೂಕಿನ ವಿವಿಧ ಭಾಗಗಳಲ್ಲಿ ಗೋವಿನಜೋಳ ಬೆಳೆಗೆ ಸೈನಿಕಹುಳು ಬಾಧೆ ಕಾಣಿಸಿಕೊಂಡಿದ್ದು, ಇದರಿಂದಾಗಿ ರೈತ ಸಮೂಹದಲ್ಲಿ ಆತಂಕ ಮನೆಮಾಡಿದೆ.

Vijaya Karnataka 30 Jun 2019, 5:00 am
ಮುಂಡಗೋಡ: ತಾಲೂಕಿನ ವಿವಿಧ ಭಾಗಗಳಲ್ಲಿ ಗೋವಿನಜೋಳ ಬೆಳೆಗೆ ಸೈನಿಕಹುಳು ಬಾಧೆ ಕಾಣಿಸಿಕೊಂಡಿದ್ದು, ಇದರಿಂದಾಗಿ ರೈತ ಸಮೂಹದಲ್ಲಿ ಆತಂಕ ಮನೆಮಾಡಿದೆ.
Vijaya Karnataka Web KWR-29MND1-


ಕಳೆದ ಕೆಲ ವರ್ಷಗಳಿಂದ ವರುಣನ ಮೇಲಾಟದಿಂದ ತಾಲೂಕಿನ ರೈತರು ತೀವ್ರ ಹಾನಿ ಅನುಭವಿಸುತ್ತಾ ಬಂದಿದ್ದು, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಬರುವ ಗೋವಿನಜೋಳ ಬೆಳೆಯುವತ್ತ ಬಹುತೇಕ ರೈತರು ಮುಖ ಮಾಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಭತ್ತ ಹಾಗೂ ಹತ್ತಿ ಬೆಳೆಗಾರರಿಗಿಂತ ಗೋವಿನಜೋಳ ಬೆಳೆಗಾರರು ಉತ್ತಮ ಇಳುವರಿ ಜತೆ ಆದಾಯ ಪಡೆದುಕೊಂಡಿದ್ದಾರೆ. ಈ ಬಾರಿ ತಾಲೂಕಿನಲ್ಲಿ ಆರು ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗಿದೆ.

ಸದ್ಯ ಗೋವಿನಜೋಳ ಬೆಳೆಗೆ ಸೈನಿಕಹುಳು ಬಾಧೆ ಕಾಣಿಸಿಕೊಂಡಿದ್ದು, ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಹುಳು ಎಲೆಗಳನ್ನು ತಿಂದು ಬೆಳೆ ಹಾನಿ ಮಾಡುತ್ತದೆ. ತಾಲೂಕಿನ ವಡಗಟ್ಟ, ಬಾಚಣಕಿ, ಅರಶೀಣಗೇರಿ, ಮಜ್ಜಿಗೇರಿ ಮುಂತಾದ ಗ್ರಾಮಗಳಲ್ಲಿ ಈ ಸೈನಿಕಹುಳು ಬಾಧೆ ಕಂಡು ಬಂದಿದೆ.

ಬಾಧೆ ಹತೋಟಿಗೆ: ಸೈನಿಕಹುಳು ಬಾಧೆ ಹತೋಟಿಗೆ ಒಂದು ಎಕರೆಗೆ 20ಕೆಜಿ ಭತ್ತ ಅಥವಾ ಗೋಧಿಯ ತೌಡುನ್ನು ಗಟ್ಟಿ ನೆಲದ ಮೇಲೆ ಹರಡಬೇಕು. ನಂತರ 5ರಿಂದ 8ಲೀ. ನೀರಿನಲ್ಲಿ 250ಮಿ.ಲೀ. ಮನೋಕ್ರೊಟೊಪಾಸ್‌ ಕೀಟನಾಶಕವನ್ನು 2ಕೆಜಿ ಬೆಲ್ಲದೊಂದಿಗೆ ತೌಡಿನೊಂದಿಗೆ ಬೆರಸಿ, ಮಿಶ್ರಣ ಮಾಡಿ ಒಂದೆರಡು ದಿನ ಬ್ಯಾರಲ್‌ನಲ್ಲಿ ತೆಗೆದಿಡಬೇಕು. ನಂತರ ಗದ್ದೆಯಲ್ಲಿ ಸಿಂಪಡಿಸಬೇಕು. ಅಥವಾ ಇಮಾಮೇಕ್ಟಿನ್‌ ಬೆಂಜೋವಿಟ್‌ 0.2 ಗ್ರಾಂ/ ಲೀಟರ ನೀರಿಗೆ ಬೆರಸಿ ಸುಳಿಗೆ ಸಿಂಪರಿಸಬೇಕು ಅಥವಾ ಕಾರ್ಬೋಪ್ಯೂರಾನ್‌ ಹರಳನ್ನು ಸುಳಿಗೆ ಬೀಳುವಂತೆ ಸಿಂಪರಣೆ ಮಾಡಬೇಕು ಅಂದರೆ ಈ ರೋಗ ಹತೋಟಿಗೆ ತರಲು ಸಾದ್ಯ ಎಂದು ಕೃಷಿ ಇಲಾಖೆಯವರು ರೈತರಿಗೆ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ