ಗಟ್ಟಿ ನಿರ್ಧಾರದಿಂದ ಏನನ್ನಾದರೂ ಸಾಧಿಸಲು ಸಾಧ್ಯ
ಭಟ್ಕಳ : ಯಾರೂ ಮಾತೃಭಾಷಾ ಶಿಕ್ಷ ಣದ ಬಗ್ಗೆ ಅಸಡ್ಡೆ ಹೊಂದಬಾರದು ಎಂದು ಶಿಕ್ಷ ಣ ತಜ್ಞ, ಮುಂಬಯಿ ಅಂಜುಮನ್ ಎ ಇಸ್ಲಾಮ್ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಡಾ.ಝಾಹೀರ್ ಖಾಜಿ ಹೇಳಿದರು.
Vijaya Karnataka 4 Aug 2019, 5:00 am
ಭಟ್ಕಳ : ಯಾರೂ ಮಾತೃಭಾಷಾ ಶಿಕ್ಷ ಣದ ಬಗ್ಗೆ ಅಸಡ್ಡೆ ಹೊಂದಬಾರದು ಎಂದು ಶಿಕ್ಷ ಣ ತಜ್ಞ, ಮುಂಬಯಿ ಅಂಜುಮನ್ ಎ ಇಸ್ಲಾಮ್ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಡಾ.ಝಾಹೀರ್ ಖಾಜಿ ಹೇಳಿದರು.
ಅವರು ಶುಕ್ರವಾರ ಸಂಜೆ ಇಲ್ಲಿನ ಅಂಜುಮನ್ ಹೈಸ್ಕೂಲ್ ಮೈದಾನದಲ್ಲಿ ರಾಬಿತಾ ಸೊಸೈಟಿ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಾತೃಭಾಷೆಯಲ್ಲಿ ಓದಿದ ಬಹಳಷ್ಟು ಜನರು ಯಶಸ್ಸಿನ ಉತ್ತುಂಗಕ್ಕೇರಿರುವ ಕುರಿತು ಉದಾಹರಣೆಯೊಂದಿಗೆ ವಿವರಿಸಿದರು. ನಿರಂತರ ಪ್ರಯತ್ನ, ಬದ್ಧತೆ, ಗಟ್ಟಿ ನಿರ್ಧಾರದಿಂದ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಭಾವನೆ ಕೆರಳಿಸುವ ವಿಷಯಗಳತ್ತ ಗಮನ ಕೊಡದೇ ಸಾಮಾಜಿಕ ಸಮಗ್ರತೆಯತ್ತ ಗಮನ ಕೊಡಬೇಕಾಗಿದೆ. ಭಟ್ಕಳ ಸಾಕಷ್ಟು ಪ್ರತಿಭಾವಂತರನ್ನು ಹೊಂದಿದೆ. ದೇಶದ ಶಿಕ್ಷ ಣ ಕ್ಷೇತ್ರಕ್ಕೆ ಮುಸ್ಲೀಮರ ಕೊಡುಗೆಯೂ ಇದೆ. ಜಗತ್ತಿನ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಾಗಿದ್ದಾರೆ ಎಂದು ಹೇಳಿದರು.
ಭಟ್ಕಳ ಅಂಜುಮನ್ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಅಬ್ದುರ್ರಹೀಮ್ ಜುಕಾಕೋ ಮಾತನಾಡಿ, ಸಾಧನೆಯ ಹಾದಿ ಯಾವತ್ತೂ ಹೂವಿನ ಹಾಸಿಗೆಯಾಗಿರುವುದಿಲ್ಲ. ಟೀಕೆ, ಟಿಪ್ಪಣಿಗಳನ್ನು ಸವಾಲಾಗಿ ಸ್ವೀಕರಿಸಿ ಮುಂದುವರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ, ರಾಬಿತಾ ಸೊಸೈಟಿ ಸಾಮಾಜಿಕ ಸೇವೆಗಳನ್ನು ಶ್ಲಾಘಿಸಿದರು. ಭಟ್ಕಳ ರಾಬಿತಾ ಸೊಸೈಟಿ ಅಧ್ಯಕ್ಷ ಝಾಹೀದ್ ರುಕ್ನುದ್ದೀನ್ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಯೂನುಸ್ ಖಾಜಿಯಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಮೌಲಾನಾ ಆಜೀಮ್ ಖಾಜಿಯಾ, ಮೌಲಾನಾ ಖಾಜಾ ಮೊಹಿನುದ್ದೀನ್ ಅಕ್ರೆಮಿ ಮದನಿ ಮತ್ತು ಮಹಿಳಾ ವೇದಿಕೆಯಲ್ಲಿ ಫರ್ಹಾತ್ ಅಕ್ರೆಮಿ, ರಮೀಝಾ ಕೋಲಾ, ಡಾ.ಫರ್ಜಾನಾ ಎಮ್.ಮೋತೇಶಮ್, ಝಾಕೀಯಾ ಖಾನಿತಾ ಅಕ್ರೆಮಿ ಮತ್ತಿತರರು ಉಪಸ್ಥಿತರಿದ್ದರು. ತನ್ವೀರ್ ಜುಶಿದ್ಧಿ ಅತಿಥಿಗಳನ್ನು ಪರಿಚಯಿಸಿದರು. ಅಬ್ದುಲ್ಲಾ ರಝಿ ಕುರಾನ್ ಪಠಿಸಿದರು. ಆಫ್ತಾಬ್ ಎಮ್.ಜೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಯೂಸೂಫ್ ಬರ್ಮಾವರ್ ಕಾರ್ಯಕ್ರಮ ನಿರೂಪಿಸಿದರು. ಆಫ್ತಾಬ್ ಎಮ್.ಜೆ.ವಂದಿಸಿದರು. ದೇಶ, ವಿದೇಶಗಳಲ್ಲಿ ಶಿಕ್ಷ ಣ ಕ್ಷೇತ್ರದಲ್ಲಿ ಸಾಧನೆಗೈದ 23 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನ್ಯೂ ಶಮ್ಸ್ ಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ ನೀಡಲಾಯಿತು.
ಅವರು ಶುಕ್ರವಾರ ಸಂಜೆ ಇಲ್ಲಿನ ಅಂಜುಮನ್ ಹೈಸ್ಕೂಲ್ ಮೈದಾನದಲ್ಲಿ ರಾಬಿತಾ ಸೊಸೈಟಿ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಾತೃಭಾಷೆಯಲ್ಲಿ ಓದಿದ ಬಹಳಷ್ಟು ಜನರು ಯಶಸ್ಸಿನ ಉತ್ತುಂಗಕ್ಕೇರಿರುವ ಕುರಿತು ಉದಾಹರಣೆಯೊಂದಿಗೆ ವಿವರಿಸಿದರು. ನಿರಂತರ ಪ್ರಯತ್ನ, ಬದ್ಧತೆ, ಗಟ್ಟಿ ನಿರ್ಧಾರದಿಂದ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ಭಾವನೆ ಕೆರಳಿಸುವ ವಿಷಯಗಳತ್ತ ಗಮನ ಕೊಡದೇ ಸಾಮಾಜಿಕ ಸಮಗ್ರತೆಯತ್ತ ಗಮನ ಕೊಡಬೇಕಾಗಿದೆ. ಭಟ್ಕಳ ಸಾಕಷ್ಟು ಪ್ರತಿಭಾವಂತರನ್ನು ಹೊಂದಿದೆ. ದೇಶದ ಶಿಕ್ಷ ಣ ಕ್ಷೇತ್ರಕ್ಕೆ ಮುಸ್ಲೀಮರ ಕೊಡುಗೆಯೂ ಇದೆ. ಜಗತ್ತಿನ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರಾಗಿದ್ದಾರೆ ಎಂದು ಹೇಳಿದರು.
ಭಟ್ಕಳ ಅಂಜುಮನ್ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಅಬ್ದುರ್ರಹೀಮ್ ಜುಕಾಕೋ ಮಾತನಾಡಿ, ಸಾಧನೆಯ ಹಾದಿ ಯಾವತ್ತೂ ಹೂವಿನ ಹಾಸಿಗೆಯಾಗಿರುವುದಿಲ್ಲ. ಟೀಕೆ, ಟಿಪ್ಪಣಿಗಳನ್ನು ಸವಾಲಾಗಿ ಸ್ವೀಕರಿಸಿ ಮುಂದುವರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ, ರಾಬಿತಾ ಸೊಸೈಟಿ ಸಾಮಾಜಿಕ ಸೇವೆಗಳನ್ನು ಶ್ಲಾಘಿಸಿದರು. ಭಟ್ಕಳ ರಾಬಿತಾ ಸೊಸೈಟಿ ಅಧ್ಯಕ್ಷ ಝಾಹೀದ್ ರುಕ್ನುದ್ದೀನ್ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಯೂನುಸ್ ಖಾಜಿಯಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಮೌಲಾನಾ ಆಜೀಮ್ ಖಾಜಿಯಾ, ಮೌಲಾನಾ ಖಾಜಾ ಮೊಹಿನುದ್ದೀನ್ ಅಕ್ರೆಮಿ ಮದನಿ ಮತ್ತು ಮಹಿಳಾ ವೇದಿಕೆಯಲ್ಲಿ ಫರ್ಹಾತ್ ಅಕ್ರೆಮಿ, ರಮೀಝಾ ಕೋಲಾ, ಡಾ.ಫರ್ಜಾನಾ ಎಮ್.ಮೋತೇಶಮ್, ಝಾಕೀಯಾ ಖಾನಿತಾ ಅಕ್ರೆಮಿ ಮತ್ತಿತರರು ಉಪಸ್ಥಿತರಿದ್ದರು. ತನ್ವೀರ್ ಜುಶಿದ್ಧಿ ಅತಿಥಿಗಳನ್ನು ಪರಿಚಯಿಸಿದರು. ಅಬ್ದುಲ್ಲಾ ರಝಿ ಕುರಾನ್ ಪಠಿಸಿದರು. ಆಫ್ತಾಬ್ ಎಮ್.ಜೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಯೂಸೂಫ್ ಬರ್ಮಾವರ್ ಕಾರ್ಯಕ್ರಮ ನಿರೂಪಿಸಿದರು. ಆಫ್ತಾಬ್ ಎಮ್.ಜೆ.ವಂದಿಸಿದರು. ದೇಶ, ವಿದೇಶಗಳಲ್ಲಿ ಶಿಕ್ಷ ಣ ಕ್ಷೇತ್ರದಲ್ಲಿ ಸಾಧನೆಗೈದ 23 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನ್ಯೂ ಶಮ್ಸ್ ಶಾಲೆಗೆ ಉತ್ತಮ ಶಾಲೆ ಪ್ರಶಸ್ತಿ ನೀಡಲಾಯಿತು.