ಆ್ಯಪ್ನಗರ

ಮಹಾಗಣಪತಿ ದೇವಸ್ಥಾನದಲ್ಲಿವಿಶೇಷ ಪೂಜೆ

ಯಲ್ಲಾಪುರ: ಅಂಗಾರಕ ಸಂಕಷ್ಟಿ ಪ್ರಯುಕ್ತ ತಾಲೂಕಿನ ವಿವಿಧೆಡೆ ಗಣಪತಿ ದೇವಾಲಯಯಗಳಲ್ಲಿವಿಶೇಷ ಪೂಜೆ, ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

Vijaya Karnataka 18 Sep 2019, 5:00 am
ಯಲ್ಲಾಪುರ: ಅಂಗಾರಕ ಸಂಕಷ್ಟಿ ಪ್ರಯುಕ್ತ ತಾಲೂಕಿನ ವಿವಿಧೆಡೆ ಗಣಪತಿ ದೇವಾಲಯಯಗಳಲ್ಲಿವಿಶೇಷ ಪೂಜೆ, ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Vijaya Karnataka Web 17 YLP 3_24


ಪ್ರಸಿದ್ಧ ಚಂದಗುಳಿಯ ಗಂಟೆ ಗಣಪತಿ ದೇವಾಲಯ, ಪಟ್ಟಣದ ಗಣೇಶಪುರಂ ನಲ್ಲಿರುವ ವಿಶ್ವ ಹಿಂದೂ ಪರಿಷತ್‌ ಗಣಪತಿ ದೇವಾಲಯ, ರವೀಂದ್ರನಗರದ ಶಕ್ತಿಗಣಪತಿ ದೇವಾಲಯ, ಆನಗೋಡಿನ ಗಣಪತಿಕಟ್ಟೆ ದೇವಾಲಯ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿಅಂಗಾರಕ ಸಂಕಷ್ಟಿಯನ್ನು ಭಕ್ತ-ಭಾವದಿಂದ ಆಚರಿಸಲಾಯಿತು. ಶ್ರೀದೇವರಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ದೂರ್ವಾರ್ಚನೆ, ಅಥರ್ವಶೀರ್ಷ ಹವನ, ಪಂಚಖಾದ್ಯ ನೈವೇದ್ಯ ಮುಂತಾದ ಸೆವೆಗಳನ್ನು ಸಮರ್ಪಿಸಲಾಯಿತು. ಶ್ರೀದೇವರಿಗೆ ವಿಶೇಷ ಅಲಂಕಾರ ಮಾಡಿ, ದೇವಾಲಯಗಳನ್ನು ಮಾವಿನ ತೋರಣ, ಹೂಮಾಲೆಗಳಿಂದ ಶೃಂಗರಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ