ಆ್ಯಪ್ನಗರ

ಬಂಟದೇವರಿಗೆ ವಿಶೇಷ ಪೂಜೆ

ಕಾರವಾರ: ಶ್ರಾವಣ ಮಾಸದಲ್ಲಿ ವೀಳ್ಯದೆಲೆ, ಅಡಿಕೆ ನೈವೇದ್ಯ ಬಯಸುವ ಅಮದಳ್ಳಿಯ ಬಂಟದೇವರಿಗೆ ಸೋಮವಾರ ವಿಶೇಷ ಪೂಜೆ ನಡೆಯಿತು.

Vijaya Karnataka 21 Aug 2019, 5:00 am
Vijaya Karnataka Web KWR-20SUNEEL2
ಕಾರವಾರ: ಶ್ರಾವಣ ಮಾಸದಲ್ಲಿ ವೀಳ್ಯದೆಲೆ, ಅಡಿಕೆ ನೈವೇದ್ಯ ಬಯಸುವ ಅಮದಳ್ಳಿಯ ಬಂಟದೇವರಿಗೆ ಸೋಮವಾರ ವಿಶೇಷ ಪೂಜೆ ನಡೆಯಿತು.

ನೂರಾರು ಭಕ್ತರು ದೇವಾಲಯಕ್ಕೆ ಬಂದು ಹರಕೆ ಅರ್ಪಿಸಿ ಕೃತಾರ್ಥರಾದರು. ಕಿಳಕೋಣದ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಬಂಟದೇವರಿಗೆ ಪ್ರತಿ ಶ್ರಾವಣ ಮಾಸದ ಸೋಮವಾರ ವಿಶೇಷ ಪೂಜೆ ನಡೆಯುತ್ತಿದೆ. ದೊಡ್ಡ ಬಂಟ ಮತ್ತು ಸಣ್ಣ ಬಂಟ ಎಂಬ ಎರಡು ದೇವಾಲಯಗಳಿವೆ. ಎರಡೂ ದೇವಾಲಯಗಳಿಗೂ ಭಕ್ತರು ಪೂಜೆ ಸಲ್ಲಿಸುತ್ತಾರೆ. ಹರಕೆ ಹೊತ್ತವರು ಎರಡು ಕಟ್ಟು ವೀಳ್ಯದೆಲೆ, ಇಪ್ಪತ್ತು ಅಡಿಕೆ ಮತ್ತು ಮೂರು ತೆಂಗಿನ ಕಾಯಿ ಅರ್ಪಿಸುವ ಸಂಪ್ರದಾಯವಿದೆ.

ಹಿಂದಿನ ಕಾಲದಲ್ಲಿ ವೀಳ್ಯದೆಲೆ, ಅಡಿಕೆಯೇ ಶ್ರೇಷ್ಠವಾಗಿದ್ದರಿಂದ ಇವನ್ನೇ ನೈವೇದ್ಯವಾಗಿ ಅರ್ಪಿಸುತ್ತೇವೆ. ಬೆಳಗ್ಗೆ ಸಮೀಪದ ಹಾಲಕ್ಕಿ ಗೌಡರ ಮನೆಯಿಂದ ಬೆರಣಿ ಕೆಂಡದಿಂದ ತಂದ ದೀಪ ಹಚ್ಚುವ ಮೂಲಕ ಆಚರಣೆ ಪ್ರಾರಂಭವಾಗುತ್ತದೆ. ಹರಕೆ ಹೊತ್ತವರು ಅಥವಾ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸುವವರು ವೀಳ್ಯದೆಲೆಯೊಂದರಲ್ಲಿ ಕೆಂಪು-ಬಿಳಿ ಹೂವು ಕಟ್ಟಿ ತಮ್ಮ ಇಷ್ಟಾರ್ಥ ಬೇಡಿಕೊಳ್ಳುತ್ತಾರೆ. ತಾವು ಬೇಡಿಕೊಂಡ ಹೂವು ದೊರೆತರೆ ಕಾರ್ಯ ಸಫಲವಾದಂತೆ ಎಂಬ ದೃಢ ನಂಬಿಕೆ ಭಕ್ತರಲ್ಲಿದೆ ಎನ್ನುತ್ತಾರೆ ದೇವಸ್ಥಾನದ ಪ್ರಮುಖರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ