ಆ್ಯಪ್ನಗರ

ಶ್ರಾವಣ ಶನಿವಾರ, ಸೋಮವಾರ ವಿಶೇಷ ಪೂಜೆ

ಕಾರವಾರ : ಕಾರವಾರ ನಗರ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಮಾರುತಿ ಗಲ್ಲಿಯಲ್ಲಿ ನಡೆಯುವ ಶ್ರೀ ಮಾರುತಿ ಜಾತ್ರೆ ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧ. ಇಲ್ಲಿನ ಶ್ರೀ ಮಾರುತಿ ದೇವಸ್ಥಾನಕ್ಕೆ ಸುಮಾರು ನೂರು ವರ್ಷದ ಇತಿಹಾಸವಿದೆ. ಶ್ರಾವಣ ಮಾಸದಲ್ಲಿನ ಶನಿವಾರ ಮತ್ತು ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ.

Vijaya Karnataka 4 Aug 2019, 5:00 am
ಕಾರವಾರ : ಕಾರವಾರ ನಗರ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಮಾರುತಿ ಗಲ್ಲಿಯಲ್ಲಿ ನಡೆಯುವ ಶ್ರೀ ಮಾರುತಿ ಜಾತ್ರೆ ರಂಗೋಲಿ ಜಾತ್ರೆ ಎಂದೇ ಪ್ರಸಿದ್ಧ. ಇಲ್ಲಿನ ಶ್ರೀ ಮಾರುತಿ ದೇವಸ್ಥಾನಕ್ಕೆ ಸುಮಾರು ನೂರು ವರ್ಷದ ಇತಿಹಾಸವಿದೆ. ಶ್ರಾವಣ ಮಾಸದಲ್ಲಿನ ಶನಿವಾರ ಮತ್ತು ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ.
Vijaya Karnataka Web special worship on shravan saturday monday
ಶ್ರಾವಣ ಶನಿವಾರ, ಸೋಮವಾರ ವಿಶೇಷ ಪೂಜೆ


ಮಾರುತಿ ಜಯಂತಿ ಮತ್ತು ಮಾರುತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದಂದು ನಗರದ ಮಾರುತಿಗಲ್ಲಿಯ ಪ್ರತಿಯೊಂದು ಅಂಗಡಿ, ಮನೆ ಮುಂಭಾಗದಲ್ಲಿ ರಂಗೋಲಿ ಬಿಡಿಸಿ ಪ್ರದರ್ಶನಕ್ಕೆ ಇಡಲಾಗುತ್ತದೆ. ರಂಗೋಲಿ ವೀಕ್ಷ ಣೆಗೆಂದೇ ಅನೇಕರು ಆಗಮಿಸುತ್ತಾರೆ. ಜರುಗುವ ಎರಡು ಉತ್ಸವದಲ್ಲಿ ರಂಗೋಲಿ ಪ್ರದರ್ಶನವಿರುವುದರಿಂದ ಇದಕ್ಕೆ ರಂಗೋಲಿ ಜಾತ್ರೆ ಎಂದೇ ಕರೆಯಲ್ಪಡುತ್ತಾರೆ.

ಪ್ರತಿ ಮಂಗಳವಾರ ಮತ್ತು ಶನಿವಾರ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಅಲ್ಲದೇ ಶ್ರಾವಣ ಮಾಸದ ಮಂಗಳವಾರ, ಶನಿವಾರ ವಿಶೇಷ ಹೂವಿನ ಪೂಜೆ ನೆರವೇರುತ್ತದೆ. ಜಾಗೃತ ದೇವರು ಎಂದೇ ಹೇಳಲಾಗುವ ಶ್ರೀ ಮಾರುತಿ ದೇವರ ಮೂರ್ತಿ ಈಗ ದೇವಸ್ಥಾನವಿರುವ ಜಾಗದಲ್ಲಿ ಮಣ್ಣು ಅಗೆಯುವಾಗ ದೊರಕಿತ್ತು. ಒಬ್ಬ ಸಾಧು ಈ ಮೂರ್ತಿಗೆ ಸಣ್ಣ ಗುಡಿಯನ್ನು ನಿರ್ಮಿಸಿದ್ದರು. ಅಂದಿನಿಂದ ಆರಂಭಗೊಂಡಿತು ಶ್ರೀ ಮರುತಿ ದೇವರ ಧಾರ್ಮಿಕ ಪೂಜಾ ಕಾರ್ಯ.

ಕಟ್ಟಿದ ಮಾರುತಿ ಗುಡಿಯ ಮುಂಭಾಗದ ಓಣಿಗೂ ಮಾರುತಿಗಲ್ಲಿ ಎಂದು ಹೆಸರಿಡಲಾಯಿತು. ಈ ಓಣಿಯಲ್ಲಿ ಹೆಚ್ಚಿನವರು ವೈಶ್ಯವಾಣಿ ಸಮಾಜದವರಾಗಿದ್ದಾರೆ. ಮೂಲತಃ ಮಹಾರಾಷ್ಟ್ರದವರಾಗಿರುವ ಇವರು ಮರಾಠಿ ಭಾಷೆ ಮಾತನಾಡುವವರಾಗಿದ್ದಾರೆ. ಹಾಗೆಯೇ ಇವರ ಹಬ್ಬಹರಿದಿನಗಳ ಆಚರಣೆಯೂ ಮಹಾರಾಷ್ಟ್ರದ ಸಂಸ್ಕೃತಿಗೆ ಹೋಲುತ್ತದೆ. ಬ್ರಿಟೀಷರ ಕಾಲದಲ್ಲಿ ಮಹಾರಾಷ್ಟ್ರದಿಂದ ಇವರು ವಲಸೆ ಬಂದಿದ್ದರೆನ್ನಲಾಗಿದೆ.

ಸಣ್ಣದಾದ ಗುಡಿಯನ್ನು ಅಭಿವೃದ್ಧಿ ಪಡಿಸಿ 75 ವರ್ಷಗಳ ಹಿಂದೆ ಸಾಮಾನ್ಯವಾಗಿರುವ ಹಂಚಿನ ದೇಗುಲವನ್ನು ನಿರ್ಮಿಸಲಾಯಿತು. 1999ರಲ್ಲಿ ಭವ್ಯವಾದ ಮಂದಿರ ನಿರ್ಮಿಸಲಾಯಿತು.

ನಗರದ ಹೃದಯ ಭಾಗದಲ್ಲಿ ಈ ದೇವಸ್ಥಾನವಿರುವುದರಿಂದ ಪ್ರತಿ ಶನಿವಾರ ಮತ್ತು ಮಂಗಳವಾರ ಹೆಚ್ಚು ಜನಜಂಗುಳಿ ಇರುತ್ತದೆ. ಶ್ರೀ ಮಾರುತಿಗೆ ಎಳ್ಳೆಣ್ಣೆ ಅರ್ಪಿಸುವುದು, ಕರ್ಪೂರ ಆರತಿ ಬೆಳಗಿಸುವುದು, ಇನ್ನಿತರ ಸೇವೆಯನ್ನು ಭಕ್ತರಿಂದ ಸ್ವೀಕರಿಸಲಾಗುತ್ತದೆ. ಶ್ರಾವಣ ಮಾಸದ ಶನಿವಾರ, ಮಂಗಳವಾರ ಸಂಜೆ ಭಜನೆ ಹಾಗೂ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯುತ್ತದೆ.

ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಜಾಗೃತ ದೇವರಾಗಿರುವ ಶ್ರೀ ಮಾರುತಿ ದೇವರ ದರ್ಶನ ಪಡೆದ ಭಕ್ತರು ಧನ್ಯತಾ ಭಾವ ಮೆರೆಯುತ್ತಾರೆ. ಶ್ರೀ ರಾಮದೂತ ಹನುಮಾನ ಕೀ ಜೈ ಎಂದು ದೇವಸ್ಥಾನ ಆವರಣ ಪ್ರವೇಶಿದ ಕೆಲ ಭಕ್ತರು ಗಂಟೆಗಟ್ಟಲೇ ಕುಳಿತು ಹನುಮಾನ ಚಾಲಿಸಾ ಪಠಣ ಮಾಡುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ