ಆ್ಯಪ್ನಗರ

ಶ್ರೀ ಮಹಾಸತಿ ಪರಿವಾರ ದೇವರು ಪುನರ್‌ ಪ್ರತಿಷ್ಠಾ ಮಹೋತ್ಸವ ಮೇ 2ರಿಂದ

ಕುಮಟಾ : ತಾಲೂಕನ ಮಿರ್ಜಾನದ ಸಂಕದಕಟ್ಟೆ ಶ್ರೀ ಮಹಾಸತಿ ದೇವಿಯ ಪರಿವಾರ ದೇವರುಗಳ ಈಗಿದ್ದ ಸ್ಥಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದರಿಂದ ಅಲ್ಲಿದ್ದ ಶ್ರೀ ದೇವಿಯ ಪರಿವಾರ ದೇವರುಗಳನ್ನು ಶ್ರೀ ಮಹಾಸತಿ ಸಮೀಪವೇ ಸ್ಥಳಾಂತರಿಸಿ ನೂತನವಾಗಿ ನಿರ್ಮಿಸಲಾಗಿರುವ ಸುಂದರವಾದ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುವದು.

Vijaya Karnataka 26 Apr 2019, 5:00 am
ಕುಮಟಾ : ತಾಲೂಕನ ಮಿರ್ಜಾನದ ಸಂಕದಕಟ್ಟೆ ಶ್ರೀ ಮಹಾಸತಿ ದೇವಿಯ ಪರಿವಾರ ದೇವರುಗಳ ಈಗಿದ್ದ ಸ್ಥಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದರಿಂದ ಅಲ್ಲಿದ್ದ ಶ್ರೀ ದೇವಿಯ ಪರಿವಾರ ದೇವರುಗಳನ್ನು ಶ್ರೀ ಮಹಾಸತಿ ಸಮೀಪವೇ ಸ್ಥಳಾಂತರಿಸಿ ನೂತನವಾಗಿ ನಿರ್ಮಿಸಲಾಗಿರುವ ಸುಂದರವಾದ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗುವದು.
Vijaya Karnataka Web sri mahasati parivar god re celebrates may 2th
ಶ್ರೀ ಮಹಾಸತಿ ಪರಿವಾರ ದೇವರು ಪುನರ್‌ ಪ್ರತಿಷ್ಠಾ ಮಹೋತ್ಸವ ಮೇ 2ರಿಂದ


ಶ್ರೀ ಮಹಾಸತಿಯ ಪರಿವಾರ ದೇವರುಗಳಾದ ಶ್ರೀ ನಾಗದೇವತೆ, ಶ್ರೀ ಜಟಕೇಶ್ವರ ದೇವರು ಪುನರ್‌ ಪ್ರತಿಷ್ಠಾ ಮಹೋತ್ಸವವು ಮೇ 2ರಂದು ಪ್ರಾರಂಭಗೊಂಡು ಮೇ 3 ರವರೆಗೆ ಜರುಗಲಿದೆ. ಮೇ 3ರಂದು ಶುಕ್ರವಾರ ಪೂರ್ವಾಹ್ನ 9-50ಕ್ಕೆ ಪುನರ್‌ ಪ್ರತಿಷ್ಠೆಯನ್ನು ನವಚಂಡಿಯಾಗದ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ. ಮಧ್ಯಾಹ್ನ 1 ಘಂಟೆಗೆ ನವಚಂಡಿಯಾಗದ ಪೂರ್ಣಾಹುತಿ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಈ ಧಾರ್ಮಿಕ ಕಾರ‍್ಯಕ್ರಮದಲ್ಲಿ ಭಜಕ ಮಹಾಜನರು ಕುಟುಂಬ ಸಮೇತ ಭಾಗವಹಿಸಿ ಶ್ರೀ ದೇವಿಯ ಹಾಗೂ ಪರಿವಾರ ದೇವರುಗಳ ಕೃಪಾಪ್ರಸಾದಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಸಮಿತಿ ವಿನಂತಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ