ಆ್ಯಪ್ನಗರ

ಶಿರಸಿಯಲ್ಲಿ ಶ್ರೀರಾಮ ರಥೋತ್ಸವ

ಶಿರಸಿ : ನಗರದ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ ನಿಮಿತ್ತ ಭಾನುವಾರ ಸಂಜೆ ತೃತೀಯ ವಾರ್ಷಿಕ ಶ್ರೀರಾಮ ರಥೋತ್ಸವ ನೆರವೇರಿತು.

Vijaya Karnataka 15 Apr 2019, 5:00 am
ಶಿರಸಿ : ನಗರದ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ ನಿಮಿತ್ತ ಭಾನುವಾರ ಸಂಜೆ ತೃತೀಯ ವಾರ್ಷಿಕ ಶ್ರೀರಾಮ ರಥೋತ್ಸವ ನೆರವೇರಿತು.
Vijaya Karnataka Web sri ram rathotsava in shiras
ಶಿರಸಿಯಲ್ಲಿ ಶ್ರೀರಾಮ ರಥೋತ್ಸವ


ಸದ್ಗುರು ನಿತ್ಯಾನಂದ ಮಂದಿರ ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನಂತರ ಶ್ರೀರಾಮ ಮತ್ತು ಸೀತೆಯ ಮೂರ್ತಿಯನ್ನು ಅಲಂಕೃತ ಸಣ್ಣ ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು. ಇಲ್ಲಿಯ ಮರಾಠಿಕೊಪ್ಪದ ಅರಳಿ ಕಟ್ಟೆವರೆಗೆ ರಥವನ್ನು ಹಗ್ಗದ ಮೂಲಕ ಎಳೆದು ನಂತರ ವಾಪಸ್‌ ನಿತ್ಯಾನಂದ ಮಂದಿರಕ್ಕೆ ತರಲಾಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.

ರಥೋತ್ಸವದ ಪ್ರಯುಕ್ತ ಮಹಾಭಿಷೇಕ, ರಥಾರೋಹಣ ಪೂಜೆ, ರಥಾನಯನ, ರಥಾವರೋಹಣ, ಪಾನಕಪೂಜೆ, ಅಷ್ಠಾವಧಾನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆದವು. ಕೊಳಗೀಬೀಸ್‌ ಕುಮಾರ ಭಟ್ಟರಿಂದ ಯುಗಪುರುಷ ಶ್ರೀ ರಾಮನ ಕುರಿತು ವಿಶೇಷ ಪ್ರವಚನ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ