ಆ್ಯಪ್ನಗರ

ಶ್ರೀರಾಮನವಮಿ: ಸಂಭ್ರಮದ ಪಲ್ಲಕ್ಕಿ ಉತ್ಸವ

ಶಿರಸಿ : ನಗರದ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ ಶನಿವಾರ ಭಕ್ತಿಸಡಗರದಿಂದ ನಡೆಯಿತು. ಈ ಪ್ರಯುಕ್ತ ನಗರದ ಪ್ರಮುಖ ಮಾರ್ಗಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು.

Vijaya Karnataka 14 Apr 2019, 5:00 am
ಶಿರಸಿ : ನಗರದ ಮರಾಠಿಕೊಪ್ಪದ ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಶ್ರೀ ರಾಮನವಮಿ ಉತ್ಸವ ಶನಿವಾರ ಭಕ್ತಿಸಡಗರದಿಂದ ನಡೆಯಿತು. ಈ ಪ್ರಯುಕ್ತ ನಗರದ ಪ್ರಮುಖ ಮಾರ್ಗಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು.
Vijaya Karnataka Web sri ramanavami pallakki festival of celebration
ಶ್ರೀರಾಮನವಮಿ: ಸಂಭ್ರಮದ ಪಲ್ಲಕ್ಕಿ ಉತ್ಸವ


ಸದ್ಗುರು ನಿತ್ಯಾನಂದ ಮಂದಿರ ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ರಾಮನವಮಿಯಂದು ಶ್ರೀ ನಿತ್ಯಾನಂದ ಮತ್ತು ಮಹಾಬಲಾನಂದ ಸ್ವಾಮಿಗಳಿಗೆ, ರಾಮಾಂಜನೇಯ, ಸೀತಾ, ಲಕ್ಷ ್ಮಣ, ಉಮಾ ಮಹೇಶ್ವರ, ಮಹಾಗಣಪತಿ, ಶನೈಶ್ಚರ ದೇವರಿಗೆ ವಿಶೇಷ ಅಭಿಷೇಕ, ಉಡಿಸೇವೆ ಸಲ್ಲಿಸಲಾಯಿತು. ಸುತ್ತಮುತ್ತಲಿನ ಭಕ್ತಾಧಿಗಳು ಪಾಲ್ಗೊಂಡರು. ಹಾಗೇ ಮಠದ ಆವಾರದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಸಲಾಯಿತು. ಸಂಜೆ ನಗರದಲ್ಲಿ ಪಲ್ಲಕ್ಕಿ ಸಂಚರಿಸಿತು. ರಾಮನಾಮ ಮೆರವಣಿಗೆಯಲ್ಲಿ ಮೊಳಗಿತು.

ರಾಮನವಮಿ ಪ್ರಯುಕ್ತ ನಿತ್ಯಾನಂದ ಮಂದಿರ ಭಕ್ತರಿಂದ ಅಖಂಡ ಶ್ರೀರಾಮ ತಾರಕ ಜಪ ನಡೆಯಿತು. ಶನಿವಾರ ಬೆಳಗ್ಗೆಯಿಂದ ಭಾನುವಾರ ಬೆಳ್ಳಗ್ಗೆವರೆಗೆ 24ತಾಸು ಶ್ರೀ ಜೈರಾಮ ಜಯ ಜಯ ರಾಮ ಹೀಗೆ ರಾಮನಾಮ ಭಜನೆ ಪಠಿಸಲಾಯಿತು.

ಇಂದು ರಥಾರೋಹಣ : ಶ್ರೀ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಏ.14ರ ಬೆಳಗ್ಗೆ ಮಹಾಭಿಷೇಕ, ಸಂಜೆ 5.30ಕ್ಕೆ ರಥಾರೋಹಣ ಪೂಜೆ, ರಥಾನಯನ, ರಥಾವರೋಹಣ, ಪಾನಕಪೂಜೆ, ಅಷ್ಠಾವಧಾನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆಗಳು ನಡೆಯಲಿದೆ. ಕೊಳಗೀಬೀಸ್‌ ಕುಮಾರ ಭಟ್ಟರಿಂದ ಯುಗಪುರುಷ ಶ್ರೀ ರಾಮನ ಕುರಿತು ವಿಶೇಷ ಪ್ರವಚನ, ತದನಂತರ ರಥಾರೋಹಣದ ನೆರವೇರಲಿದೆ. ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳೂ ಮಂಜುಗುಣಿ ಕ್ಷೇತ್ರ ಪುರೋಹಿತ ಶ್ರೀನಿವಾಸ ಭಟ್ಟ ಮಾರ್ಗದರ್ಶನದಲ್ಲಿ ನಡೆಯುವವು.

ವಿವಿಧೆಡೆ ಕಾರ್ಯಕ್ರಮ.... : ರಾಮನವಮಿ ಅಂಗವಾಗಿ ತಾಲೂಕಿನ ಯಡಳ್ಳಿ ಸೀತಾರಾಮಚಂದ್ರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಹಾಗೇ ನಗರದ ರಾಯರಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ರಾಮತಾರಕ ಜಪ ಹವನ ಏರ್ಪಾಟಾಗಿತ್ತು. ಯಲ್ಲಾಪುರ ತಾಲೂಕಿನ ಇಡಗುಂದಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯ, ರಾತ್ರಿ ಸಣ್ಣ ರಥೋತ್ಸವ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ