ಆ್ಯಪ್ನಗರ

ಶ್ರೀ ವೆಂಕಟರಮಣ ದೇವರ ಅದ್ಧೂರಿ ರಥೋತ್ಸವ

ಶಿರಸಿ: ಕರ್ನಾಟಕದ ತಿರುಪತಿ ಎಂದೇ ಹೆಸರಾದ ತಾಲೂಕಿನ ಪುಣ್ಯ ಕ್ಷೇತ್ರ ಮಂಜುಗುಣಿಯಲ್ಲಿ ಶ್ರೀ ವೆಂಕಟರಮಣ ದೇವರ ರಥೋತ್ಸವ ಸಂಭ್ರಮ ಕಳೆ ಕಟ್ಟಿತ್ತು.

Vijaya Karnataka 20 Apr 2019, 5:00 am
ಶಿರಸಿ: ಕರ್ನಾಟಕದ ತಿರುಪತಿ ಎಂದೇ ಹೆಸರಾದ ತಾಲೂಕಿನ ಪುಣ್ಯ ಕ್ಷೇತ್ರ ಮಂಜುಗುಣಿಯಲ್ಲಿ ಶ್ರೀ ವೆಂಕಟರಮಣ ದೇವರ ರಥೋತ್ಸವ ಸಂಭ್ರಮ ಕಳೆ ಕಟ್ಟಿತ್ತು.
Vijaya Karnataka Web sri venkataramana is a grand chariot of god
ಶ್ರೀ ವೆಂಕಟರಮಣ ದೇವರ ಅದ್ಧೂರಿ ರಥೋತ್ಸವ


ಶುಕ್ರವಾರ ಮುಂಜಾನೆ ಸಕಲ ಧಾರ್ಮಿಕ ವಿಧಿಧಿ ವಿಧಾನಗಳ ಮೂಲಕ ಶ್ರೀದೇವರ ರಥಾರೂಢ ಕಾರ್ಯಕ್ರಮಗಳು ನಡೆದವು. ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ಶ್ರೀನಿವಾಸ ಭಟ್ಟ ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿವು. ನಾಡಿನ ಹಲವಡೆಯಿಂದ ಆಗಮಿಸಿದ ಭಕ್ತಾದಿಗಳು ಶ್ರೀದೇವರಿಗೆ ಹಣ್ಣುಕಾಯಿ ಸಮರ್ಪಿಸಿದರು. ರೈತರು ರಥಕ್ಕೆ ಹೊಸ ಫಲ, ಕಬ್ಬು, ಕಾಯಿ, ಅಡಿಕೆಕೊನೆ, ಬಾಳೆಕೊನೆ ಕಟ್ಟಿದರು. ಶನಿವಾರ ಬೆಳಗಿನ ಜಾವದೊಳಗೆ ರಥಾರೋಹಣ ನಡೆಯಲಿದೆ. ಪ್ರತೀ ವರ್ಷ ಒಂದು ಲಕ್ಷ ಕ್ಕೂ ಅಧಿಧಿಕ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ.




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ