ಆ್ಯಪ್ನಗರ

90 ದಿನದೊಳಗೆ ಕಟ್ಟಡ ಆರಂಭಿಸಿ

ಮುಂಡಗೋಡ : ವಸತಿ ಯೋಜನೆಯಡಿ ಮನೆಗಳ ಹಕ್ಕುಪತ್ರ ಪಡೆದುಕೊಂಡು ಫಲಾನುಭವಿಗಳು 90 ದಿನದೊಳಗಾಗಿ ಮನೆ ಕಟ್ಟುವ ಕೆಲಸ ಆರಂಭಿಸಬೇಕು ಇಲ್ಲದಿದ್ದರೆ ಮಂಜೂರಾದ ಮನೆ ರದ್ದುಗೊಳ್ಳುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಎಚ್ಚರಿಸಿದರು.

Vijaya Karnataka 24 Nov 2018, 5:00 am
ಮುಂಡಗೋಡ : ವಸತಿ ಯೋಜನೆಯಡಿ ಮನೆಗಳ ಹಕ್ಕುಪತ್ರ ಪಡೆದುಕೊಂಡು ಫಲಾನುಭವಿಗಳು 90 ದಿನದೊಳಗಾಗಿ ಮನೆ ಕಟ್ಟುವ ಕೆಲಸ ಆರಂಭಿಸಬೇಕು ಇಲ್ಲದಿದ್ದರೆ ಮಂಜೂರಾದ ಮನೆ ರದ್ದುಗೊಳ್ಳುತ್ತದೆ ಎಂದು ಶಾಸಕ ಶಿವರಾಮ ಹೆಬ್ಬಾರ ಎಚ್ಚರಿಸಿದರು.
Vijaya Karnataka Web start building within 90 days
90 ದಿನದೊಳಗೆ ಕಟ್ಟಡ ಆರಂಭಿಸಿ


ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ 16 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ವಿವಿಧ ವಸತಿ ಯೋಜನೆಯಡಿ ಮನೆಗಳ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ನಮ್ಮ ಸರಕಾರವೀಗ ಉಚಿತವಾಗಿ ಮನೆಗಳನ್ನು ಮಂಜೂರಿ ಮಾಡುತ್ತಿದೆ. ಮನೆ ಮಂಜೂರಿ ಪಡೆದುಕೊಂಡವರು ಯಾವುದೇ ಹಣ ತುಂಬುವ ಹಾಗಿಲ್ಲ. ಸರಕಾರದಿಂದ ಮಂಜೂರಾದ ಮನೆಯನ್ನು ಉತ್ತಮವಾಗಿ ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಮುಂಡಗೋಡ ತಾಲೂಕು ಬಡಜನರೇ ಹೆಚ್ಚಿರುವ ತಾಲೂಕಾಗಿದ್ದು ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷ ಣ ನೀಡಬೇಕು. ಮಕ್ಕಳು ಶಿಕ್ಷ ಣವಂತ ರಾದರೆ ಪ್ರತಿಯೊಂದು ಕುಟುಂಬವು ಆರ್ಥಿಕವಾಗಿ ಮುಂದೆ ಬರುತ್ತದೆ. ಶಿಕ್ಷ ಣಕ್ಕೆ ಸರಕಾರ ಸಾಕಷ್ಟು ಸೌಲಭ್ಯ ನೀಡುತ್ತಿದ್ದು, ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು ಎಂದರು.

ಪಿಡಿಒಗಳು ಕಾನೂನಿನ ಜತೆಗೆ ಮಾನವೀಯತೆ ಅಳವಡಿಸಿಕೊಂಡು ಕೆಲಸ ಮಾಡಬೇಕು. ಪಂಚಾಯಿತಿ ಕಚೇರಿಗಳಿಗೆ ಬಡ ಜನರು ಬಂದರೆ ಅವರಿಗೆ ಸ್ಪಂದಿಸಿ ಕೆಲಸ ಮಾಡಿ ಬಡವರನ್ನು ಸತಾಯಿಸಬೇಡಿ. ಕೆಲ ಪಿಡಿಒಗಳು ಬಡ ಜನರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಮುಂದಿನ ದಿನದಲ್ಲಿ ಜನರಿಗೆ ತೊಂದರೆ ಯಾಗದಂತೆ ಕಾರ್ಯ ನಿರ್ವಹಿಸಬೇಕು ಎಂದರು.

ಗ್ರಾಪಂ ಸದಸ್ಯರಿಗೆ ಹಣ ಕೊಡಬೇಡಿ

ಗ್ರಾ.ಪಂ. ಸದಸ್ಯರು ಮನೆಗಳ ಮಂಜೂರಿಗೆ ಹಣ ಕೇಳಿದರೆ ಯಾರೂ ಕೊಡಬೇಡಿ. ಪಂಚಾಯತ ಸದಸ್ಯರು ಹಣ ಕೇಳುತ್ತಿದ್ದಾರೆ ಎಂದು ಸಾಕಷ್ಟು ಫಲಾನುಭವಿಗಳು ನನಗೆ ಕರೆ ಮಾಡಿ ಹೇಳಿದ್ದಾರೆ. ಸರಕಾರ ಮನೆಗಳನ್ನು ಉಚಿತವಾಗಿ ನೀಡಿದೆ. ಮನೆ ಮಂಜೂರಿಗೆ ಯಾರೂ ಹಣ ನೀಡಬಾರದು ಎಂದು ಹೇಳಿದರು. ಯಾರಾದರೂ ಹಣ ಕೇಳಿದರೆ ನನಗೆ ತಿಳಿಸುವಂತೆ ಸಭೆಯಲ್ಲಿ ಫಲಾನುಭವಿಗಳಿಗೆ ಹೇಳಿದರು.

ಕೆರೆ ಭರ್ತಿಗೆ ಚಾಲನೆ

ಬೇಡ್ತಿ ನದಿಯಿಂದ 285 ಕೋಟಿ ರೂ. ವೆಚ್ಚದಲ್ಲಿ 129 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಹದಿನೈದು ದಿನದಲ್ಲಿ ಚಾಲನೆ ನೀಡಲಾಗುತ್ತದೆ. ಇದರಿಂದ ತಾಲೂಕಿನ ಹತ್ತು ಗ್ರಾಮ ಪಂಚಾಯತ ವ್ಯಾಪ್ತಿಯ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗವಿಕಲ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ಹಾಗೂ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.

ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ, ಜಿ.ಪಂ. ಸದಸ್ಯೆ ಜಯಮ್ಮ ಹಿರಳ್ಳಿ, ತಾ.ಪಂ. ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ್‌, ಎಪಿಎಂಸಿ ಅಧ್ಯಕ್ಷ ದೇವು ಪಾಟೀಲ, ಎಚ್‌.ಎಂ. ನಾಯ್ಕ, ಕೃಷ್ಣ ಹಿರಳ್ಳಿ, ಆರ್‌.ಜಿ.ನಾಯ್ಕ, ಜ್ಞಾನದೇವ ಗುಡಿಯಾಳ, ಪಿ.ಜಿ.ತಂಗಚ್ಚನ್‌, ಕೆ.ಆರ್‌.ಬಾಳೆಕಾಯಿ, ತಾಪಂ.ಅಧಿಕಾರಿ ಮಂಜುನಾಥ ಸಾಳುಂಕೆ, ಪ.ಪಂ.ಮುಖ್ಯಾಧಿಕಾರಿ ಸಂಗನಬಸಯ್ಯ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ