ಆ್ಯಪ್ನಗರ

ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವ ಫೆ.9ಕ್ಕೆ

ಹೊನ್ನಾವರ: ತಾಲೂಕಿನ ಕೆರೆಕೋಣದಲ್ಲಿ ಡಾ. ಆರ್‌.ವಿ.ಭಂಡಾರಿಯವರ ನೆನಪಿನ ಸಾಂಸ್ಕೃತಿಕ ಕೇಂದ್ರ ಸಹಯಾನದ ವತಿಯಿಂದ ಫೆ.9 ರಂದು ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವ ನಡೆಯಲಿದೆ.

Vijaya Karnataka 22 Jan 2020, 5:00 am
ಹೊನ್ನಾವರ: ತಾಲೂಕಿನ ಕೆರೆಕೋಣದಲ್ಲಿ ಡಾ. ಆರ್‌.ವಿ.ಭಂಡಾರಿಯವರ ನೆನಪಿನ ಸಾಂಸ್ಕೃತಿಕ ಕೇಂದ್ರ ಸಹಯಾನದ ವತಿಯಿಂದ ಫೆ.9 ರಂದು ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವ ನಡೆಯಲಿದೆ.
Vijaya Karnataka Web state level sahanaya literary festival
ರಾಜ್ಯ ಮಟ್ಟದ ಸಹಯಾನ ಸಾಹಿತ್ಯೋತ್ಸವ ಫೆ.9ಕ್ಕೆ


ಸಹಯಾನದ ಅಧ್ಯಕ್ಷ ಶಾಂತಾರಾಮ ನಾಯಕ ಹಿಚ್ಕಡ, ಕಾರ್ಯಾಧ್ಯಕ್ಷ ವಿಷ್ಣು ನಾಯ್ಕ, ಕಾರ್ಯದರ್ಶಿ ಕೆರೆಕೋಣ ವಿಠ್ಠಲ ಭಂಡಾರಿ, ಖಜಾಂಚಿ ಮಾಸ್ತಿ ಗೌಡ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ತಿಳಿಸಿದ್ದಾರೆ.

ಸಿನೆಮಾ : ಹೊಸ ತಲೆಮಾರು ಎಂಬ ವಿಷಯದ ಮೇಲೆ 10ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದೆ. ಚಿಂತಕ ಕೆ. ಫಣಿರಾಜ, ಸಿನೆಮಾ ನಿರ್ದೇಶಕರಾದ ಎಂ.ಎಸ್‌.ಪ್ರಕಾಶ ಬಾಬು, ಅನನ್ಯಾ ಕಾಸರವಳ್ಳಿ, ಅಭಯ ಸಿಂಹ, ಪತ್ರಕರ್ತರಾದ ವಿಶಾಖಾ, ಪ್ರದೀಪ ಬೈಂದೂರು, ನಟ ಕಿರಣ ನಾಯ್ಕ ಮತ್ತಿತರರು ಭಾಗವಹಿಸುವರು.

ಕನ್ನಡದ ಯುವ ತಲೆಮಾರಿನ, ಸಿನೆಮಾ ನಿರ್ಮಾಪಕರು ಹಾಗೂ ಪ್ರೇಕ್ಷಕರು ಮುಖಾಮುಖಿಯಾಗಿ ತಮ್ಮ ಸಿನೆಮಾ ಕಲೆಯ ಅರಿವನ್ನು ಬಿಚ್ಚಿಟ್ಟುಕೊಂಡು ಚರ್ಚಿಸುವ ಅವಶ್ಯಕತೆ ಇದೆ. ಆ ಮೂಲಕ ಸಿನೆಮಾ ಕಲೆ ಹಾಗೂ ಕಲಾ ಮೀಮಾಂಸೆಯ ಅರಿವುಗಳನ್ನು ವಿಸ್ತರಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿಯುವ ತಲೆಮಾರಿನ ನಿರ್ಮಾಪಕರು, ಅಧ್ಯಯನಿಗಳು, ಪ್ರೇಕ್ಷಕರು ಒಗ್ಗೂಡಿ ಚರ್ಚಿಸುವ ಪ್ರಯತ್ನವಾಗಿ ಈ ಸಾಹಿತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಹಯಾನದ ಅಧ್ಯಕ್ಷ ಶಾಂತಾರಾಮ ನಾಯಕ ಹಿಚ್ಕಡ, ಕಾರ್ಯಾಧ್ಯಕ್ಷ ವಿಷ್ಣು ನಾಯ್ಕ, ಕಾರ್ಯದರ್ಶಿ ಕೆರೆಕೋಣ ವಿಠ್ಠಲ ಭಂಡಾರಿ, ಖಜಾಂಚಿ ಮಾಸ್ತಿ ಗೌಡ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ