ಆ್ಯಪ್ನಗರ

ಹಳೆ ಟಿಕೇಟ್‌ ವಿತರಣೆ ನಿಲ್ಲಲಿ

ಯಲ್ಲಾಪುರ : ಯಲ್ಲಾಪುರ ವಿಭಾಗದ ಕೆಲವೊಂದು ಮಾರ್ಗದ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಂಡಕ್ಟರ್‌ ನೀಡಿದ ಟಿಕೇಟ್‌ ನೋಡಿ ಆಶ್ಚರ್ಯವಾಗುತ್ತಿದೆ. ಈ ಟಿಕೇಟ್‌ಗಳ ಮೇಲೆ ಮುದ್ರಿಸಲಾದ ''ಮತದಾನ ನಮ್ಮ ಹಕ್ಕು, ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ'' ಎಂಬ

Vijaya Karnataka 11 Jun 2019, 5:00 am
ಯಲ್ಲಾಪುರ : ಯಲ್ಲಾಪುರ ವಿಭಾಗದ ಕೆಲವೊಂದು ಮಾರ್ಗದ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಂಡಕ್ಟರ್‌ ನೀಡಿದ ಟಿಕೇಟ್‌ ನೋಡಿ ಆಶ್ಚರ್ಯವಾಗುತ್ತಿದೆ. ಈ ಟಿಕೇಟ್‌ಗಳ ಮೇಲೆ ಮುದ್ರಿಸಲಾದ ''ಮತದಾನ ನಮ್ಮ ಹಕ್ಕು, ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ'' ಎಂಬ ಸಂದೇಶ ಇನ್ನೂ ಹಾಗೇ ಇದೆ. ಈ ಸಂದೇಶವನ್ನು ಕಂಡವರು ಮತ್ತೊಮ್ಮೆ ನೋಡಿ ಖಚಿತಪಡಿಸಿಕೊಂಡು, ಸಾರಿಗೆ ಇಲಾಖೆಯ ನಿರ್ಲಕ್ಷ ್ಯದ ಕುರಿತು ಮಾತಾಡಿಕೊಳ್ಳುವಂತಾಗಿದೆ.
Vijaya Karnataka Web KWR-10 YLP 3
ಯಲ್ಲಾಪುರ ವಿಭಾಗದ ಸಾರಿಗೆ ಬಸ್ಸಿನಲ್ಲಿ ನೀಡುತ್ತಿರುವ ಟಿಕೇಟಿನ ಮೇಲೆ ''ಮತದಾನ ನಮ್ಮ ಹಕ್ಕು, ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸಿ'' ಎಂಬ ಸಂದೇಶ ಮುದ್ರಿಸಿರುವುದು.


ಈಗಾಗಲೇ ಲೋಕಸಭಾ ಚುನಾವಣೆ ಮುಗಿದು, ಸರಕಾರ ರಚನೆಯಾಗಿ ಹಲವು ದಿನಗಳು ಕಳೆದಿವೆ. ಆದರೂ ಯಲ್ಲಾಪುರ ವಿಭಾಗದ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡುವ ಟಿಕೇಟ್‌ನಲ್ಲಿ ಈಗಲೂ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಮುದ್ರಿಸಲಾದ ಸಂದೇಶವೇ ಇದೆ. ಇಲಾಖೆಯವರು ಇನ್ನಾದರೂ ಎಚ್ಚೆತ್ತು ಟಿಕೇಟ್‌ಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂಬ ಮಾತು ಪ್ರಯಾಣಿಕರಿಂದ ಕೇಳಿಬಂದಿದೆ. ಚುನಾವಣೆ ಸಂದರ್ಭದಲ್ಲಿ ಟಿಕೇಟ್‌ಗಳ ಮೇಲೆ ಮತದಾನ ಜಾಗೃತಿ ಕುರಿತು ಸಂದೇಶ ಹಾಕಿದ ಸಾರಿಗೆ ಇಲಾಖೆಯ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ಆದರೆ ಈಗಲೂ ಸಂದೇಶ ಹಾಗೇ ಇರುವುದು ಅಷ್ಟು ಸರಿಯಲ್ಲ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ