ಆ್ಯಪ್ನಗರ

ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗೆ ಶ್ರಮಿಸಿ

ಹೊನ್ನಾವರ: ಕನಕದಾಸರ ಜೀವನ ನಮ್ಮೆಲ್ಲರಿಗೆ ಮಾರ್ಗದರ್ಶಿ ಎಂದು ಪಟ್ಟಣದ ಎಸ್‌.ಡಿ.ಎಂ. ಕಾಲೇಜಿನ ಸಹ ಪ್ರಾಧ್ಯಾಪಕ ಅಪಗಾಲದ ನಾಗರಾಜ ಹೆಗಡೆ ಹೇಳಿದರು.

Vijaya Karnataka 29 Nov 2019, 5:00 am
ಹೊನ್ನಾವರ: ಕನಕದಾಸರ ಜೀವನ ನಮ್ಮೆಲ್ಲರಿಗೆ ಮಾರ್ಗದರ್ಶಿ ಎಂದು ಪಟ್ಟಣದ ಎಸ್‌.ಡಿ.ಎಂ. ಕಾಲೇಜಿನ ಸಹ ಪ್ರಾಧ್ಯಾಪಕ ಅಪಗಾಲದ ನಾಗರಾಜ ಹೆಗಡೆ ಹೇಳಿದರು.
Vijaya Karnataka Web strive for the survival of the kannada language and culture
ಕನ್ನಡ ಭಾಷೆ, ಸಂಸ್ಕೃತಿ ಉಳಿವಿಗೆ ಶ್ರಮಿಸಿ


ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಕನಕದಾಸರ ಜೀವನಗಾಥೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿಅವರು ಮಾತನಾಡಿದರು. ಒಂದು ಕಾಲದ ಸಂಸ್ಕೃತಿ ಇನ್ನೊಂದು ಕಾಲಕ್ಕೆ ರವಾನೆಯಾಗುವುದು ಭಾಷೆಯ ಮೂಲಕ, ಕನ್ನಡದ ಮೊದಲ ಕೃತಿ ಕವಿರಾಜಮಾರ್ಗದಲ್ಲಿಕರ್ನಾಟಕದ ಗಡಿಯ ಉಲ್ಲೇಖವಿದೆ ಎಂದರು.

ಕನಕದಾಸರು ಪಾಳೆಯಗಾರ ಜೀವನದಿಂದ ಅನನ್ಯ ವ್ಯಕ್ತಿತ್ವದ ಕವಿಯಾಗಿ ಬದಲಾವಣೆಯಾದರು. ಭೂಮಿಯ ಮೇಲೆ ಯಾರು ದಾಸರಲ್ಲ, ನಾವು ಭಗವಂತನ ದಾಸರು. ಕನಕದಾಸರು ನಾಯಕನಾಗಿ, ಭಕ್ತನಾಗಿ, ಸಂತನಾಗಿ, ಕವಿಯಾಗಿ, ಕಲಿಯಾಗಿ, ಅನುಭವಿ ಸಮಾಜ ಸುಧಾರಕನಾಗಿ ವಿಭಿನ್ನ ವ್ಯಕ್ತಿತ್ವ ಹೊಂದಿದವರು ಎಂದರು.

ಕನ್ನಡ ಬಹುಸಂಖ್ಯಾತರ ಜನ ಭಾಷೆ ಇದನ್ನು ಉಳಿಸಿಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಭಾಷೆ, ಜೀವನ, ಸಂಸ್ಕೃತಿಯನ್ನು ಕಳೆದುಕೊಳ್ಳುತ್ತೇವೆ ಎಂದರು.

ಸಹ ಪ್ರಾಧ್ಯಾಪಕ ಡಾ. ಎಂ.ಆರ್‌.ನಾಯಕ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯದಲ್ಲಿಆಸಕ್ತಿ ಬೆಳೆಸಿಕೊಳ್ಳಬೇಕು ಹಾಗೂ ಕನಕದಾಸರಂಥ ಮಹನೀಯರ ಬಗ್ಗೆ ಅರಿತು ಜೀವನದಲ್ಲಿಪಾಲಿಸಿದಲ್ಲಿಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ. ಸುಮಂಗಲಾ ಬಿ. ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ಜೀವನ ನಮ್ಮೆಲ್ಲರ ದಾರಿದೀಪವಾಗಿದೆ ಎಂದರು.

ರಾಜ್ಯಶಾಸ್ತ್ರ ವಿಭಾಗದ ಮೇಘಾ ಗೌಡ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಸಂಚಾಲಕಿ ಸುಜಾತ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ