ಆ್ಯಪ್ನಗರ

ಹಸಿರು ಆಹಾರದಿಂದ ಸದೃಢ ಆರೋಗ್ಯ

ಶಿರಸಿ : ಆಹಾರದಲ್ಲಿಹಸಿರನ್ನು ಉಪಯೋಗಿಸುವ ಕೌಶಲ್ಯವನ್ನು ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟಿದ್ದಾರೆ. ಸುತ್ತಮುತ್ತಲಿನ ಅನೇಕ ಸಸ್ಯಗಳನ್ನು ಆಹಾರದಲ್ಲಿಬಳಸಿದಾಗ ಅದರಿಂದ ಶರೀರಕ್ಕೆ ಬೇಕಾಗುವ ವಿಟಮಿನ್‌ಗಳು ದೊರೆಯುತ್ತದೆ. ಈ ರೀತಿಯ ಹಸಿರು ಆಹಾರ ಸೇವನೆಯಿಂದ ಸದೃಢ ಆರೋಗ್ಯ ಸಾಧ್ಯ ಎಂದು ಕೊಳಗಿಬೀಸ್‌ನ ಆಯುರ್ವೇದ ವೈದ್ಯೆ ಡಾ. ಮಧುಮತಿ ಹೆಗಡೆ ಹೇಳಿದರು.

Vijaya Karnataka 21 Sep 2020, 5:00 am
ಶಿರಸಿ : ಆಹಾರದಲ್ಲಿಹಸಿರನ್ನು ಉಪಯೋಗಿಸುವ ಕೌಶಲ್ಯವನ್ನು ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟಿದ್ದಾರೆ. ಸುತ್ತಮುತ್ತಲಿನ ಅನೇಕ ಸಸ್ಯಗಳನ್ನು ಆಹಾರದಲ್ಲಿಬಳಸಿದಾಗ ಅದರಿಂದ ಶರೀರಕ್ಕೆ ಬೇಕಾಗುವ ವಿಟಮಿನ್‌ಗಳು ದೊರೆಯುತ್ತದೆ. ಈ ರೀತಿಯ ಹಸಿರು ಆಹಾರ ಸೇವನೆಯಿಂದ ಸದೃಢ ಆರೋಗ್ಯ ಸಾಧ್ಯ ಎಂದು ಕೊಳಗಿಬೀಸ್‌ನ ಆಯುರ್ವೇದ ವೈದ್ಯೆ ಡಾ. ಮಧುಮತಿ ಹೆಗಡೆ ಹೇಳಿದರು.
Vijaya Karnataka Web 20SRS2_26
ಬದನಗೋಡು ಗ್ರಾಮದಲ್ಲಿ 'ಹಸಿರು ಆಹಾರ ಹಸಿರು ಆರೋಗ್ಯ' ಕಾರ್ಯಾಗಾರ ನಡೆಯಿತು.


ಯೂತ್‌ ಫಾರ್‌ ಸೇವಾ ಮತ್ತು ಸಮಗ್ರ ವಿಕಾಸ ಟ್ರಸ್ಟ್‌, ಚೈತನ್ಯ ಆತ್ಮಾ ಮಹಿಳಾ ಸ್ವಸಹಾಯ ಸಂಘದ ಸಹಯೋಗದಲ್ಲಿತಾಲೂಕಿನ ಬದನಗೋಡು ಗ್ರಾಮದಲ್ಲಿನಡೆದ 'ಹಸಿರು ಆಹಾರ ಹಸಿರು ಆರೋಗ್ಯ' ಕಾರ್ಯಾಗಾರದಲ್ಲಿಅವರು ಮಾತನಾಡಿದರು. ನಮ್ಮಲ್ಲಿಎಷ್ಟೇ ಸಂಪತ್ತಿದ್ದರೂ ಆರೋಗ್ಯ ಸಂಪತ್ತಿಲ್ಲವೆಂದರೆ ಜೀವನವೇ ಶೂನ್ಯ. ನಾವೀಗ ಆಯುಷ್‌ ಪದ್ಧತಿಯ ಪಾರಂಪರಿಕ ಬೇರನ್ನು ಗಟ್ಟಿಗೊಳಿಸಬೇಕಾಗಿದೆ. ಹಸಿರಿದ್ದರೆ ಮಾತ್ರ ಉಸಿರು, ನಿತ್ಯ ಹಸಿರಿನ ಆಹಾರ ತೆಗದುಕೊಂಡಾಗ ಮಾತ್ರ ಅದು ನಮ್ಮ ಜೀವನ ಹಸಿರಾಗಿಸುತ್ತದೆ ಎಂದರು.

ದೈವಿ ಸ್ವರೂಪ ಹೊಂದಿರುವ ಅನೇಕ ವೃಕ್ಷಗಳಿಗೂ ನಮ್ಮ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುವ ವನಸ್ಪತಿಗಳ ವನ ನಿರ್ಮಾಣ ಇಂದಿನ ಅಗತ್ಯವಾಗಿದೆ ಎಂದು ಸಮಗ್ರ ವಿಕಾಸ ಟ್ರಸ್ಟ್‌ನ ಅಧ್ಯಕ್ಷ ಉಮಾಪತಿ ಭಟ್ಟ ಹೇಳಿದರು.

ಮನೆಮದ್ದು ತಜ್ಞೆ ಶ್ಯಾಮಲಾ ಹೆಗಡೆ ಮಾತನಾಡಿ, ಭೂಮಿಯ ಮೇಲಿನ ಎಲ್ಲಸಸ್ಯಗಳು ಔಷಧೀಯ ಸಸ್ಯಗಳಾಗಿದೆ. ಅವುಗಳನ್ನು ಉಪಯೋಗಿಸುವ ವಿಧಾನ ಅವುಗಳಿಂದ ಔಷಧ ತಯಾರಿಸುವ ಕ್ರಮಗಳನ್ನು ನಾವಿಂದು ಕಲಿಯಬೇಕಾಗಿದೆ. ಹೊಟ್ಟೆನೋವಿಗೆ ಹಿಂಗ್ವಾಷ್ಟಕ ಚೂರ್ಣ, ತಲೆಕೂದಲಿನ ತೊಂದರೆಗೆ ಭೃಂಗರಾಜ ತೈಲ, ಆಮಲಕಿ ತೈಲ, ಕಾಲು ನೋವಿಗೆ ವೇದನಾ ಹರ ತೈಲ ಮೊದಲಾದವುಗಳನ್ನು ಮನೆಯಲ್ಲೆಮಾಡಬಹುದು ಎಂದರು. ಕಾರ್ಯಾಗಾರದಲ್ಲಿಪಾಲ್ಗೊಂಡವರಿಗೆ ಕೋವಿಡ್‌ ಜಾಗೃತಿ ಕರಪತ್ರ ,ಕಷಾಯಷೂರ್ಣ, ಮಾಸ್ಕ್‌ ವಿತರಿಸಲಾಯಿತು.

ನಾಗರಾಜ ಕೆರೆಯಮ್ಮನದೇವರ ಸ್ವಾಗತಿಸಿದರು. ವನಜಾಕ್ಷಿ ಕೆ ಪ್ರಾರ್ಥಿಸಿದರು. ಗೀತಾ ಆಲೂರು ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ