ಆ್ಯಪ್ನಗರ

ನಿತ್ಯ ಯೋಗದಿಂದ ಸದೃಢ ಆರೋಗ್ಯ

ನಿತ್ಯ ಯೋಗದಿಂದ ಸದೃಢ ಆರೋಗ್ಯ ವಿಕ ಸುದ್ದಿಲೋಕ ಯಲ್ಲಾಪುರ ಪಟ್ಟಣದ ತಟಗಾರ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಶನಿವಾರ ಯೋಗ ಸಪ್ತಾಹ ದಿನಾಚರಣೆ ...

Vijaya Karnataka 15 Dec 2019, 5:00 am
ಯಲ್ಲಾಪುರ : ಪಟ್ಟಣದ ತಟಗಾರ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿಶನಿವಾರ ಯೋಗ ಸಪ್ತಾಹ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web strong health with nitya yoga
ನಿತ್ಯ ಯೋಗದಿಂದ ಸದೃಢ ಆರೋಗ್ಯ


ಕಾರ್ಯಕ್ರಮದಲ್ಲಿಉಪನ್ಯಾಸಕರಾಗಿ ಆಗಮಿಸಿದ್ದ ಪತಂಜಲಿ ಯೋಗ ಸಮಿತಿಯ ಜಿಲ್ಲಾಯೋಗ ವಿಸ್ತಾರಕ ಸಂತೋಷ್‌ ಗುಡಿಗಾರ್‌ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಜೇನುಹುಳುಗಳು ಹೂವಿನ ಮಕರಂದವನ್ನು ಮಾತ್ರ ಹೀರಿ ಹೂವಿನ ಗಿಡವನ್ನು ಹಾಳುಮಾಡದೆ ಜೇನುತುಪ್ಪವನ್ನು ತಯಾರಿಸಿ ಪರರ ಉಪಯೋಗಕ್ಕೆ ಸಿಗುವಂತೆ ಮಾಡುತ್ತವೆ. ಮನುಷ್ಯರಾದ ನಾವು ಸಹ ಇದೇ ರೀತಿ ಪರರಿಗೆ ಸಹಾಯಕರಾಗಿ ಬದುಕಬೇಕು ಎಂದರು.

ವೃಕ್ಷಕ್ಕೆ ನೀರನ್ನು ಎರೆಯುವ ಮೂಲಕ ಪ್ರಾಂಶುಪಾಲ ಸಂಜಯ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯದಿಂದ ಇರಬೇಕಾದರೆ ನಾವೆಲ್ಲರೂ ಯೋಗವನ್ನು ನಮ್ಮ ನಿತ್ಯ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು. ಪ್ರಭಾರಿ ನಿಲಯ ಪಾಲಕ ಶಿವರಾಂ ಭಾಗವತ್‌, ಶಿಕ್ಷಕರಾದ ಶಂಕರಾನಂದ, ಮನೋಹರ್‌ ಎಲ್‌.ನಾಯಕ್‌, ಶಾಲಾ ಸಂಸತ್ತಿನ ಪ್ರತಿನಿಧಿ ದೀಕ್ಷಿತ್‌ ನಾಯ್ಕ, ಸ್ನೇಹ ರಾಥೋಡ್‌, ಶಾಲಾಮಕ್ಕಳು ಉಪಸ್ಧಿತರಿದ್ದರು. ರೇಣುಕಾ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ