ಆ್ಯಪ್ನಗರ

ಅರಣ್ಯ ಇಲಾಖೆಯವರು ದಬ್ಬಾಳಿಕೆ ನಡೆಸಿದರೆ ಹೋರಾಟ

ದಾಂಡೇಲಿ : ಅರಣ್ಯ ಇಲಾಖೆಯವರು ಕಾನೂನಿನ ಹೆಸರಲ್ಲಿವಿನಾಕಾರಣ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದು ಮುಂದುವರಿದರೆ ಸಾರ್ವಜನಿಕರ ಜತೆ ಸೇರಿ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಎಚ್ಚರಿಸಿದರು.

Vijaya Karnataka 11 Jul 2020, 5:00 am
ದಾಂಡೇಲಿ : ಅರಣ್ಯ ಇಲಾಖೆಯವರು ಕಾನೂನಿನ ಹೆಸರಲ್ಲಿವಿನಾಕಾರಣ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇದು ಮುಂದುವರಿದರೆ ಸಾರ್ವಜನಿಕರ ಜತೆ ಸೇರಿ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಎಚ್ಚರಿಸಿದರು.
Vijaya Karnataka Web struggle if the forest department oppresses
ಅರಣ್ಯ ಇಲಾಖೆಯವರು ದಬ್ಬಾಳಿಕೆ ನಡೆಸಿದರೆ ಹೋರಾಟ


ದಾಂಡೇಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಜನರು ಮನೆ ಕಟ್ಟಿಕೊಳ್ಳಲು, ರಸ್ತೆ ಮಾಡಿಕೊಳ್ಳಲು ಅರಣ್ಯ ಇಲಾಖೆಯವರು ಹಲವು ಕಾಯಿದೆ ತರುತ್ತಾರೆ. ಅನಾವಶ್ಯಕ ತಗಾದೆ ನೀಡುತ್ತಾರೆ. ಆದರೆ ಇವರು ಸರಕಾರದ ಕೋಟಿ ಕೋಟಿ ಹಣ ಖರ್ಚು ಮಾಡಿ ತಮಗೆ ಬೇಕಾದ ಸ್ಥಳಗಳಲ್ಲಿಬೇಕಾದಂತಹ ಬಂಗಲೆಗಳನ್ನು ನಿರ್ಮಿಸುತ್ತಿದ್ದಾರೆ. ತಾಲೂಕಿನ ಗಡಿ ಪ್ರದೇಶ ಕುಶಾವಳಿಗೆ ವಿದ್ಯುತ್‌ ಸಂಪರ್ಕದ ವ್ಯವಸ್ಥೆಯಾಗಿದೆಯಾದರೂ ಅರಣ್ಯ ಇಲಾಖೆಯವರು ಅವೈಜ್ಞಾನಿಕ ಕಾರಣ ನೀಡಿ ಅಲ್ಲಿಬೆಳಕು ಬಾರದಂತೆ ಮಾಡಿದ್ದಾರೆ. ಇಂತಹ ಹಲವಾರು ನಿದರ್ಶನಗಳಿವೆ.

ಜನರ ಬದುಕನ್ನು ಕಸಿದುಕೊಂಡು, ಅವರಿಗೆ ಸೌಲಭ್ಯ ನೀಡಲು ಸಾಧ್ಯವಾಗದ ರೀತಿಯಲ್ಲಿಕಾನೂನು ಜಾರಿ ಮಾಡುವುದು ಸರಿಯಲ್ಲ. ಜನರ ಮೇಲೆ ವಿನಾಕಾರಣ ದಬ್ಬಾಳಿಕೆ ನಡೆಸುತ್ತಿರುವ ಅರಣ್ಯ ಇಲಾಖೆಯವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಇದು ಮುಂದುವರಿದರೆ ಜನರ ಜೊತೆ ಸೇರಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದರು.

ಇಲ್ಲಿಅರಂಣ್ಯ ಇಲಾಖೆಯಲ್ಲಿಕೆಲಸ ಮಾಡುವವರು ಮಾತ್ರ ಹೊರಗಿನವರು. ಕೆಲ ವಾಚಮನ್‌ ಹಾಗೂ ಇತರೆ ನಾಲ್ಕನೆಯ ದರ್ಜೆಯ ಕೆಲಸಗಾರರನ್ನು ಸೇರಿಸಿಕೊಂಡರೂ ಅವರ ಮೇಲಿ ಅನಾವಶ್ಯಕ ಕಿರುಕುಳ ನಡೆಯುತ್ತಿದೆ. ಸಕಾರಣ ನೀಡದೇ ಹತ್ತಾರು ವರ್ಷ ಕೆಲಸ ಮಾಡಿದವರ್ನು ವಜಾ ಮಾಡಲಾಗುತ್ತಿದೆ. ಈ ಸಂಗತಿಯನ್ನು ಸಂಸದ ಅನಂತಕುಮಾರ ಹೆಗಡೆ, ಸಚಿವ ಶಿವರಾಮ ಹೆಬ್ಬಾರ ಅವರ ಗಮನಕ್ಕೆ ತರಲಾಗಿದೆ. ಅವರು ಜನರಿಗೆ ಯಾವುದೇ ಅಧಿಕಾರಿ ತೊಂದರೆ ನೀಡಿದರೂ ಸಹಿಸುವುದಿಲ್ಲಎಂದಿದ್ದಾರೆ. ಹಾಗಾಗಿ ಅರಣ್ಯಾಧಿಕಾರಿಗಳೂ ಎಚ್ಚೆತ್ತುಕೊಂಡು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವುದು ಒಳಿತು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ