ಶಿರಸಿ : ಪ್ರೌಢಶಾಲೆಯ ದೈಹಿಕ ಶಿಕ್ಷ ಕರೊಬ್ಬರು ಕಾಲೇಜಿನ ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿಯ ಮಾರಿಗುಡಿ ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ಶಿವಾಜಿ ವೃತ್ತದಲ್ಲಿರುವ ಮಾರಿಗುಡಿ ಸರಕಾರಿ ಪದವಿ ಪೂರ್ವ ಕಾಲೇಜು ಮಾರಿಕಾಂಬಾ ಪ್ರೌಢಶಾಲಾ ಆವಾರದಲ್ಲಿರುವ ಕಟ್ಟಡಕ್ಕೆ ಕೆಲ ದಿನಗಳ ಹಿಂದೆ ತಾತ್ಕಾಲಿಕವಾಗಿ ಸ್ಥಳಾಂತರವಾಗಿತ್ತು. ಹೀಗೆ ಕಾಲೇಜಿಗೆ ಬಂದ ವಿದ್ಯಾರ್ಥಿಗಳಲ್ಲಿ ಮೂವರು ವಿದ್ಯಾರ್ಥಿಗಳಿಗೆ ಮಾರಿಕಾಂಬಾ ಪ್ರೌಢಶಾಲೆಯ ದೈಹಿಕ ಶಿಕ್ಷ ಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ತಾನು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಹೊಡೆದಿಲ್ಲ. ಸುದೀರ್ಘ ಇತಿಹಾಸವಿರುವ ಶಾಲಾ ಆವಾರದ ಶಿಸ್ತಿನ ಬಗ್ಗೆ ತಿಳಿ ಹೇಳಿದ್ದೇನೆ ಎಂದು ಶಿಕ್ಷ ಕರು ಸ್ಪಷ್ಟಪಡಿಸಿದರು.
ಪ್ರೌಢಶಾಲಾ ಉಪಪ್ರಾಂಶುಪಾಲ ನಾಗಾರಾಜ ನಾಯ್ಕ, ಶಾಲಾ ಆವಾರದಲ್ಲಿ ಒಂದಷ್ಟು ಶಿಸ್ತು ಕಾಪಾಡಲಾಗಿದ್ದು, ಅದನ್ನು ಹೊಸದಾಗಿ ಇಲ್ಲಿಯ ಕಟ್ಟಡಕ್ಕೆ ಬಂದಿರುವ ಕಾಲೇಜು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ಪ್ರತಿಭಟನೆ ಬಿಟ್ಟು ತರಗತಿಗೆ ತೆರಳುವಂತೆ ಸೂಚಿಸಿದರು.
ಎಬಿವಿಪಿಯ ಕಮಲಾಕರ ಮರಾಠಿ, ಶ್ರೀಧರ ನಾಯ್ಕ, ಶಿವಕಾಂತ ಮುಂತಾದವರು ನೇತೃತ್ವ ವಹಿಸಿದ್ದರು.
ಇಲ್ಲಿಯ ಶಿವಾಜಿ ವೃತ್ತದಲ್ಲಿರುವ ಮಾರಿಗುಡಿ ಸರಕಾರಿ ಪದವಿ ಪೂರ್ವ ಕಾಲೇಜು ಮಾರಿಕಾಂಬಾ ಪ್ರೌಢಶಾಲಾ ಆವಾರದಲ್ಲಿರುವ ಕಟ್ಟಡಕ್ಕೆ ಕೆಲ ದಿನಗಳ ಹಿಂದೆ ತಾತ್ಕಾಲಿಕವಾಗಿ ಸ್ಥಳಾಂತರವಾಗಿತ್ತು. ಹೀಗೆ ಕಾಲೇಜಿಗೆ ಬಂದ ವಿದ್ಯಾರ್ಥಿಗಳಲ್ಲಿ ಮೂವರು ವಿದ್ಯಾರ್ಥಿಗಳಿಗೆ ಮಾರಿಕಾಂಬಾ ಪ್ರೌಢಶಾಲೆಯ ದೈಹಿಕ ಶಿಕ್ಷ ಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ತಾನು ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಹೊಡೆದಿಲ್ಲ. ಸುದೀರ್ಘ ಇತಿಹಾಸವಿರುವ ಶಾಲಾ ಆವಾರದ ಶಿಸ್ತಿನ ಬಗ್ಗೆ ತಿಳಿ ಹೇಳಿದ್ದೇನೆ ಎಂದು ಶಿಕ್ಷ ಕರು ಸ್ಪಷ್ಟಪಡಿಸಿದರು.
ಪ್ರೌಢಶಾಲಾ ಉಪಪ್ರಾಂಶುಪಾಲ ನಾಗಾರಾಜ ನಾಯ್ಕ, ಶಾಲಾ ಆವಾರದಲ್ಲಿ ಒಂದಷ್ಟು ಶಿಸ್ತು ಕಾಪಾಡಲಾಗಿದ್ದು, ಅದನ್ನು ಹೊಸದಾಗಿ ಇಲ್ಲಿಯ ಕಟ್ಟಡಕ್ಕೆ ಬಂದಿರುವ ಕಾಲೇಜು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ಪ್ರತಿಭಟನೆ ಬಿಟ್ಟು ತರಗತಿಗೆ ತೆರಳುವಂತೆ ಸೂಚಿಸಿದರು.
ಎಬಿವಿಪಿಯ ಕಮಲಾಕರ ಮರಾಠಿ, ಶ್ರೀಧರ ನಾಯ್ಕ, ಶಿವಕಾಂತ ಮುಂತಾದವರು ನೇತೃತ್ವ ವಹಿಸಿದ್ದರು.