ಆ್ಯಪ್ನಗರ

ವಿದ್ಯಾರ್ಥಿಗಳೆಲ್ಲ ವ್ಯಾಪಾರಿಗಳಾದ್ರು... ಪಾಲಕರು ಗ್ರಾಹಕರಾದ್ರು..

ಅಂಕೋಲಾ : ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ, ಆಲೂಗೆಡ್ಡೆ, ವಡಾ, ಚಿಫ್ಸ್‌, ಎಳನೀರು, ಶರಭತ್‌ ಎಲ್ಲ ಇದೆ ತಗೊಳ್ಳಿ ತಗೊಳ್ಳಿ ಅಮ್ಮಾ, ಬಿಸಿಬಿಸಿ ಎಗ್‌ರೈಸ್‌, ಬಾಯಿಲ್ಡ್‌ ಎಗ್‌, ತಗೊಳ್ಳಣ್ಣಾ, ಬಿಸಿ ಬಿಸಿ ಬಜ್ಜಿ, ವಡೆ 10 ರೂಪಾಯಿಗೆ ನಾಲ್ಕು... ಬನ್ನಿ ಸಾರ್‌...

Vijaya Karnataka 28 Oct 2018, 5:00 am
ಅಂಕೋಲಾ : ಈರುಳ್ಳಿ, ಮೆಣಸಿನಕಾಯಿ, ಟೊಮೆಟೊ, ಆಲೂಗೆಡ್ಡೆ, ವಡಾ, ಚಿಫ್ಸ್‌, ಎಳನೀರು, ಶರಭತ್‌ ಎಲ್ಲ ಇದೆ ತಗೊಳ್ಳಿ ತಗೊಳ್ಳಿ ಅಮ್ಮಾ, ಬಿಸಿಬಿಸಿ ಎಗ್‌ರೈಸ್‌, ಬಾಯಿಲ್ಡ್‌ ಎಗ್‌, ತಗೊಳ್ಳಣ್ಣಾ, ಬಿಸಿ ಬಿಸಿ ಬಜ್ಜಿ, ವಡೆ 10 ರೂಪಾಯಿಗೆ ನಾಲ್ಕು... ಬನ್ನಿ ಸಾರ್‌...
Vijaya Karnataka Web students are traders parents are consumers
ವಿದ್ಯಾರ್ಥಿಗಳೆಲ್ಲ ವ್ಯಾಪಾರಿಗಳಾದ್ರು... ಪಾಲಕರು ಗ್ರಾಹಕರಾದ್ರು..


ಇದು ಪಟ್ಟಣದ ನಿರ್ಮಲ ಹೃದಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳಲ್ಲಿ ವ್ಯವಹಾರ ಕುಶಲತೆ ಸಂವಹನ ಕಲೆ ಸಾಮಾಜಿಕ ಬದುಕಿನೊಂದಿಗೆ ಒಡನಾಟದ ಕೌಶಲ ಕಲಿಸುವುದರ ಜತೆಗೆ ಅವರಲ್ಲಿನ ಸೃಜನಶೀಲತೆ ಅನಾವರಣಗೊಳಿಸುವ ಉದ್ದೇಶದಿಂದ ಹಮ್ಮಿಕೊಂಡ ಸಮಾಜವಿಜ್ಞಾನ ವಸ್ತು ಪ್ರದರ್ಶನ ಮತ್ತು ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ..

ನಿರ್ಮಲ ಹೃದಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆಯಿಂದಲೇ ವಿಶೇಷ ಸಡಗರ-ಸಂಭ್ರಮ ಆರಂಭಗೊಂಡಿತ್ತು. ಅಲ್ಲಿ ಅಕ್ಷ ರಶಃ ಸಂತೆಯ ವಾತಾವರಣ ನಿರ್ಮಾಣಗೊಂಡಿತ್ತು. ಶಾಲೆಯ ಮಕ್ಕಳೆಲ್ಲ ವ್ಯಾಪಾರಿಯಾಗಿದ್ದರು. ಪೋಷಕರು ಊರವರೆಲ್ಲ ಗ್ರ್ರಾಹಕರಾಗಿದ್ದರು ಮಕ್ಕಳ ಸಂತೆ ಎಂಬ ಹೆಸರನ್ನು ಮೀರಿಸಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿತ್ತು.

ಮಕ್ಕಳ ಸಂತೆಯಲ್ಲಿ ವಿವಿಧ ಬಗೆಯ ಸೊಪ್ಪು, ತರಕಾರಿಗಳು, ಸಿಹಿತಿನಿಸುಗಳು, ತೆಂಗಿನಕಾಯಿ, ಹಣ್ಣುಗಳು, ಕಾಫಿ, ಟೀ, ಪಾನಿಪುರಿ ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಲಾಯಿತು. ಮಕ್ಕಳು ಸಾರ್ವಜನಿಕರಿಗೆ ಮಾರುತ್ತಿದ್ದ ವಸ್ತುಗಳ ವ್ಯಾಪಾರವು ನೈಜ ವ್ಯಾಪಾರಸ್ಥರನ್ನು ನಾಚಿಸುವಂತಿತ್ತು.

ಖರೀದಿ ಸಂಭ್ರಮ

ತರಕಾರಿ ಚೆನ್ನಾಗಿದೆ , ಸೊಪ್ಪು ಚೆನ್ನಾಗಿದೆ , ವ್ಯಾಪಾರ ಮಾಡಿ ಎಂಬ ಮಕ್ಕಳ ಕೂಗು ಶಾಲೆಯ ಆವಾರದಲ್ಲಿ ಸಾಮಾನ್ಯವಾಗಿತ್ತು. ಮಕ್ಕಳು, ದೊಡ್ಡವರು, ಶಿಕ್ಷ ಕರು ಎಲ್ಲರೂ ಮಕ್ಕಳು ಮಾರಾಟ ಮಾಡುತ್ತಿದ್ದ ವಿವಿಧ ಸಾಮಗ್ರಿಗಳನ್ನು ಖರೀದಿಸಿ ಸಂತಸಪಟ್ಟರು. ಸಾರ್ವಜನಿಕರು ಸಂತೆಯಲ್ಲಿ ಖರೀದಿ ಮಾಡಿ ಮಕ್ಕಳ ವ್ಯವಹಾರ ಕೌಶಲವನ್ನು ಪ್ರಶಂಸಿಸಿದರು. ಸಾರ್ವಜನಿಕರು ಮಕ್ಕಳ ಸಂತೆಯಲ್ಲಿ ಖರೀದಿ ಮಾಡಿ ಮಕ್ಕಳ ವ್ಯವಹಾರ ಕೌಶಲ ಪ್ರಶಂಸಿದರು.

ಒಟ್ಟಿನಲ್ಲಿ ಆಟ-ಪಾಠ ಗಳಿಗಷ್ಟೇ ಸೀಮಿತವಾಗಿದ್ದ ಮಕ್ಕಳಲ್ಲಿನ ಸೃಜನಶೀಲತೆಯನ್ನು ಮಕ್ಕಳ ಸಂತೆ ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ವಿಭಿನ್ನ ಪ್ರಯತ್ನಕ್ಕೆ ಈ ಶಾಲೆಯ ಶಿಕ್ಷ ಕರು ಮುಂದಾದರು. ಸಂದರ್ಭದಲ್ಲಿ ಜೈಹಿಂದ ಪ್ರೌಡಶಾಲೆಯ ಶಿಕ್ಷ ಕ ಪ್ರಭಾಕರ ಬಂಟ್‌, ದಿಲೀಪ ನಾಯಕ, ಶಾಲಾ ಮುಖೋಧ್ಯಾಪಕಿ ಮೊಂಟಿ, ಪಾಲಕರಾದ ನಾಗೇಶ ನಾಯ್ಕ, ಹೊನ್ನಪ್ಪ ನಾಯ್ಕ, ಶಿವಾನಂದ ನಾಯ್ಕ, ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ