ಆ್ಯಪ್ನಗರ

ಐಎನ್‌ಎಸ್‌ ವಜ್ರಕೋಶದಲ್ಲಿ ಹಾವು ಕಚ್ಚಿ ಸುಬೇದಾರ್‌ ಸಾವು

ಕಾರವಾರ : ಇಲ್ಲಿನ ಕದಂಬ ನೌಕಾನೆಲೆಗೆ ಸೇರಿದ ಐಎನ್‌ಎಸ್‌ ವಜ್ರಕೋಶದಲ್ಲಿ ಹಾವು ಕಚ್ಚಿ ಸುಬೇದಾರ್‌ ಒಬ್ಬರು ಮೃತಪಟ್ಟ ಘಟನೆ ಎರಡು ದಿನಗಳ ಹಿಂದೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಇನ್ನೊಬ್ಬ ಸುಬೇದಾರ್‌ ಸಹ ಅಸ್ವಸ್ಥಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

Vijaya Karnataka 3 Jul 2019, 8:25 pm
ಕಾರವಾರ : ಇಲ್ಲಿನ ಕದಂಬ ನೌಕಾನೆಲೆಗೆ ಸೇರಿದ ಐಎನ್‌ಎಸ್‌ ವಜ್ರಕೋಶದಲ್ಲಿ ಹಾವು ಕಚ್ಚಿ ಸುಬೇದಾರ್‌ ಒಬ್ಬರು ಮೃತಪಟ್ಟ ಘಟನೆ ಎರಡು ದಿನಗಳ ಹಿಂದೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಇನ್ನೊಬ್ಬ ಸುಬೇದಾರ್‌ ಸಹ ಅಸ್ವಸ್ಥಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
Vijaya Karnataka Web subedar death by snake bite on ins diamond
ಐಎನ್‌ಎಸ್‌ ವಜ್ರಕೋಶದಲ್ಲಿ ಹಾವು ಕಚ್ಚಿ ಸುಬೇದಾರ್‌ ಸಾವು


ಪಂಜಾಬ್‌ ಅಮೃತಸರ ಮೂಲದ ಬಲಬೀರ್‌ಸಿಂಗ್‌ ಮೃತಪಟ್ಟ ಸುಬೇದಾರ್‌. ಚಿಂತಾಜನಕ ಸ್ಥಿತಿಯಲ್ಲಿರುವ ಇನ್ನೊಬ್ಬ ನೌಕಾಧಿಕಾರಿಗೆ ಕದಂಬ ನೌಕಾನೆಲೆಯ ಐಎನ್‌ಎಸ್‌ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಹೆಸರನ್ನು ನೌಕಾಸೇನೆ ಬಹಿರಂಗಪಡಿಸಿಲ್ಲ.

ಐಎನ್‌ಎಸ್‌ ವಜ್ರಕೋಶವು ನೌಕಾಸೇನೆಯ ಡಿಫೆನ್ಸ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಆರ್ಗನೈಸೇಶನ್‌ (ಡಿಆರ್‌ಡಿಒ) ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿ ನೌಕಾಸೇನೆಗೆ ಅಗತ್ಯವಿರುವ ಮದ್ದು ಗುಂಡುಗಳು, ಕ್ಷಿಪಣಿ ಮತ್ತು ತಾಂತ್ರಿಕ ನೆರವನ್ನು ಒದಗಿಸಲಾಗುತ್ತದೆ. ವಜ್ರಕೋಶವು ಅಂಕೋಲಾ ತಾಲೂಕಿನ ಅಗಸೂರು ವ್ಯಾಪ್ತಿಯ ಕಾಡಿನಲ್ಲಿದ್ದು ಇಲ್ಲಿ ಜನಸಾಮಾನ್ಯರ ಪ್ರವೇಶ ನಿಷೇಧವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ