ಆ್ಯಪ್ನಗರ

ಉಪವಲಯ ಅರಣ್ಯಾಧಿಕಾರಿ ಸಂತೋಷಗೆ ಪ್ರಶಸ್ತಿ

ಹಳಿಯಾಳ : ಅರಣ್ಯ ಇಲಾಖೆಯ ಹಳಿಯಾಳ ವಿಭಾಗದ ದಾಂಡೇಲಿ ಶಹರ ಶಾಖೆಯಲ್ಲಿಕಳೆದ 4 ವರ್ಷಗಳಿಂದ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಜಿ.ಸಂತೋಷ ಅವರಿಗೆ ಇತ್ತೀಚೆಗೆ ಬೆಂಗಳೂರಿನ ಅರಣ್ಯ ಭವನದಲ್ಲಿನಡೆದ ಸಮಾರಂಭದಲ್ಲಿಅರಣ್ಯ ಸಚಿವ ಸಿ.ಸಿ.ಪಾಟೀಲ್‌ ಅವರು ಬಿ.ಮಾರಪ್ಪ ಪ್ರಶಸ್ತಿ ನೀಡಿದರು.

Vijaya Karnataka 30 Dec 2019, 5:00 am
ಹಳಿಯಾಳ : ಅರಣ್ಯ ಇಲಾಖೆಯ ಹಳಿಯಾಳ ವಿಭಾಗದ ದಾಂಡೇಲಿ ಶಹರ ಶಾಖೆಯಲ್ಲಿಕಳೆದ 4 ವರ್ಷಗಳಿಂದ ಉಪ ವಲಯ ಅರಣ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಜಿ.ಸಂತೋಷ ಅವರಿಗೆ ಇತ್ತೀಚೆಗೆ ಬೆಂಗಳೂರಿನ ಅರಣ್ಯ ಭವನದಲ್ಲಿನಡೆದ ಸಮಾರಂಭದಲ್ಲಿಅರಣ್ಯ ಸಚಿವ ಸಿ.ಸಿ.ಪಾಟೀಲ್‌ ಅವರು ಬಿ.ಮಾರಪ್ಪ ಪ್ರಶಸ್ತಿ ನೀಡಿದರು.
Vijaya Karnataka Web 4428251727 HLY 2_24
ಅರಣ್ಯ ಸಚಿವ ಸಿ.ಸಿ.ಪಾಟೀಲ್‌ ಅವರು ದಾಂಡೇಲಿ ಶಹರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಜಿ ಸಂತೋಷ್‌ ಅವರಿಗೆ ಬಿ. ಮಾರಪ್ಪ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಪಿಸಿಸಿಎಫ್‌ ಪುನಾಟಿ ಶ್ರೀಧರ ಮತ್ತಿತರರು ಹಾಜರಿದ್ದರು.


ಉಪ ವಲಯ ಅರಣ್ಯಾಧಿಕಾರಿ ತಮ್ಮ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿಮರಗಳ ಅಕ್ರಮ ಸಾಗಣೆ ಹಾಗೂ ಅರಣ್ಯ ಅತಿಕ್ರಮಣ, ವನ್ಯಪ್ರಾಣಿಗಳ ಅಕ್ರಮ ಬೇಟೆಗಳನ್ನು ತಡೆಗಟ್ಟುವಲ್ಲಿಪ್ರಮುಖ ಪಾತ್ರವನ್ನು ವಹಿಸುವುದರ ಜತೆಗೆ ಅಕ್ರಮವಾಗಿ ಸಾಗವಾನಿ ಮತ್ತು ಸೀಸಂ ಕಟ್ಟಿಗೆಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ವಾಹನ ಸಮೇತ ಬಂಧಿಸಿ ಅವರ ಮೇಲೆ ಅರಣ್ಯ ಕಾನೂನಿನ ಪ್ರಕಾರ ಪ್ರಕರಣಗಳನ್ನು ದಾಖಲಿಸಿದ್ದಕ್ಕಾಗಿ ಮತ್ತು ವನ್ಯ ಪ್ರಾಣಿಗಳ ಹತ್ಯೆ ಮಾಡಿ ಜಿಂಕೆ ಮಾಂಸ, ಚಿರತೆ ಚರ್ಮವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ಆರೋಪಿಗಳನ್ನು ವಶಕ್ಕೆ ಪಡೆಯುವುದರ ಜತೆಗೆ ದಾಂಡೇಲಿ ಶಾಖೆಯ ಕೇರವಾಡ ಗ್ರಾಮದಿಂದ ಅಕ್ರಮವಾಗಿ ಸಾಗಿಸುತ್ತಿರುವ ಮರಳನ್ನು ವಶಕ್ಕೆ ಪಡೆದು ಅಕ್ರಮ ಮರಳುಗಾರಿಕೆಯನ್ನು ತಡೆದಿದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಇಲಾಖೆಯು ತಿಳಿಸಿದೆ.

ಈ ವೇಳೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ, ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ ದವೇ, ವನ್ಯಜೀವಿ ವಿಭಾಗದ ಸಂಜಯ ಮೋಹನ್‌. ಬಿ ಮಾರಪ್ಪ ಟ್ರಸ್ಟ್‌ನ ಅಧ್ಯಕ್ಷ ಆರ್‌.ಎಂ.ಪಾಲಣ್ಣ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳ ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ