ಆ್ಯಪ್ನಗರ

ಸ್ಪರ್ಧಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಲಹೆ

ಅಂಕೋಲಾ : ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ಹಮ್ಮಿಕೊಳ್ಳುವ ಎಲ್ಲ ಸ್ಪರ್ಧಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರಿಯಾಶೀಲರಾಗಲು ಪ್ರಯತ್ನಿಸಬೇಕು ಎಂದು ಹುಬ್ಬಳ್ಳಿಯ ಪರ್ವೇಜ್‌ ಮುನ್ಸಿ ಹೇಳಿದರು.

Vijaya Karnataka 29 Nov 2018, 5:00 am
ಅಂಕೋಲಾ : ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ಹಮ್ಮಿಕೊಳ್ಳುವ ಎಲ್ಲ ಸ್ಪರ್ಧಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರಿಯಾಶೀಲರಾಗಲು ಪ್ರಯತ್ನಿಸಬೇಕು ಎಂದು ಹುಬ್ಬಳ್ಳಿಯ ಪರ್ವೇಜ್‌ ಮುನ್ಸಿ ಹೇಳಿದರು.
Vijaya Karnataka Web suggest participation in competitive activity
ಸ್ಪರ್ಧಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಸಲಹೆ


ತಾಲೂಕಿನ ಹಟ್ಟಿಕೇರಿಯ ಜೇಸೀ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.

ಉಕ ಜಿಲ್ಲಾ ಸಾರ್ವಜನಿಕ ಶಿಕ್ಷ ಣ ಇಲಾಖೆಯ ಉಪನಿರ್ದೇಶಕ ಎನ್‌.ಜಿ.ನಾಯಕ ಮಾತನಾಡಿ, ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪಾಲಕರ- ಅಧ್ಯಾಪಕ- ವಿದ್ಯಾರ್ಥಿಗಳ ಸಂಬಂಧ ತುಂಬಾ ಪ್ರಮುಖವಾದ್ದು. ಪಾಲಕರು ಶಾಲೆಯೊಂದಿಗೆ ನಿರಂತರ ಸಂಪರ್ಕ ಹೊಂದಿರಬೇಕು ಎಂದರು.

ಅವರ್ಸಾ ಎಜ್ಯುಕೇಶನ್‌ ಮತ್ತು ವೆಲ್‌ಪೇರ್‌ ಅಸೋಸಿಯೇಶನ್‌ನ ಅಧ್ಯಕ್ಷ ಮಂಗಲದಾಸ ಕಾಮತ್‌ ಅಧ್ಯಕ್ಷ ತೆ ವಹಿಸಿದ್ದರು.

ಅವರ್ಸಾ ಎಜ್ಯುಕೇಶನ್‌ ಮತ್ತು ವೆಲ್‌ಪೇರ್‌ ಅಸೋಸಿಯೇಶನ್‌ನ ಕಾರ್ಯದರ್ಶಿ ಲತಾ ಕಾಮತ ಇದ್ದರು. ಪ್ರಾಥಮಿಕ ಶಾಲಾ ಮುಖ್ಯಾಧ್ಯಾಪಕ ರಾಘವೇಂದ್ರ ಭಟ್‌ ಪರಿಚಯಿಸಿದರು. ಶಿಕ್ಷ ಕ ಮಂಜುನಾಥ ನಾಯ್ಕ ಸ್ವಾಗತಿಸಿದರು. ಶಿಕ್ಷ ಕಿ ಪ್ರಿಯಾ ನಾಯ್ಕ ಬಹುಮಾನಿತರ ಯಾದಿ ಓದಿದರು. ಶಿಕ್ಷ ಕ ರಾಘವೇಂದ್ರ ವೈದ್ಯ ಪಾಲಕರ ಕ್ರೀಡಾಕೂಟದ ಬಹುಮಾನಿತರ ಯಾದಿ ವಾಚಿಸಿದರು. ಹೈಸ್ಕೂಲ್‌ ಮುಖ್ಯಾಧ್ಯಾಪಕಿ ಮಂಜುಳಾ ನಾಯ್ಕ ದತ್ತಿನಿಧಿ ಬಹುಮಾನಿತರ ಯಾದಿ ಓದಿದರು. ಶಿಕ್ಷ ಕಿ ಶೀಲಾ ತಾಂಡೇಲ್‌ ವಂದಿಸಿದರು. ಸಕೀನಾ ಶೇಖ್‌ ನಿರೂಪಿಸಿದರು.

ಆಯ್ಕೆ ಮಾಡಿದ ಶಾಲೆಯ ಅತ್ಯುತ್ತಮ ಪಾಲಕರಾದ ನವೀನ ದೇವರಭಾವಿ, ಅನಂತ ಭಟ್‌, ಭಾರತಿ ನಾಯಕ, ಸಂತೋಷ ಕೇಣಿಕರ, ಭಾರತಿ ನಾಯ್ಕ, ಶೋಭಾ ದುರ್ಗೇಕರ, ಲೀಲೇಶ್ವರ ದುರ್ಗೇಕರ, ಸುಧಾಕರ ನಾಯ್ಕ, ಗುರುಪ್ರಸಾದ ರೇವಣಕರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ದೈಹಿಕ ಶಿಕ್ಷ ಕ ಮಂಜುನಾಥ ಶೇಡಗೇರಿ, ರೋಹನ ಶೆಟ್ಟಿ, ಊರಿನ ಪ್ರಮುಖರಾದ ಸ್ಮಿತಾ ಕಾಮತ, ಎನ್‌.ಆರ್‌.ಪೈ, ವಿನಾಯಕ ಕಾಮತ್‌, ಶಿವಾನಂದ ಕಾಮತ್‌, ಯೋಗಿತಾ ಕಾಮತ್‌, ಚಿತ್ರಾ ಪೈ, ಹಾಗೂ ಶಿಕ್ಷ ಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ