ಆ್ಯಪ್ನಗರ

ಮನಸೂರೆಗೊಂಡ ಬಿಜ್ಜೂರಿನ ಸುಗ್ಗಿ ರೂಪಕಗಳು

ಗೋಕರ್ಣ : ಸುಗ್ಗಿ ಉತ್ಸವದ ಜಾಗರಣೆ ಪ್ರಯುಕ್ತ ಹಮ್ಮಿಕೊಂಡ ಇಲ್ಲಿನ ಹಾಲಕ್ಕಿಗಳ ಬಿಜ್ಜೂರಿನ ಜಾಗರಣಾ ವೇಷಭೂಷಣಗಳು ದುಷ್ಕೃತ್ಯ, ಅನಾಚಾರ ಮತ್ತು ಕೊರತೆಯನ್ನು ಎತ್ತಿ ಹಿಡಿದುವಲ್ಲದೇ, ಅವನ್ನು ತಿದ್ದುವಲ್ಲಿ ಸಮಾಜದ ಪಾತ್ರದ ಬಗ್ಗೆಯೂ ಮನವರಿಕೆ ಮಾಡಿಕೊಟ್ಟವು.

Vijaya Karnataka 16 Dec 2022, 8:08 pm
ಗೋಕರ್ಣ : ಸುಗ್ಗಿ ಉತ್ಸವದ ಜಾಗರಣೆ ಪ್ರಯುಕ್ತ ಹಮ್ಮಿಕೊಂಡ ಇಲ್ಲಿನ ಹಾಲಕ್ಕಿಗಳ ಬಿಜ್ಜೂರಿನ ಜಾಗರಣಾ ವೇಷಭೂಷಣಗಳು ದುಷ್ಕೃತ್ಯ, ಅನಾಚಾರ ಮತ್ತು ಕೊರತೆಯನ್ನು ಎತ್ತಿ ಹಿಡಿದುವಲ್ಲದೇ, ಅವನ್ನು ತಿದ್ದುವಲ್ಲಿ ಸಮಾಜದ ಪಾತ್ರದ ಬಗ್ಗೆಯೂ ಮನವರಿಕೆ ಮಾಡಿಕೊಟ್ಟವು.
Vijaya Karnataka Web KWR-6 GKN 1 S
ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವ ಭಕ್ತರ ರೂಪಕ.


ಗೋಕರ್ಣದಲ್ಲಿ ಸುಮಾರು 2.5 ಕಿ.ಮೀ. ವಿಸ್ತಾರದ ಸಂಗಮದಲ್ಲಿನ ಹರಿಯದೇ ನಿಂತು ದುರ್ವಾಸನೆ ಬೀರುತ್ತಿರುವ ನೀರಿನಿಂದ ಸುತ್ತಮುತ್ತಲಿನ ಬಾವಿಗಳ ಕುಡಿಯುವ ನೀರಿಗೆ ತತ್ವಾರ್ಹ ಆಗಿರುವುದನ್ನು ಅದೆಷ್ಟೋ ಬಾರಿ ಹಲವಾರು ಕೊಳೆತ ನೀರನ್ನು ಸರಾಗವಾಗಿ ಹರಿಯಲು ಅನುವು ಮಾಡಿಕೊಡುವಂತೆ ಮಾಡಿದ ಮನವಿಗಳಿಗೆ ಬೆಲೆಯಿಲ್ಲದಂತೆ ಇದೀಗ ಬಿಜ್ಜೂರಿನ ಹಾಲಕ್ಕಿಗಳು ಸುಗ್ಗಿ ಹಗರಣದಲ್ಲಿ ಅಣಕು ಪ್ರದರ್ಶನ ನಡೆಸುವ ಮೂಲಕ ಸಮಸ್ಯೆಯ ಚಿತ್ರಣವನ್ನು ತೋರಿಸಿದರು. ರೂಪಕಗಳು ಕಲೆಗಾರಿಕೆ ಜತೆ ಜತೆಗೆ ಸದ್ಯದ ವ್ಯವಸ್ಥೆಯ ಕುರಿತೂ ತಿಳಿಸಿದವು.

ಮನುಷ್ಯ ಕಾಡಿನ ಸಂಪತ್ತನ್ನು ಹಾಳು ಮಾಡುತ್ತಿರುವುದು, ಅನವಶ್ಯಕ ಆಮಿಷಗಳಿಗೆ ಒಳಗಾಗುತ್ತಿರುವುದು, ಪುರಾಣ ಕಥನದ ರೂಪಕಗಳು ಇವೆಲ್ಲಾ ಜನರನ್ನು ಆಕರ್ಷಿಸಿದವು. ರಾತ್ರಿ ನಡೆದ ಈ ಸುಗ್ಗಿ ಜಾಗರಣೆ ಕಾರ್ಯಕ್ರಮದಲ್ಲಿ ಹಾಲಕ್ಕಿಗಳಷ್ಟೇ ಅಲ್ಲದೇ ಇತರ ಸಮುದಾಯವು ಪಾಲ್ಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ