ಆ್ಯಪ್ನಗರ

ಸ್ವರ ಮಲ್ಹಾರ್‌ ಶಾಸ್ತ್ರೀಯ ಗಾಯನ ಇಂದು

ಶಿರಸಿ : ಇಲ್ಲಿಯ ನಾವು ನೀವು ಬಳಗವು ಉದಯೋನ್ಮುಖ ಗಾಯಕರಿಂದ ಸ್ವರ ಮಲ್ಹಾರ್‌ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಗರದ ಸಾಮ್ರಾಟ್‌ ವಿನಾಯಕ ಸಭಾಂಗಣದಲ್ಲಿ ಆ.24ರ ಸಂಜೆ 5ಕ್ಕೆ ಏರ್ಪಡಿಸಿದೆ ಎಂದು ಸಂಘಟಕ ಪ್ರಮುಖ ವಿ. ಪಿ. ಹೆಗಡೆ ವೈಶಾಲಿ ಹೇಳಿದರು.

Vijaya Karnataka 24 Aug 2019, 5:00 am
ಶಿರಸಿ : ಇಲ್ಲಿಯ ನಾವು ನೀವು ಬಳಗವು ಉದಯೋನ್ಮುಖ ಗಾಯಕರಿಂದ ಸ್ವರ ಮಲ್ಹಾರ್‌ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಗರದ ಸಾಮ್ರಾಟ್‌ ವಿನಾಯಕ ಸಭಾಂಗಣದಲ್ಲಿ ಆ.24ರ ಸಂಜೆ 5ಕ್ಕೆ ಏರ್ಪಡಿಸಿದೆ ಎಂದು ಸಂಘಟಕ ಪ್ರಮುಖ ವಿ. ಪಿ. ಹೆಗಡೆ ವೈಶಾಲಿ ಹೇಳಿದರು.
Vijaya Karnataka Web swara malhar classic singing today
ಸ್ವರ ಮಲ್ಹಾರ್‌ ಶಾಸ್ತ್ರೀಯ ಗಾಯನ ಇಂದು


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ಯುಗಾದಿ ಉತ್ಸವವನ್ನು ವಿಭಿನ್ನವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ 1990ರಲ್ಲಿ ನಾವು ನೀವು ಬಳಗವನ್ನು ಆರಂಭಿಸಲಾಗಿತ್ತು. ಇತ್ತೀಚಿನ ಕೆಲ ವರ್ಷಗಳಲ್ಲಿ ಬಳಗದ ಚಟುವಟಿಕೆಗಳು ಕಡಿಮೆಯಾಗಿದ್ದವು. ಇನ್ನು ಮುಂದೆ ಬಳಗವು ನವಚೈತನ್ಯದೊಂದಿಗೆ ಸಂಗೀತ, ನಾಟಕಗಳಂತ ಕಾರ್ಯಕ್ರಮ ಸಂಘಟಿಸುವ ಮೂಲಕ ಸುಸಂಸ್ಕೃತ, ಸಭ್ಯ ಪ್ರೇಕ್ಷ ಕರಿಗೆ ಸಾಂಸ್ಕೃತಿಕ ರಂಜನೆ ನೀಡಲು, ಯುವ ಕಲಾವಿದರನ್ನು ಪ್ರೋತ್ಸಾಹಿಸಲು ನಿರ್ಧರಿಸಿದ್ದೇವೆ ಎಂದರು. ಆ.24ರ ಸಂಜೆ 5ಕ್ಕೆ ಯುವ ಕಲಾವಿದರಾದ ವಿನಾಯಕ ಹೆಗಡೆ ಮುತ್ಮುರ್ಡು ಮತ್ತು ರಾಘವ ಹೆಗಡೆ ಕೊರ್ಸೆ ಅವರಿಂದ ಶಾಸ್ತ್ರೀಯ ಗಾಯನ ಹಮ್ಮಿಕೊಳ್ಳಲಾಗಿದೆ. ಸತೀಶ ಹೆಗ್ಗಾರ ಹಾರ್ಮೋನಿಯಂ, ಗಣೇಶ ಭಾಗ್ವತ್‌ ಗುಂಡ್ಕಲ್‌ ತಬಲಾ ಸಾಥ್‌ ನೀಡುವರು ಎಂದರು. ಸಂಘಟಕರಾದ ಎಸ್‌.ಕೆ. ಭಾಗ್ವತ್‌ ಶಿರಸಿಮಕ್ಕಿ, ಸತೀಶ ಹೆಗಡೆ ಗೋಳಿಕೊಪ್ಪ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ