ಆ್ಯಪ್ನಗರ

ಅಧಿಕಾರಿಗಳಿಂದ ತಹಸೀಲ್ದಾರ ಕಚೇರಿ ಸ್ವಚ್ಛತೆ

ಜೊಯಿಡಾ : ಗಣರಾಜ್ಯೋತ್ಸವ ಪೂರ್ವಭಾವಿಯಾಗಿ ಜೊಯಿಡಾ ತಹಸೀಲ್ದಾರ ಕಚೇರಿ ಆವರಣದ ಸುತ್ತ ಸ್ವಚ್ಛತಾ ಕಾರ್ಯವನ್ನು ತಾಲೂಕಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ಗುರುವಾರ ಬೆಳಗ್ಗೆ ಕೈಗೊಂಡರು.

Vijaya Karnataka 24 Jan 2020, 5:00 am
ಜೊಯಿಡಾ : ಗಣರಾಜ್ಯೋತ್ಸವ ಪೂರ್ವಭಾವಿಯಾಗಿ ಜೊಯಿಡಾ ತಹಸೀಲ್ದಾರ ಕಚೇರಿ ಆವರಣದ ಸುತ್ತ ಸ್ವಚ್ಛತಾ ಕಾರ್ಯವನ್ನು ತಾಲೂಕಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ಗುರುವಾರ ಬೆಳಗ್ಗೆ ಕೈಗೊಂಡರು.
Vijaya Karnataka Web tahsildars office cleanup from officers
ಅಧಿಕಾರಿಗಳಿಂದ ತಹಸೀಲ್ದಾರ ಕಚೇರಿ ಸ್ವಚ್ಛತೆ


ಒಂದು ವಾರ ತಾಲೂಕಿನ ಎಲ್ಲಗ್ರಾಮ ಪಂಚಾಯಿತಿಗಳಲ್ಲಿಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಸುವಂತೆ ತಿಳಿಸಲಾಗಿದ್ದು, ಇಂದು ಜೊಯಿಡಾ ತಾ.ಪಂ. ಹಾಗೂ ತಹಸೀಲ್ದಾರ ಕಚೇರಿ ಆವರಣದ ಸುತ್ತ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಲಾಗುತ್ತಿದೆ.

ಕಳೆದ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿಅವಶ್ಯವಿರುವ ಸರಕಾರಿ ಕಟ್ಟಡಗಳಿಗೆ ಸುಣ್ಣ ಬಣ್ಣ ಮಾಡಿ ಒಂದು ವಾರ ಸ್ವಚ್ಛತಾ ಕಾರ್ಯ ಮಾಡುವಂತೆ ಹಳಿಯಾಳ ಜೊಯಿಡಾ ಶಾಸಕ ಆರ್‌.ವಿ.ದೇಶಪಾಂಡೆ ಸೂಚಿಸಿದ್ದರು.

ಈ ವೇಳೆ ಜೊಯಿಡಾ ತಹಸೀಲ್ದಾರ ಸಂಜಯ ಕಾಂಬಳೆ, ತಾ.ಪಂ. ಇಒ ಆನಂದ ಬಡಕುಂದ್ರಿ, ತಾಲೂಕಾ ಆರೋಗ್ಯ ಅಧಿಕಾರಿ ಸುಜಾತಾ ಉಕ್ಕಲಿ, ಬಿಇಒ ಪಿ.ಎಸ್‌.ಹಿರೇಮಠ, ತಾ.ಪಂ. ಮ್ಯಾನೇಜರ್‌ ಜಿ.ವಿ.ಭಟ್ಟ, ಜೊಯಿಡಾ ಪಿಡಿಒ ನಬಿಲಾಲ ಇನಾಂದಾರ ಮುಂತಾದವರು ಇದ್ದರು.

.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ