ಆ್ಯಪ್ನಗರ

'ತೆರಿಗೆ ಇಲಾಖೆ ಪಕ್ಷ ದ ಅಡಿಯಾಳಲ್ಲ '

ಸಿದ್ದಾಪುರ :ಆದಾಯ ತೆರಿಗೆ ಇಲಾಖೆ ಯವುದೇ ಪಕ್ಷ ದ ಅಡಿಯಾಳಲ್ಲ ಅದು ಸ್ವತಂತ್ರ ಸಂಸ್ಥೆಯಾಗಿದ್ದು ಭೀಮಣ್ಣ ನಾಯ್ಕ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತ ಬಿಜೆಪಿ ದಾಳಿ ನಡೆಸಲು ಪ್ರೇರೆಪಿಸಿದೆ ಎಂದು ಹೇಳುತ್ತಿರುವುದನ್ನು ಖಂಡಿಸುವುದಾಗಿ ಬಿಜೆಪಿ ಜಿಲ್ಲಾ ವಕ್ತಾರ ರವಿ ಹೆಗಡೆ ಹೂವಿನಮನೆ ಹೇಳಿದರು.

Vijaya Karnataka 5 May 2018, 5:00 am
ಸಿದ್ದಾಪುರ :ಆದಾಯ ತೆರಿಗೆ ಇಲಾಖೆ ಯವುದೇ ಪಕ್ಷ ದ ಅಡಿಯಾಳಲ್ಲ ಅದು ಸ್ವತಂತ್ರ ಸಂಸ್ಥೆಯಾಗಿದ್ದು ಭೀಮಣ್ಣ ನಾಯ್ಕ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತ ಬಿಜೆಪಿ ದಾಳಿ ನಡೆಸಲು ಪ್ರೇರೆಪಿಸಿದೆ ಎಂದು ಹೇಳುತ್ತಿರುವುದನ್ನು ಖಂಡಿಸುವುದಾಗಿ ಬಿಜೆಪಿ ಜಿಲ್ಲಾ ವಕ್ತಾರ ರವಿ ಹೆಗಡೆ ಹೂವಿನಮನೆ ಹೇಳಿದರು.
Vijaya Karnataka Web tax department is not the party
'ತೆರಿಗೆ ಇಲಾಖೆ ಪಕ್ಷ ದ ಅಡಿಯಾಳಲ್ಲ '


ಅವರು ಶುಕ್ರವಾರ ಪಟ್ಟಣದ ಪಕ್ಷ ದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ತಮಗೆ ಸಂಬಂಧಿಸಿ ಐಟಿ ದಾಳಿ ಏಕೆ ಆಗಿದೆ ಎನ್ನುವುದು ಭೀಮಣ್ಣ ನಾಯ್ಕರಿಗೆ ಗೊತ್ತಿದೆ. ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಲ್ಲಿಸಿರುವುದಕ್ಕೂ ನಾಮಪತ್ರ ಸಲ್ಲಿಸುವಾಗ ಅಫಡಿವೀಟ್‌ನಲ್ಲಿರುವ ಮಾಹಿತಿಗೂ ವ್ಯತ್ಯಾಸ ಕಂಡುಬಂದಾಗ ಚುನಾವಣೆ ಆಯೋಗ ಪರಿಶೀಲನೆ ಮಾಡುತ್ತದೆ ಅಲ್ಲಿ ವ್ಯತ್ಯಾಸ ಬಂದ ಕಾರಣ ದಾಳಿ ನಡೆದಿದೆ ಹಾಗಿದ್ದೂ ಬಿಜೆಪಿ ದಾಳಿ ನಡೆಸಲು ಪ್ರೇರೆಪಿಸಿದೆ ಎಂದು ಹೇಳುತ್ತ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವುದು ಅವರ ಹತಾಶ ಮನೋಭಾವನೆ¿ ತೋರಿಸುತ್ತದೆ ಎಂದು ಹೇಳಿದ ಅವರು ಶಾಸಕರಾಗಿ ವಿಶ್ವೇಶ್ವರ ಹೆಗಡೆ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡಿಲ್ಲ ಎನ್ನುವ ವಿರೋಧಪಕ್ಷ ದವರ ಹೇಳಿಕೆ ನಿರಾಧಾರ. ರಾಜ್ಯದ ಕಾಂಗ್ರೆಸ್‌ ಸರಕಾರದ ದ್ವಿಮುಖ ನೀತಿಯ ನಡುವೆಯೂ ಶಾಸಕರು ಸಾಕಷ್ಟು ಅಭಿವೃದ್ಧಿ ಕಾಮಗಾರಿ ತಂದಿದ್ದಾರೆ ಎಂದರು.

ರಾಮಕೃಷ್ಣ ಹೆಗಡೆ ಪುತ್ಥಳಿಗೆ ಕಾಗೇರಿಯವರು ಮಾಲಾರ್ಪಣೆ ಮಾಡಿದ ಕುರಿತು ಶಶಿಭೂಷಣ ಹೆಗಡೆ ಟೀಕಿಸುತ್ತಾರೆ. ಹೆಗಡೆ ಕುಟುಂಬದವರಿಗೆ ಪ್ರಾತಿನಿಧ್ಯ ಕೊಡಬೇಕು ಎಂದು ಬಿಜೆಪಿ 2 ಬಾರಿ ಅವರು ಪಕ್ಷ ದ ಕಾರ್ಯಕರ್ತರಾಗಿಲ್ಲದಿದ್ದರೂ ಕುಮಟಾದಲ್ಲಿ ಅವರಿಗೆ ಟಿಕೇಟ್‌ ಕೊಟ್ಟಿತ್ತು. ರಾಜ್ಯ ಯುವಮೋರ್ಚಾ ಉಪಾಧ್ಯಕ್ಷ ರನ್ನಾಗಿಸಿತ್ತುಎಂದರು.

ನಾಗರಾಜ ನಾಯ್ಕ, ಮಾರುತಿ ನಾಯ್ಕ ಹೊಸೂರು, ಗುರುರಾಜ ಶಾನಭಾಗ್‌, ದಿವಾಕರ ನಾಯ್ಕ, ಮಂಜುನಾಥ ಭಟ್ಟ, ಸುರೇಶ ಬಾಲಿಕೊಪ್ಪ ಮುಂತಾದವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ